ಮಂಡ್ಯ: 'ಮಂಡ್ಯದ ಭಗೀರಥ' ಎಂದೇ ಪ್ರಸಿದ್ಧರಾಗಿರುವ ಕಾಮೇಗೌಡ ಅವರೊಂದಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಇಂದು ಒಂದು ಗಂಟೆ ಕಾಲ ವಿಡಿಯೋ ಸಂವಾದ ನಡೆಸಿದರು.
ಅವರ ಸಾಧನೆಗಳ ಬಗ್ಗೆ ಮನ್ ಕಿ ಬಾತ್ ಕಾರ್ಯಕ್ರಮ ಮತ್ತು ಮಾಧ್ಯಮ ವರದಿಗಳನ್ನು ಗಮನಿಸಿದ ನಂತರ ಕೇಂದ್ರ ಸಚಿವರು ಕಾಮೇಗೌಡರನ್ನು ಸಂಪರ್ಕಿಸಿ ಅಭಿನಂದಿಸಿದರು.
84 ರ ವಯಸ್ಸಿನಲ್ಲೂ ಮತ್ತಷ್ಟು ಪ್ರಕೃತಿಯ ಸೇವೆ ಮಾಡುವ ಹುಮಸ್ಸು ಹೊಂದಿರುವ ಕಾಮೇಗೌಡರು ನಿರ್ಮಿಸಿವ ೧೪ ಕೆರಗಳ ಬಗೆಗೂ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಕಾಮೇಗೌಡ ಜಲಸಂರಕ್ಷಣೆಗಾಗಿ ಯಾವ ಜವಾಬ್ದಾರಿ ಕೊಟ್ಟರೂ ತಾವು ನಿಭಾಯಿಸುವುದಾಗಿ ಹೇಳಿದ್ದಾರೆ.
Advertisement