ಕಾರವಾರ: ಅಳಿವಿನಂಚಿನಲ್ಲಿರುವ ಅಪರೂಪದ ಪೆಸಿಫಿಕ್ ರಿಡ್ಲೆ ಕಡಲಾಮೆಯ ಮೃತದೇಹವೊಂದು ಕಾರವಾರದಲ್ಲಿ ಪತ್ತೆಯಾಗಿದೆ. ಮೀನುಗಾರರು ಬೀಸಿದ್ದ ಬಲೆಗೆ ಸಿಕ್ಕು ಕಾರವಾರದ ಕೋಡಿಭಾಗ್ ಬ್ರಿಡ್ಜ್ ಸಮೀಪ ಆಮೆ ಮೃತದೇಹ ಸಿಕ್ಕಿದೆ.
ಭಾರತದ ಪೂರ್ವ ಕರಾವಳಿ ರಾಜ್ಯ ಒಡಿಶಾದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಡಲಾಮೆಗಳು ಕಾಣಿಸಿಕೊಳ್ಳುತ್ತದೆ. ಇವನ್ನು ಸಮುದ್ರ ಕಲ್ಮಶಗಳನ್ನು ಶುದ್ದೀಕರಿಸುವ ಆಮೆಗಳು ಎಂದೇ ಗುರುತಿಸಲಾಗುತ್ತದೆ. ಲೆಪಿಡೊಕೆಲಿಸ್ ಓಲಿವೆಸಿ ಎಂಬ ವೈಜ್ಞಾನಿಕ ಹೆಸರುಳ್ಳ ಈ ಕಡಲಾಮೆ ಸಂತತಿ ಕರ್ನಾಟಕದಲ್ಲಿ ಕಾಣಿಸಿಕೊಳ್ಳುವುದು ಅಪರೂಪ.
ರಾಜ್ಯದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮೀನುಗಾರಿಕೆಯಿಂದ ಈ ಕಡಲಾಮೆಗಳ ಸಂತತಿ ನಾಶವಾಗುತ್ತಿದೆ ಎನ್ನಲಾಗಿದೆ. ಜತೆಗೆ ಜನರು ಈ ಆಮೆಗಳನ್ನು ತಿನ್ನುವುದಕ್ಕಾಗಿಯೂ ಬೇಟೆಯಾಡುತ್ತಾರೆ. ಅರಣ್ಯ ಇಲಾಖೆ ಈ ಆಮೆಗಳ ಬೇಟೆ ನಿಷೇಧಿಸಿದ್ದರೂ ರಾಜ್ಯದಲ್ಲಿ ಇವುಗಳ ಬೇಟೆ ಕಾನೂನುಬಾಹಿರವಾಗಿ ನಡೆದಿದೆ ಎಂದು ವರದಿಯಾಗಿದೆ.
Advertisement