ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಸ್ ವಿದ್ಯಾಶಂಕರ್ ವಿರುದ್ಧ ಅಧಿಕೃತವಾಗಿ ದೂರು ದಾಖಲಾಗಿದೆ. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್. ದೂರು ದಾರರಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ದೂರುದಾರರಾದ, ಮಾಜಿ ಉಪಕುಲಪತಿ ಎನ್ ಎಸ್ ರಾಮೇ ಗೌಡ ಮತ್ತು ನಿವೃತ್ತ ಡೀನ್ ಡಾ ಚಂಬಿ ಪುರಾಣಿಕ್-ಶಿಕ್ಷಕರ ದಿನಾಚರಣೆಯಂದು ಕುಲಪತಿಗಳನ್ನು ಭೇಟಿ ಮಾಡಿ, ಕರ್ನಾಟಕ ಮುಕ್ತ ವಿವಿ ಉಪಕುಲಪತಿ ಡಾ. ವಿದ್ಯಾಶಂಕರ್ ವಿರುದ್ಧ ಗಂಭೀರ ಆರೋಪಗಳನ್ನು ಪಟ್ಟಿ ಮಾಡಿ 33 ಪುಟಗಳಲ್ಲಿ ದೂರು ದಾಖಲಿಸಿದ್ದಾರೆ.
ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಗೌಡ ಮತ್ತು ಪುರಾಣಿಕ್, ಅನಗತ್ಯವಾಗಿರುವ ನಿರ್ಮಾಣ ಕೈಗೊಳ್ಳುವ ಮೂಲಕ ವಿದ್ಯಾಸಾಗರ್ ವಿಶ್ವ ವಿದ್ಯಾನಿಲಯಕ್ಕೆ400 ಕೋಟಿ ರು ಹಣ ಹೊರೆಯಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವಿಶ್ವ ವಿದ್ಯಾನಿಲಯ ಒಮ್ಮೆಗೆ ಅನೇಕರಿಂದ ಮೆಚ್ಚುಗೆ ಪಡೆದಿದೆ. ಆದರೆ ಇಂದು ಆ ಪ್ರಶಂಸೆ ಸಾಯುತ್ತಿದೆ. ಇದು ಹೀಗೆ ಮುಂದುವರಿದರೇ ಶೀಘ್ರದಲ್ಲಿ ವಿವಿಗೇ ಮರಣೋತ್ತರ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ರಾಜ್ಯಪಾಲರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.
Advertisement