ಎಂ.ಎಸ್.ಧೋನಿಗೆ ಆರ್ಥಿಕ ಸಹಾಯ ಮಾಡಿದ್ದರಂತೆ 'ರೆಬೆಲ್ ಸ್ಟಾರ್' ಅಂಬರೀಷ್!

ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಕಲಿಯುಗದ ಕರ್ಣ ಎಂದು ಕರೆಯುತ್ತಿದ್ದರು. ಕಷ್ಟ ಎಂದು ಹೇಳಿಕೊಂಡು ಬಂದವರನ್ನು ಅವರು ಬರಿಗೈಯಲ್ಲಿ ಕಳುಹಿಸುವುದಿಲ್ಲ ಎಂದು ಅನೇಕರು ಅವರನ್ನು ಕೊಂಡಾಡುತ್ತಾರೆ.
ರೆಬೆಲ್ ಸ್ಟಾರ್ ಅಂಬರೀಷ್
ರೆಬೆಲ್ ಸ್ಟಾರ್ ಅಂಬರೀಷ್

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಕಲಿಯುಗದ ಕರ್ಣ ಎಂದು ಕರೆಯುತ್ತಿದ್ದರು. ಕಷ್ಟ ಎಂದು ಹೇಳಿಕೊಂಡು ಬಂದವರನ್ನು ಅವರು ಬರಿಗೈಯಲ್ಲಿ ಕಳುಹಿಸುವುದಿಲ್ಲ ಎಂದು ಅನೇಕರು ಅವರನ್ನು ಕೊಂಡಾಡುತ್ತಾರೆ.

ಅಂಬರೀಷ್ ಅವರು ಹಿಂದೊಮ್ಮೆ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿಯವರಿಗೂ ಸಹಾಯ ಮಾಡಿದ್ದರಂತೆ, ಹೀಗೆಂದು ಅವರ ಪತ್ನಿ ಸಂಸದೆ ಸುಮಲತಾ ಹೇಳಿಕೊಂಡಿದ್ದಾರೆ, ಪತ್ರಿಕೆಯೊಂದರಲ್ಲಿ ಬಂದ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2004ರಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋಗಿದ್ದ ಅಂಬರೀಷ್ ಅವರು ಪಂದ್ಯ ಮುಗಿದ ಮೇಲೆ ಧೋನಿಯವರ ಆಟವನ್ನು ನೋಡಿ ಮೆಚ್ಚಿದ್ದರು. ಆ ಸಮಯದಲ್ಲಿ ಧೋನಿಯವರು ಕ್ರಿಕೆಟ್ ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ. ಆರ್ಥಿಕವಾಗಿ ಕಷ್ಟದಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com