
ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020ರ(ಎನ್ ಇಪಿ-2020) ಜಾರಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉನ್ನತ ಶಿಕ್ಷಣ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಡಾ ಸಿ ಎನ್ ಅಶ್ವಥ ನಾರಾಯಣ ಅವರು ಇಲಾಖೆಯ ಮತ್ತು ರಾಜ್ಯ ಉನ್ನತ ಶಿಕ್ಷಣ ಮಂಡಳಿ ಜೊತೆ ಸಭೆಯನ್ನು ನಡೆಸಿದರು. ಈ ಮೂಲಕ ಕರ್ನಾಟಕ ರಾಜ್ಯ ದೇಶದಲ್ಲಿಯೇ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ.
ಈಗಾಗಲೇ ಇರುವ ಶಿಕ್ಷಣ ವ್ಯವಸ್ಥೆಯನ್ನು ಹಲವು ಸುಧಾರಣೆಗಳ ಮೂಲಕ ನೂತನ ಶಿಕ್ಷಣ ನೀತಿ ಸಂಪೂರ್ಣ ಬದಲಿಸಲಿದೆ, ಇನ್ನು ಮುಂದೆ ಉನ್ನತ ಶಿಕ್ಷಣಕ್ಕೆ ಒಂದೇ ಪ್ರಾಧಿಕಾರವಿರುತ್ತದೆ. ಪಿಹೆಚ್ ಡಿಗೆ ಮುನ್ನ ಎಂ ಫಿಲ್ ಕೋರ್ಸ್ ಗಳಿರುವುದಿಲ್ಲ.ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿರ್ದಿಷ್ಟ ಶುಲ್ಕ, ಪದವಿ ಕೋರ್ಸ್ ಗಳಿಗೆ 4ವರ್ಷ ಅಥವಾ ಮೂರು ವರ್ಷ ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ, ಡಿಗ್ರಿ ಕೋರ್ಸ್ ಗಳಲ್ಲಿ ಬಹು ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಿರುತ್ತವೆ.
ಇದು ವೃತ್ತಿಪರ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು 2018ರಲ್ಲಿ ಶೇಕಡಾ 26.3ರಿಂದ 2035ರ ವೇಳೆಗೆ ಶೇಕಡಾ 50ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ 3.5 ಕೋಟಿ ಹೊಸ ಸೀಟುಗಳನ್ನು ಸೇರಿಸುವ ಗುರಿಯನ್ನು ಹೊಂದಿದೆ.
"ಅಂಕಿಅಂಶಗಳು ಶಾಲೆಯಿಂದ ಹೊರಗುಳಿದವರ ಶೇಕಡಾವಾರು ಇಳಿಮುಖವಾಗಿದ್ದರೂ, ದ್ವಿತೀಯ ಮಟ್ಟದಲ್ಲಿ ಅದು ಇನ್ನೂ ಶೇಕಡಾ 17.5ರಷ್ಟಿದೆ. ಇದು ಉನ್ನತ ಶಿಕ್ಷಣದ ಮಟ್ಟದಲ್ಲೂ ಅಧಿಕವಾಗಿದೆ. ಕುಟುಂಬದಲ್ಲಿನ ಆರ್ಥಿಕ ಮತ್ತು ವೈದ್ಯಕೀಯ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ಅಧ್ಯಯನದಿಂದ ವಿರಾಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಅಂತಹ ವಿದ್ಯಾರ್ಥಿಗಳು ಈಗ ಅವರು ಅಧ್ಯಯನ ಮಾಡಿದ ವರ್ಷಗಳ ಪೂರ್ಣಗೊಳಿಸುವಿಕೆಯ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಅವರ ಕಲಿಕೆಗೆ ಮರಳಲು ಹಾಗೂ ಅವರು ನಿಲ್ಲಿಸಿದ ಸಮಯದಿಂದ ಪ್ರಾರಂಭಿಸಲು ಹೊಸ ಶಿಕ್ಷಣ ನೀತಿಯಲ್ಲಿ ಅವಕಾಶವಿರುತ್ತದೆ.
#Karnataka leads in National Educational Policy implementation in the country.
— Dr. Ashwathnarayan C. N. (@drashwathcn) August 7, 2021
Our commitment to this is unwavering. On my first day at office in CM @BSBommai cabinet, an order has been issued to implement #NEP2020 in this academic year, 2021-22.@narendramodi @dpradhanbjp https://t.co/ycm70XaWD5