ಹೆಬ್ರಿ: ತಾಲ್ಲೂಕಿನ ಶಿವಪುರ ಗ್ರಾಮದ ಬಟ್ರಾಡಿ ಬಳಿಯ ಶಿವಪುರ ಹೊಳೆಗೆ ಶುಕ್ರವಾರ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ.
ಸುದರ್ಶನ್, ಕಿರಣ್, ಸೋನಿತ್ ನೀರು ಪಾಲಾದ ದುರ್ದೈವಿಗಳು. ಸುದರ್ಶನ್ ಎಂಬಾತನ ಶವ ಪತ್ತೆಯಾಗಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳ ಶೋಧ ಕಾರ್ಯ ಮುಂದುವರಿದಿದೆ.
ವಿದ್ಯಾರ್ಥಿಗಳು ಹಿರಿಯಡ್ಕ ಶಾಲೆಯವರು ಎಂದು ಗೊತ್ತಾಗಿದೆ. ಹೆಬ್ರಿ ತಹಶೀಲ್ಧಾರ್ ಕೆ.ಪುರಂದರ್, ಪಿಎಸ್ಐ ಮಹೇಶ್ ಸ್ಥಳಕ್ಕೆ ಧಾವಿಸಿದ್ದಾರೆ.
Advertisement