ಕೋಲಾರಕ್ಕೆ ನಿಗದಿ ಮಾಡಿದ್ದ ಆಕ್ಸಿಜನ್ ಘಟಕ ಅಂತಿಮ ಕ್ಷಣದಲ್ಲಿ ತುಮಕೂರಿಗೆ ಶಿಫ್ಟ್!

ಕೆಜಿಎಫ್ ಜನರಲ್ ಆಸ್ಪತ್ರೆಯಲ್ಲಿ ಸ್ಥಾಪಿಸಬೇಕಾಗಿದ್ದ ಆಮ್ಲಜನಕ ಸ್ಥಾವರ ಕೊನೆ ಕ್ಷಣದಲ್ಲಿ ತುಮಕೂರಿಗೆ ಸ್ಥಳಾಂತರವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೋಲಾರ: ಕೆಜಿಎಫ್ ಜನರಲ್ ಆಸ್ಪತ್ರೆಯಲ್ಲಿ ಸ್ಥಾಪಿಸಬೇಕಾಗಿದ್ದ ಆಮ್ಲಜನಕ ಸ್ಥಾವರ ಕೊನೆ ಕ್ಷಣದಲ್ಲಿ ತುಮಕೂರಿಗೆ ಸ್ಥಳಾಂತರವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಕೋಲಾರದಲ್ಲಿ  ಆಮ್ಲಜನಕ ಸ್ಥಾವರ ನಿರ್ಮಾಣ ಮಾಡಲು ಅಧಿಕಾರಿಗಳು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದರು, ಆದರೆ ಅಂತಿಮ ಸಮಯದಲ್ಲಿ ತುಮಕೂರಿಗೆ ಶಿಫ್ಟ್ ಆಗಿದೆ.

ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ಎರಡು ಘಟಕ ಸ್ಥಾಪಿಸಲು ಅನುಮೋದನೆ ನೀಡಲಾಗಿತ್ತು, ಕೆಜಿಎಫ್ ನಲ್ಲಿ ಮತ್ತೊಂದು ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯಲ್ಲಿ.

ಕೆಜಿಎಫ್ ನಲ್ಲಿ ಆಕ್ಸಿಜನ್ ಸ್ಥಾವರ ಸ್ಥಾಪಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಜಿಲ್ಲಾಧಿಕಾರಿ ಡಾ,ಸೆಲ್ವಮನಿ ಇದರ ಕಾರ್ಯಗಳಿಗಾಗಿ ಇಬ್ಬರು ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದ್ದರು. ಇದರಲ್ಲಿ ನಗರಸಭೆಯ ಇಬ್ಬರು ಇಂಜಿನೀಯರ್ ಗಳು ಕೂಡ ಇದ್ದರು. ಆಮ್ಲಜನಕ ಸ್ಥಾವರ ಸ್ಥಾಪಿಸಲು ಕ್ರೇನ್ ಮತ್ತು ಅಗತ್ಯ ಉಪಕರಣಗಳನ್ನು ಸಿದ್ಧಪಡಿಸಲಾಗಿತ್ತು.

ಆಮ್ಲಜನಕ ಸ್ಥಾವರ ಸ್ಥಾಪನೆಗಾಗಿ ಕೆಜಿಎಫ್ ಜಿಲ್ಲಾ ಸರ್ಜನ್ ಡಾ. ಶಿವಕುಮಾರ್ ಎರಡು ಸ್ಥಳಗಳನ್ನು ಗುರುತಿಸಿದ್ದರು. ಆದರೆ ಸಂಜೆಯ ವೇಳೆಗೆ ತುಮಕೂರಿಗೆ ಸ್ಥಳಾಂತರವಾಗಿದೆ ಎಂಬ ಆದೇಶ ತಲುಪಿತು.

ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಆಮ್ಲಜನಕ ಸ್ಥಾವರವನ್ನು 100 ಹಾಸಿಗೆಗಳ ಕೆಜಿಎಫ್ ಜನರಲ್ ಆಸ್ಪತ್ರೆಯಲ್ಲಿ ಸ್ಥಾಪಿಸಿದ್ದರೇ ನೂರಾರು ಜೀವಗಳನ್ನು ಉಳಿಸಬಹುದಿತ್ತು ಎಂದು ಕೋಲಾರ ಸಂಸದ ಎಸ್ ಮುನಿಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com