ಬೆಂಗಳೂರಿನಲ್ಲಿ ಕೈಮೀರಿದ ಕೋವಿಡ್: ರೋಗಿಗಳಿಗೆ ಬೆಡ್ ದೊರಕಿಸಲಾಗದೆ ಸ್ವಯಂಸೇವಕರು ಅಸಹಾಯಕ!

ರಾಜ್ಯದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಸದ್ಯದ ಪರಿಸ್ಥಿತಿ ಭೀಕರವಾಗಿದೆ. ಕೋವಿಡ್ ರೋಗಿಗಳಿಗೆ ಬೆಡ್ ಗಳನ್ನು ಒದಗಿಸಲು ಸಹಾಯ ಮಾಡಲು ಅನೇಕ ಸ್ವಯಂಸೇವಕರು ಮುಂದೆ ಬಂದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಸದ್ಯದ ಪರಿಸ್ಥಿತಿ ಭೀಕರವಾಗಿದೆ. ಕೋವಿಡ್ ರೋಗಿಗಳಿಗೆ ಬೆಡ್ ಗಳನ್ನು ಒದಗಿಸಲು ಸಹಾಯ ಮಾಡಲು ಅನೇಕ ಸ್ವಯಂಸೇವಕರು ಮುಂದೆ ಬಂದಿದ್ದಾರೆ, ಆದರೆ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಮತ್ತು ನೂರಾರು ಹತಾಶ ರೋಗಿಗಳಿಗೆ ಬೆಡ್ ಗಳನ್ನು ದೊರಕಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರೂ ಕೈ ಚೆಲ್ಲಿದ್ದಾರೆ.

ಜುಲೈ-ಸೆಪ್ಟೆಂಬರ್ ನಲ್ಲಿ ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ 5,000 ಮತ್ತು 10,000 ರ ನಡುವೆ ಪ್ರಕರಣಗಳು ಬಂದಿದ್ದಾಗ ಅನೇಕರು ಬೆಡ್ ಹುಡುಕುವಲ್ಲಿ ತೊಂದರೆಗಳನ್ನು ಎದುರಿಸಬೇಕಾಯಿತು. ಈಗ, ಆ ಸಂಖ್ಯೆಯ ನಾಲ್ಕು ಪಟ್ಟು ಹೆಚ್ಚಾಗಿದೆ,ಬಿಕ್ಕಟ್ಟು ತುಂಬಾ ಕೆಟ್ಟದಾಗಿದೆ ಎಂದು ಅವರು ಹೇಳಿದರು. ರಾಜ್ಯವು ಶುಕ್ರವಾರ 48,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದರಿಂದ, ಸ್ವಯಂಸೇವಕರು ಬೆಂಗಳೂರಿನಲ್ಲಿ ಐಸಿಯು ಬೆಡ್ ಪಡೆಯುವುದು ಅಸಾಧ್ಯವೆಂದು ಹೇಳಿದರು.

ಸ್ವಯಂಸೇವಕರು ಸಾಮಾನ್ಯವಾಗಿ ವಲಯಾಧಿಕಾರಿಗಳನ್ನು ಸಂಪರ್ಕಿಸಿ ಬಿಬಿಎಂಪಿ ಬೆಡ್ ಕಾಯ್ದಿರಿಸಲು ಪ್ರಯತ್ನಿಸುತ್ತಾರೆ, ಆದರೆ ಅನೇಕ ಬಾರಿ ಬಿಬಿಎಂಪಿ ಹಾಗೆ ಮಾಡುವುದಿಲ್ಲ. ಇದರಿಂದ ರೋಗಿಗಳು ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದು ಕಂಡುಬಂದಿದೆ.108 ಸಹಾಯವಾಣಿ ನಿರಂತರವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.

