ಮೈಸರು ದಸರಾ: ಕ್ಯಾಪ್ಟನ್ ಅಭಿಮನ್ಯುವಿಗೆ ಜಂಬೂ ಸವಾರಿ ತಾಲೀಮು

ಈ ಬಾರಿಯ ನಾಡಹಬ್ಬ ದಸರಾಕ್ಕೆ ಅಕ್ಟೋಬರ್ 7 ರಂದು ರಾಜಕೀಯ ಮುತ್ಸದಿ ಎಸ್.ಎಂ. ಕೃಷ್ಣ ಅವರು ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಅವರಿಗೆ ಸಾಥ್ ನೀಡಿದ್ದರು. 
ಜಂಬೂ ಸವಾರಿ ತಾಲೀಮು
ಜಂಬೂ ಸವಾರಿ ತಾಲೀಮು
Updated on

ಬೆಂಗಳೂರು: ಈ ಬಾರಿಯ ನಾಡಹಬ್ಬ ದಸರಾಕ್ಕೆ ಅಕ್ಟೋಬರ್ 7 ರಂದು ರಾಜಕೀಯ ಮುತ್ಸದಿ ಎಸ್.ಎಂ. ಕೃಷ್ಣ ಅವರು ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಅವರಿಗೆ ಸಾಥ್ ನೀಡಿದ್ದರು. 

ಇದೀಗ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿದ್ದು, ಈ ನಡುವೆ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ಉಳಿದ ಗಜಪಡೆಯನ್ನು ನಿತ್ಯವೂ ಪ್ರಮುಖ ರಸ್ತೆಗಳಲ್ಲಿ ನಡೆಸಿ ಅಭ್ಯಾಸ ಮಾಡಿಸಲಾಗುತ್ತಿದೆ.

ವಿಶೇಷವಾಗಿ ಕ್ಯಾಪ್ಟನ್ ಅಭಿಮನ್ಯುವಿಗೆ ಜಂಬೂ ಸವಾರಿಯ ತಾಲೀಮು ನಡೆಸಲಾಗುತ್ತದೆ. ಇದು ಅಕ್ಟೋಬರ್ 13 ಅಥವಾ 14ರಂದು ನಡೆಯಬಹುದು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಲಾಗುತ್ತದೆ. ಅರಮನೆ ಮುಂದೆ ಪುಷ್ಪಾರ್ಚನೆ ಮಾಡಿದ ನಂತರ ಮೆರವಣಿಗೆ ತಾಲೀಮು ಆರಂಭವಾಗುತ್ತದೆ. ಗಜಪಡೆ ಜೊತೆಗೆ ಮೈಸೂರಿನ ಮತ್ತೊಂದು ಪ್ರಮುಖ ಆಕರ್ಷಣೆಯಾದ ಅಶ್ವಪಡೆಯೂ ಸಾಥ್ ನೀಡಲಿದೆ.

ಈ ಮೆರವಣಿಗೆ ತಾಲೀಮು ಉಸ್ತುವಾರಿಯನ್ನು ನಗರ ಪೊಲೀಸ್ ಆಯುಕ್ತರು, ಹಿರಿಯ ಅರಣ್ಯಾಧಿಕಾರಿಗಳು, ಜಂಬೂ ಸವಾರಿಯ ಬಗ್ಗೆ ವಿಶೇಷ ಜ್ಞಾನ ಇರುವ ಹಿರಿಯರು ವಹಿಸುತ್ತಾರೆ. ಪ್ರತಿವರ್ಷವೂ ವಿಜಯದಶಮಿಗೆ ಮುನ್ನ ಅಂಬಾರಿ ಹೊರುವ ಆನೆಗೆ ಮರದ ಅಂಬಾರಿ ಹೊರಿಸಿ ಅಭ್ಯಾಸ ಮಾಡಿಸುವ ರೂಢಿ ನಡೆದು ಬಂದಿದೆ. ಈ ಸಂದರ್ಭದಲ್ಲಿ ಅಂಬಾರಿ ಹೊರುವ ಆನೆಯ ವರ್ತನೆಯನ್ನು ಅಧ್ಯಯನ ಮಾಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com