ಮೈಸೂರು: ತೆಂಗಿನ ಮರವೊಂದು ಬಿದ್ದ ಪರಿನಾಮ ಆಟವಾಡುತ್ತಿದ್ದ ಬಾಲಕ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ತೋಟದ ಮನೆಯಲ್ಲಿ ಕ್ರಿಕೆಟ್ ಆಡಿಕೊಳ್ಳುತ್ತಿದ್ದ ಅಭಯ್(6) ಮೃತಪಟ್ತ ದುರ್ದೈವಿ ಬಾಲಕ.
ಬಾಲಕ ಆಡುತ್ತಿರುವಾಗಲೇ ತೆಂಗಿನ ಮರ ಅವನ ಮೇಲೆ ಬಿದ್ದಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜತೆಯಲ್ಲಿ ಆಡುತ್ತಿದ್ದ ಬಾಲಕಿಗೆ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement