ಮೈಸೂರು: ಮುಖ್ಯಪೇದೆಯ ಸರ ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದೊಪ್ಪಿಸಿದ ಘಟನೆ ಸಂತ ಫಿಲೋಮಿನಾ ಚರ್ಚ್ ಬಳಿ ಗುರುವಾರ ರಾತ್ರಿ ನಡೆದಿದೆ.
ರಾತ್ರಿ 9,30ರ ಸುಮಾರಿಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಮುಖ್ಯ ಪೇದೆ ಇಲಿಯಾಸ್ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಪೇದೆಯ ಕತ್ತಿನಲ್ಲಿದ್ದ ಸರವನ್ನು ಕಸಿದು ಓಡುತ್ತಿದ್ದ, ಇದನ್ನು ಗಮನಿಸಿದ ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿ ಆತನನ್ನು ಹಿಂಬಾಲಿಸಿದ್ದಾರೆ, ಕೂಡಲೇ ಕಳ್ಳ ಪಾರ್ಕ್ ಗೆ ಓಡಿ ಹೋಗಿ ಅಲ್ಲಿ ಅವಿತು ಕುಳಿತಿದ್ದ, ಅಲ್ಲಿಯೇ ಇದ್ದ ಕೆಲವು ಯುವಕರು ಕಳ್ಳನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.
ಆತನೊಬ್ಬ ಸರಣಿ ಸರ ಕಳ್ಳನಾಗಿದ್ದು, ಲಷ್ಕರ್ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ಆದರೆ ಮುಖ್ಯಪೇದೆ ಆರೋಪಿ ವಿರುದ್ಧ ದೂರು ದಾಖಲಿಸಲಿಲ್ಲ, ಇದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.
Advertisement