ಡಿಜೆ ಹಳ್ಳಿ: ಹತ್ಯೆಗಾಗಿ ಕರೆತರಲಾಗಿದ್ದ ಆರು ಜಾನುವಾರುಗಳ ರಕ್ಷಣೆ

ಗೋ ಗ್ಯಾನ್ ಫೌಂಡೇಶನ್‌ನ ಸದಸ್ಯರು ಸ್ಥಳೀಯ ಪೊಲೀಸರ ಸಹಾಯದಿಂದ ಭಾನುವಾರ ಡಿಜೆ ಹಳ್ಳಿಯ ಪ್ರದೇಶದ ನಿವಾಸಿಗಳು ಕರೆತಂದ ಆರು ದನಗಳ ರಕ್ಷಿಸಿದ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗೋ ಗ್ಯಾನ್ ಫೌಂಡೇಶನ್‌ನ ಸದಸ್ಯರು ಸ್ಥಳೀಯ ಪೊಲೀಸರ ಸಹಾಯದಿಂದ ಭಾನುವಾರ ಡಿಜೆ ಹಳ್ಳಿಯ ಪ್ರದೇಶದ ನಿವಾಸಿಗಳು ಕರೆತಂದ ಆರು ದನಗಳ ರಕ್ಷಿಸಿದ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ದನಗಳನ್ನು ಮುಂಬರುವ ಹಬ್ಬಕ್ಕಾಗಿ ಹತ್ಯೆ ಮಾಡಲು ಅಕ್ರಮವಾಗಿ ಇಲ್ಲಿಗೆ ತರಲಾಗಿದೆ ಎಂದು ಆರೋಪಿಸಲಾಗಿದೆ.

ಸ್ವಯಂಸೇವಕರೊಬ್ಬರು ಈ ಪ್ರದೇಶದಲ್ಲಿ ಅಲೆದಾಡಿ ಪ್ರಾಣಿಗಳ  ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಮತ್ತು ಪೊಲೀಸರನ್ನು ಎಚ್ಚರಿಸುವ ಮೊದಲು ಆ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ಡಿಜೆ ಹಳ್ಳಿಯ  ವಿವಿಧ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ತಿರುಗಾಡಿದ್ದಾರೆಂದು ಪ್ರತಿಷ್ಠಾನ ತಿಳಿಸಿದೆ.

ಈ ಪ್ರದೇಶದಲ್ಲಿ 25 ಕ್ಕೂ ಹೆಚ್ಚು ಜಾನುವಾರುಗಳನ್ನು ವಧೆ ಮಾಡಲಾಗುವುದು ಎಂದು ಗುರುತಿಸಲಾಗಿದೆ ಎಂದು ಸ್ವಯಂಸೇವಕರು ತಿಳಿಸಿದ್ದಾರೆ. ಪೊಲೀಸ್ ತಂಡವು ಅಲ್ಲಿನ ಕೆಲವು ಮನೆಗಳಿಗೆ ಭೇಟಿ ನೀಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ದನಗಳನ್ನು  ಕಟ್ಟಿಹಾಕಿ ವಿಚಾರಣೆಯ ನಂತರ ಎಫ್‌ಐಆರ್ ದಾಖಲಿಸಲಾಗಿತ್ತು. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವರ್ಷದ ಆರಂಭದಲ್ಲಿ  ಕರ್ನಾಟಕ ಗೋಹತ್ಯೆ ತಡೆ ಮತ್ತು ದನಕರು ಸಂರಕ್ಷಣಾ ಕಾಯ್ದೆ 2020ಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದರು ಮತ್ತು ಎಲ್ಲಾ ಜಾನುವಾರುಗಳನ್ನು (ದನಗಳು, ಎತ್ತುಗಳು, ಕರುಗಳು ಮತ್ತು ಎಮ್ಮೆಗಳು) ವಧೆ ಮಾಡುವ ಉದ್ದೇಶದಿಂದ ವಧೆ, ವ್ಯಾಪಾರ ಮತ್ತು ಸಾಗಾಟವನ್ನು ಸಂಪೂರ್ಣ ನಿಷೇಧಿಸಿದ್ದರು.

ದನಗಳ ಹತ್ಯೆಯನ್ನು ಕಾನೂನುಬಾಹಿರಗೊಳಿಸಿದ ಕರ್ನಾಟಕ ಗೋ ಸಂರಕ್ಷಣಾ ಕಾಯ್ದೆ 1964 ರ ಮೇಲೆ ಈ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ಸ್ವಯಂಸೇವಕರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com