ಗ್ರಾಮೀಣ ಸೇವೆ ವಿಳಂಬಕ್ಕೆ ಎಂಬಿಬಿಎಸ್ ವಿದ್ಯಾರ್ಥಿಗಳು ಅಸಮಾಧಾನ

ಇಂಟರ್ನ್‌ಶಿಪ್ ಪೂರ್ಣಗೊಳಿಸಿದ್ದ ತಮ್ಮ ಒಂದು ವರ್ಷದ ಗ್ರಾಮೀಣ ಸೇವೆಯ ಉದ್ಯೋಗಕ್ಕಾಗಿ ಕಾಯುತ್ತಿರುವ 2015 ಬ್ಯಾಚ್‌ನ ಎಂಬಿಬಿಎಸ್ ಪದವೀಧರರು, ತಮ್ಮ ಕೌನ್ಸಲಿಂಗ್ ಗಳು ಐದು ತಿಂಗಳ ಕಾಲ ವಿಳಂಬವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಇಂಟರ್ನ್‌ಶಿಪ್ ಪೂರ್ಣಗೊಳಿಸಿದ್ದ ತಮ್ಮ ಒಂದು ವರ್ಷದ ಗ್ರಾಮೀಣ ಸೇವೆಯ ಉದ್ಯೋಗಕ್ಕಾಗಿ ಕಾಯುತ್ತಿರುವ 2015 ಬ್ಯಾಚ್‌ನ ಎಂಬಿಬಿಎಸ್ ಪದವೀಧರರು, ತಮ್ಮ ಕೌನ್ಸಲಿಂಗ್ ಗಳು ಐದು ತಿಂಗಳ ಕಾಲ ವಿಳಂಬವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕ್ರಿಯೆಯು ಜನವರಿಯಲ್ಲಿ ಪ್ರಾರಂಭವಾಗಬೇಕಿದ್ದರೂ, ಅದು ಈಗ ತಾನೆ ಪ್ರಾರಂಭವಾಗಿದೆ. , ಇದು ಅವರ ಸೇವಾ ಅವಧಿಯನ್ನು ಮತ್ತಷ್ಟು ವಿಳಂಬಗೊಳಿಸುತ್ತದೆ. ಇದು ಅವರ ಶೈಕ್ಷಣಿಕ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುತ್ತದೆ, ಇದು ಅವರ ಪಿಜಿ ಪ್ರವೇಶ ಸಿದ್ಧತೆಗಳಿ ಸಹ ಅಡ್ಡಿಯಾಗಲಿದೆ.

"ನಾವು ಈ ವರ್ಷ ಫೆಬ್ರವರಿ 1 ರೊಳಗೆ ನಮ್ಮ ಗ್ರಾಮೀಣ ಸೇವೆಯನ್ನು ಪ್ರಾರಂಭಿಸಿ ಮುಂದಿನ ವರ್ಷ ಜನವರಿ 30 ರೊಳಗೆ ಪೂರ್ಣಗೊಳಿಸಬೇಕಾಗಿತ್ತು. ಈ ಪ್ರಕ್ರಿಯೆಯನ್ನು ಪ್ರಾರಂಭಿಸುವುದನ್ನು ಸರ್ಕಾರ ನಿರ್ಲಕ್ಷಿಸಿದೆ ಮತ್ತು ಆರಂಭದಲ್ಲಿ ಕರ್ನಾಟಕ ವೈದ್ಯಕೀಯ ಮಂಡಳಿ ನೋಂದಣಿಯನ್ನು ಸಹ ನೀಡಲಿಲ್ಲ. ಈಗ, ನಮ್ಮಲ್ಲಿ ಹಲವಾರು ಜನರು ನೀಟ್ ಪಿಜಿ ಪರೀಕ್ಷೆಗಳಿಗೆ ಕೋಚಿಂಗ್ ಗಾಗಿ  ಸೇರಿಕೊಂಡಾಗ, ಅವರು ನಮ್ಮನ್ನು ಗ್ರಾಮೀಣ ಸೇವೆಗೆ ಕರೆಯುತ್ತಿದ್ದಾರೆ. ಇದಲ್ಲದೆ, 3,000 ವಿದ್ಯಾರ್ಥಿಗಳಿಗೆ ಕೇವಲ 1,700 ಹುದ್ದೆಗಳು ಸರ್ಕಾರದಲ್ಲಿವೆ. ಉಳಿದವರ ಕಥೆ ಏನು?" ಕರ್ನಾಟಕ ನಿವಾಸಿ ವೈದ್ಯರ ಸಂಘದ  ಸದಸ್ಯ ಡಾ. ದಯಾನಂದ್ ಸಾಗರ್ ಕೇಳಿದ್ದಾರೆ.

