ಹಾವೇರಿ: ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ನದಿ ಪಾಲು, ಮುಂದುವರೆದ ಶೋಧ ಕಾರ್ಯ

ತುಂಗಭದ್ರಾ ನದಿ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಣನತಂಬಿ-ನಿಟ್ಟೂರು ಕ್ರಾಸ್ ಗ್ರಾಮ ಬಳಿ ಸೋಮವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹಾವೇರಿ:ತುಂಗಭದ್ರಾ ನದಿ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಇಬ್ಬರು ಯುವಕರು ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಣನತಂಬಿ-ನಿಟ್ಟೂರು ಕ್ರಾಸ್ ಗ್ರಾಮ ಬಳಿ ಸೋಮವಾರ ನಡೆದಿದೆ.

ಆರೆಮಲ್ಲಾಪುರ ಗ್ರಾಮದ ಬೆಟ್ಟಪ್ಪ ಮೋಹನ್ ಮುಳ್ಳಿನ(25), ಮತ್ತು ಜಗದೀಶ ವೆಂಕಪ್ಪ (23) ನದಿ ಪಾಲಾದವರು.

ಕೋಣನತಂಬಿಗಿ - ನಿಟ್ಟೂರು ಕ್ರಾಸ್ ತುಂಗಭದ್ರಾ ನದಿ ನೀರಿನಲ್ಲಿ ಮರಳು ತುಂಬಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಎರಡು ಎತ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ತಿಳಿದು ಬಂದಿದೆ. 

ಸಧ್ಯ ಯುವಕರ ಶೋಧ ಕಾರ್ಯಾಚರಣೆ ಮುಂದುವರಿದಿದ್ದು ರಾಣಿಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com