ಧಾರಾಕಾರ ಮಳೆ ಹಿನ್ನೆಲೆ: ಭದ್ರಾ ಜಲಾಶಯದ ಗೇಟ್ ಮತ್ತೆ ಓಪನ್

ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ನಂತರ, ಅಧಿಕಾರಿಗಳು ಎಲ್ಲಾ ನಾಲ್ಕು ಕ್ರೆಸ್ಟ್ ಗೇಟ್‌ಗಳನ್ನು ತೆರೆಯುವ ಮೂಲಕ 8,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ.
ಭದ್ರ ಜಲಾಶಯ
ಭದ್ರ ಜಲಾಶಯ
Updated on

ಶಿವಮೊಗ್ಗ: ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ನಂತರ, ಅಧಿಕಾರಿಗಳು ಎಲ್ಲಾ ನಾಲ್ಕು ಕ್ರೆಸ್ಟ್ ಗೇಟ್‌ಗಳನ್ನು ತೆರೆಯುವ ಮೂಲಕ 8,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ.

ಈ ಋತುವಿನಲ್ಲಿ ಎರಡನೇ ಬಾರಿ ಬಲವಂತವಾಗಿ ಗೇಟ್ ಗಳನ್ನು ತೆರೆಯಲಾಗಿದೆ. ಬುಧವಾರ ಬೆಳಗ್ಗೆ ಭದ್ರಾ ಜಲಾಶಯದಲ್ಲಿ 185.11 ಟಿಎಂಸಿ ಅಡಿ ನೀರು ತುಂಬಿತ್ತು, ಜಲಾಶಯದ ಗರಿಷ್ಠ ಮಟ್ಟ 186 ಟಿಎಂಸಿಯಾಗಿದೆ. ಜಲಾಶಯದ ಒಳಹರಿವು 14,304 ಕ್ಯೂಸೆಕ್ ಮತ್ತು ಹೊರಹರಿವು 8,251 ಕ್ಯೂಸೆಕ್ ಆಗಿತ್ತು.

ಸುಮಾರು 8,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದೇವೆ ಮತ್ತು ನೀರಿನ ಒಳಹರಿವನ್ನು ಪರಿಗಣಿಸಿ, ನಾವು 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬಹುದು ಎಂದು ಜಲಾಶಯದ ಕಾರ್ಯಕಾರಿ ಎಂಜಿನೀಯರ್ ಮಂಜುನಾಥ್ ಹೇಳಿದ್ದಾರೆ. 

ಬುಧವಾರ ಲಿಂಗನಮಕ್ಕಿ ಜಲಾಶಯದಲ್ಲಿನ ನೀರಿನ ಮಟ್ಟವು 1,819 ಟಿಎಂಸಿಎಫ್‌ನ ಗರಿಷ್ಠ ನೀರಿನ ಮಟ್ಟಕ್ಕಿಂತ 1,814 ಟಿಎಂಸಿ ಅಡಿಗಳಷ್ಟಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com