ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ ಜಯ ಸಿ.ಸುವರ್ಣ ನಿಧನ

ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ  ಅಧ್ಯಕ್ಷ, ಬಿಲ್ಲವ ಮಹಾಮಂಡಲ ಸಂಸ್ಥಾಪಕ ಅಧ್ಯಕ್ಷ, ಕುದ್ರೋಳಿ  ಶ್ರೀ ಗೋಕರ್ಣನಾಥ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಸಿ ಸುವರ್ಣ( 82) ಅವರು ಮುಂಬೈನಲ್ಲಿ ಬುಧವಾರ ನಿಧನರಾದರು.
ಜಯ ಸಿ ಸುವರ್ಣ
ಜಯ ಸಿ ಸುವರ್ಣ

ಮಂಗಳೂರು: ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ  ಅಧ್ಯಕ್ಷ, ಬಿಲ್ಲವ ಮಹಾಮಂಡಲ ಸಂಸ್ಥಾಪಕ ಅಧ್ಯಕ್ಷ, ಕುದ್ರೋಳಿ  ಶ್ರೀ ಗೋಕರ್ಣನಾಥ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಸಿ ಸುವರ್ಣ( 82) ಅವರು ಮುಂಬೈನಲ್ಲಿ ಬುಧವಾರ ನಿಧನರಾದರು.

ಮೃತರಿಗೆ ಅವರ ಪತ್ನಿ ಮತ್ತು ನಾಲ್ಕು ಗಂಡು ಮಕ್ಕಳಿದ್ದಾರೆ.

ಸುವರ್ಣ ಮುಂಬೈಯಲ್ಲಿ ಹೋಟೆಲ್ ವ್ಯವಹಾರ ಹೊಂದಿದ್ದರು. ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಇವರು ಮುಂಬೈನ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಅಭಿವೃದ್ಧಿಯ ಪ್ರೇರಕ ಶಕ್ತಿಯಾಗಿದ್ದರು. ಅವರು ಮಾಜಿ ಕೇಂದ್ರ ಸಚಿವರು ಮತ್ತು ಹಿರಿಯ ಬಿಲ್ಲವ ನಾಯಕ  ಬಿ ಜನಾರ್ಧನ ಪೂಜಾರಿ ಅವರ ಆಪ್ತರಾಗಿದ್ದರು.

ಮುಂಬೈನ ಬಿಲ್ಲವ ಭವನ ಮತ್ತು ಮುಲ್ಕಿಯ ಬಿಲ್ಲವ ಮಹಾಮಂಡಲ ಭವನ ನಿರ್ಮಾಣದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com