“ಈ ವರ್ಷ ಫೆಬ್ರವರಿ 15 ರಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, 2015 ರ ಎಂಬಿಬಿಎಸ್ ಬ್ಯಾಚ್ ಕಡ್ಡಾಯ ಸೇವಾ ಕಾಯ್ದೆ 2012 ರ ಪ್ರಕಾರ ಕಡ್ಡಾಯ ಸೇವೆಗೆ ಒಳಪಡಬೇಕಾಗಿದೆ ಎಂದು ಹೇಳಿದೆ. ಈ ಕಾಯ್ದೆ ಜುಲೈ 24, 2015 ರಂದು ವೈದ್ಯಕೀಯ ಕೋರ್ಸ್‌ಗಳಿಗೆ ದಾಖಲಾದವರಿಗೆ ಅನ್ವಯಿಸುತ್ತದೆ.  ಆದಾಗ್ಯೂ, ಕೆಲವರು ಈ ಮೊದಲು ದಾಖಲಾಗಿದ್ದರು. ಬ್ಯಾಚ್ ಅನ್ನು ಹೇಗೆ ವಿಂಗಡಿಸಬಹುದು? ಈ ವಿಷಯ ನ್ಯಾಯಾಲಯದಲ್ಲಿ ಬಾಕಿ ಇದೆ ಮತ್ತು ಈ ಮಧ್ಯೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದೆ ಬಂದು ಸೇವೆಗಾಗಿ ಸಮಾಲೋಚನೆ ಆರಂಭಿಸಿದೆ ”ಎಂದು ಕರ್ನಾಟಕ ಅಸೋಸಿಯೇಷನ್ ​​ಆಫ್ ಹೌಸ್ ಸರ್ಜನ್ಸ್‌ನ ಕಾರ್ಯನಿರ್ವಾಹಕ ಸದಸ್ಯ ಡಾ. ಸೂರ್ಯ ಬಿ.ಎನ್. ಹೇಳಿದ್ದಾರೆ.

ಕೌನ್ಸೆಲಿಂಗ್ ವಿಳಂಬದಿಂದಾಗಿ ಕಳೆದುಹೋದ ಐದು ತಿಂಗಳುಗಳನ್ನು ಒಂದು ವರ್ಷದ ಸೇವೆಯ ಭಾಗವಾಗಿ ಪರಿಗಣಿಸಬೇಕೆಂದು ವೈದ್ಯರು ಒತ್ತಾಯಿಸುತ್ತಿದ್ದಾರೆ. 

ಇದರ ಅರ್ಥವೇನೆಂದರೆ, ಅವರ ಸೇವೆಯು ಜನವರಿ 30, 2022 ರಂದು ಕೊನೆಗೊಳ್ಳಬಹುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಇರಿಸಲಾಗಿರುವವರಿಗೆ ಹೆಚ್ಚಿನ ಧನ ನೀಡಲಾಗುವುದು (ತಿಂಗಳಿಗೆ 62,000 ರೂ.) ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಇರಿಸಲ್ಪಟ್ಟವರಿಗೆ ಮಾತ್ರ ತಿಂಗಳಿಗೆ 40,000 ರೂ ಪಾವತಿಸಲಾಗುವುದು ಮತ್ತೊಂದು ವಿಚಾರವೆಂದರೆ ಅಭ್ಯರ್ಥಿಗಳು ಹೆಚ್ಚಾಗಿದ್ದು ಹುದ್ದೆಗಳು ಕಡಿಮೆ ಇದೆ. ಹಾಗಾಗಿ ರ್ಹ ವಿದ್ಯಾರ್ಥಿಗಳು ಸೇವೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಜಿ.ಗಿರೀಶ್ ಈ ಬಗ್ಗೆ ಪ್ರತಿಕ್ರಿಯೆಗೆ ಲಭ್ಯವಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com