ಬೆಂಗಳೂರಿನ ವಲಸಿಗ ಸ್ವಯಂಸೇವಕ ಸಾಕಿಬ್ ಇದ್ರೀಸ್, “ಐಸಿಯು ಬೆಡ್ ಗಳು ದೂರದ ಕನಸಾಗಿದೆ. ಎಚ್‌ಡಿಯು ಬೆಡ್ ಪಡೆಯುವುದು ಸಹ ಕಷ್ಟಕರವಾಗಿದೆ. ನನಗೆ ಎರಡು ಸಂಖ್ಯೆಗಳಿವೆ ಮತ್ತು ನಾನು ಪ್ರತಿದಿನ 3,000 ಕ್ಕೂ ಹೆಚ್ಚು ಕರೆಗಳನ್ನು ಪಡೆಯುತ್ತೇನೆ. ಪ್ರಕರಣಗಳ ಹೆಚ್ಚಳದೊಂದಿಗೆ, ನಾವು ಪ್ರಮುಖ ಪ್ರಕರಣಗಳಿಗೆ ಆದ್ಯತೆ ನೀಡಲು ಪ್ರಾರಂಭಿಸಿದ್ದೇವೆ. ಇದೀಗ, ಕಿರಿಯ ವಯಸ್ಸಿನವರು ಸೋಂಕಿಗೆ ಒಳಗಾಗುವುದನ್ನು ನಾವು ನೋಡುತ್ತಿದ್ದೇವೆ ಮತ್ತು ಆಮ್ಲಜನಕ ಅಥವಾ ವೆಂಟಿಲೇಟರ್ ಅಗತ್ಯವಿರುತ್ತದೆ. ನಾವು ಅವರಿಗೆ ಆದ್ಯತೆ ನೀಡುತ್ತೇವೆ. ಶುಕ್ರವಾರ, ನಾನು ಐಸಿಯು ಅಗತ್ಯವಿರುವ 500 ರೋಗಿಗಳನ್ನು ಹೊಂದಿದ್ದೆ, ಆದರೆ ಒಬ್ಬರಿಗೂ ಬೆಡ್ ಸಿಕ್ಕಿಲ್ಲ. ಹಾಗಾದರೆ  ರೋಗಿಗಳು ಎಲ್ಲಿಗೆ ಹೋಗುತ್ತಾರೆ? ನಮ್ಮಲ್ಲಿ ಹಲವಾರು ಪ್ರಕರಣಗಳು ಬಾಕಿ ಉಳಿದಿವೆ. ಕೆಲವರು ಗಂಭೀರವಾಗಿದ್ದರೆ ಇನ್ನೂ ಕೆಲವರು ಸಾವನ್ನಪ್ಪಿದ್ದಾರೆ.. ಜನರು ವೀಡಿಯೊಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ, ಅವರ ತಂದೆ ಉಸಿರಾಡುತ್ತಿಲ್ಲ ಮತ್ತು ಅವರಿಗೆ ತಕ್ಷಣ ಗಿ ಸಹಾಯ ಬೇಕು. ಆದರೆ ನಾವು ಅಸಹಾಯಕರಾಗಿದ್ದೇವೆ.” ಎಂದರು.

ತುರ್ತು ಪ್ರತಿಕ್ರಿಯೆ ತಂಡದ ಸ್ವಯಂಸೇವಕ ಐಮೆನ್ ಮುಯಿಜ್, “ನಾನು ಕೋವಿಡ್-ಸೋಂಕಿತ ರೋಗಿಗಳ ಕುಟುಂಬಗಳಿಂದ ದಿನಕ್ಕೆ ಸುಮಾರು 200 ಕರೆಗಳನ್ನು ಪಡೆಯುತ್ತೇನೆ, ರೋಗಿಯ ಆಮ್ಲಜನಕ ಮಟ್ಟವು ಕಡಿಮೆ ಮಟ್ಟಕ್ಕೆ ಇಳಿಯುವುದರಿಂದ ಆಮ್ಲಜನಕಯುಕ್ತ ಬೆಡ್ ಹುಡುಕಲು ನನ್ನನ್ನು ಕೇಳಿಕೊಳ್ಳುತ್ತಾರೆ.. ಕರೆಗಳು ಮತ್ತು ಅಗತ್ಯವಿರುವ ರೋಗಿಗಳ ಸಂಖ್ಯೆಯನ್ನು ನೋಡುತ್ತಾ ನಾವು ಭಯಭೀತರಾಗುತ್ತೇವೆ. ಬೆಡ್ ಲಭ್ಯತೆಯ ಆಧಾರದ ಮೇಲೆ ನಾವು ಸುಮಾರು 10 ರೋಗಿಗಳಿಗೆ ಮಾತ್ರ ಸಹಾಯ ಮಾಡಬಹುದಾಗಿರುವುದರಿಂದ ಇದು ಆಘಾತಕಾರಿಯಾಗಿದೆ. ಇತರರಿಗಾಗಿ, ನಾವು ಅವರಿಗೆ ಸಂಖ್ಯೆಗಳನ್ನು ನೀಡುತ್ತೇವೆ ಮತ್ತು ಬೆಡ್ ಗಳನ್ನು ಸ್ವತಃ ವ್ಯವಸ್ಥೆ ಮಾಡಿಕೊಳ್ಳುವಂತೆ ಕೇಳಿಕೊಳ್ಳುತ್ತೇವೆ. ”ಅವರು ಹೇಳಿದರು,“ ಮಕ್ಕಳು ನನ್ನನ್ನು ಕರೆದು ಅವರ ತಂದೆ ಕೋವಿಡ್ ಕಾರಣದಿಂದಾಗಿ ನಿಧನರಾದರು ಎಂದು ಹೇಳಿ, ಮತ್ತು ಐಸಿಯು ಬೆಡ್ ಡುಕುವ ಮೂಲಕ ಅವರ ತಾಯಿಯನ್ನು ಉಳಿಸಲು ನಾವು ಸಹಾಯ ಮಾಡಬಹುದೆ> ಎಂದು ಕೇಳುತ್ತಾರೆ, . ಆದರೆ ಎಲ್ಲಿಯೂ ಐಸಿಯು ಬೆಡ್ ಗಳಿಲ್ಲ." ಅವರು ವಿವರಿಸಿದ್ದಾರೆ,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com