ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಐಕ್ಯಾಟ್(ಇಂಟರ್ನ್ಯಾಷನಲ್ ಕ್ರಿಟಿಕಲ್-ಕೇರ್ ಏರ್ ಟ್ರಾನ್ಸ್ಫರ್ ಟೀಮ್) ಫೌಂಡೇಶನ್ ರಾಜ್ಯ ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಉಚಿತವಾಗಿ ಏರ್ ಆಂಬ್ಯುಲೆನ್ಸ್ ಸೇವೆ ನೀಡಲಿದೆ.
ಈ ಮೊದಲು 108 ಆಂಬ್ಯುಲೆನ್ಸ್ ಸೇವೆಯೊಂದಿಗೆ ಈ ಸೇವೆ ನೀಡುವ ಯೋಜನೆ ಇತ್ತು. ಆದರೆ ಅದರ ಒಪ್ಪಂದದಲ್ಲಿ ಸಮಸ್ಯೆಗಳಾಗ ನಂತರ ಈ ಆಲೋಚನೆಯನ್ನು ಕೈಬಿಡಲಾಯಿತು ಮತ್ತು ನೇರವಾಗಿ ಸರ್ಕಾರದೊಂದಿಗೆ ಪಾಲುದಾರಿಕೆಯ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಐಕ್ಯಾಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಕ್ಯಾಟ್ ಕಂಪನಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ(GIM)ದಲ್ಲಿ ಭಾಗವಹಿಸಿದ ಕಂಪನಿಗಳಲ್ಲಿ ಒಂದಾಗಿದ್ದು, ಹೆಚ್ಚಿನ ಪಾಲುದಾರಿಕೆಯನ್ನು ಎದುರು ನೋಡುತ್ತಿದೆ.
ಐಸಿಎಟಿಟಿ ಫೌಂಡೇಶನ್ನ ಅಧ್ಯಕ್ಷೆ ಡಾ.ಶಾಲಿನಿ ನಲ್ವಾಡ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆಗೆ ಮಾತನಾಡಿ, ಈಗಾಗಲೇ ಇರುವ ಮೂಲಸೌಕರ್ಯಗಳೊಂದಿಗೆ ಸರ್ಕಾರದೊಂದಿಗೆ ಏರ್ ಆಂಬ್ಯುಲೆನ್ಸ್ ಸೇವೆ ನೀಡುವ ದಿಕ್ಕಿನಲ್ಲಿ ಕೆಲಸ ಮಾಡಲಾಗುತ್ತಿದೆ ಮತ್ತು ಒಂದು ವಾರದೊಳಗೆ 2-3 ಏರ್ಲಿಫ್ಟ್ಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
''ರಾಜ್ಯ ಸರ್ಕಾರ ಉಚಿತವಾಗಿ ಈ ಸೇವೆ ನೀಡಲಿದ್ದು, ಇದಕ್ಕಾಗಿ ಸುಮಾರು 100 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರತಿ ಸೇವೆಗೆ ಸದ್ಯಕ್ಕೆ ಸುಮಾರು 2 ರಿಂದ 2.5 ಲಕ್ಷ ರೂ. ಸರ್ಕಾರ ಈಗಾಗಲೇ ಬಜೆಟ್ನಲ್ಲಿ ಘೋಷಣೆ ಮಾಡಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
Advertisement