ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು KITS ಒಡಂಬಡಿಕೆ

ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (KITS) Google, Paytm, HDFC, Razorpay, Microsoft ಮತ್ತು ಇತರರೊಂದಿಗೆ ಸ್ಟಾರ್ಟ್ ಅಪ್ ಉತ್ತೇಜನಕ್ಕೆ ಒಪ್ಪಂದ ಮಾಡಿಕೊಂಡಿದೆ. 
ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಅನುಕೂಲವಾಗುವಂತೆ ಬೂಸ್ಟರ್ ಕಿಟ್ ಉಪಕ್ರಮಕ್ಕೆ ಚಾಲನೆ ನೀಡಿದ ನಂತರ
ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಅನುಕೂಲವಾಗುವಂತೆ ಬೂಸ್ಟರ್ ಕಿಟ್ ಉಪಕ್ರಮಕ್ಕೆ ಚಾಲನೆ ನೀಡಿದ ನಂತರ
Updated on

ಬೆಂಗಳೂರು: ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (KITS) Google, Paytm, HDFC, Razorpay, Microsoft ಮತ್ತು ಇತರರೊಂದಿಗೆ ಸ್ಟಾರ್ಟ್ ಅಪ್ ಉತ್ತೇಜನಕ್ಕೆ ಒಪ್ಪಂದ ಮಾಡಿಕೊಂಡಿದೆ. 

ಇದು ಸ್ಟಾರ್ಟ್‌ಅಪ್‌ಗಳಿಗೆ ಅವುಗಳ ಬೆಳವಣಿಗೆ ಪಯಣದಲ್ಲಿ ಸಹಾಯ ಮಾಡುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಿಟ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಎಂಒಯು ಪ್ರಕಾರ, ಎಚ್‌ಡಿಎಫ್‌ಸಿ ಬ್ಯಾಂಕ್‌ನ 'ಸ್ಮಾರ್ಟ್‌ಅಪ್ ಪ್ರೋಗ್ರಾಂ' ಅಡಿಯಲ್ಲಿ 'ಕರ್ನಾಟಕ ಸ್ಟಾರ್ಟ್‌ಅಪ್ ಸೆಲ್' ನಲ್ಲಿ ನೋಂದಾಯಿಸಲಾದ ಸ್ಟಾರ್ಟ್‌ಅಪ್‌ಗಳಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ.

ಬ್ಯಾಂಕಿನ ಉತ್ತಮ ಹಣಕಾಸು ಸಾಧನಗಳ ಮೂಲಕ ತಮ್ಮ ಗುರಿಗಳನ್ನು ಸಾಧಿಸಲು ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. RazorPay ಮತ್ತು Paytm ವ್ಯಾಪಾರವನ್ನು ಪ್ರಾರಂಭಿಸಲು ಮತ್ತು ನಡೆಸಲು ಅನುಕೂಲಕರವಾದ ಬ್ಯಾಂಕಿಂಗ್ ಮತ್ತು ಫಿನ್-ಟೆಕ್ ಸೇವೆಗಳನ್ನು ಒದಗಿಸಿದರೆ, StrongHer ವೆಂಚರ್ಸ್ ಮಹಿಳಾ ನೇತೃತ್ವದ ಮತ್ತು ಮಹಿಳಾ-ಕೇಂದ್ರಿತ ಉದ್ಯಮಶೀಲತೆಯನ್ನು ಉತ್ತೇಜಿಸುವ ಸೇವೆಗಳನ್ನು ಒದಗಿಸುತ್ತದೆ.

ಉದಯೋನ್ಮುಖ ಸ್ಥಳೀಯ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ಮತ್ತು ಡಿಜಿಟಲ್ ಕೌಶಲ್ಯದ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸಲು ಕರ್ನಾಟಕ ಸರ್ಕಾರದೊಂದಿಗೆ ಗೂಗಲ್ ಸಹಯೋಗ ಹೊಂದಿದೆ.

ಇದಕ್ಕೂ ಮುನ್ನ, ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ 'ಬೆಂಗಳೂರು ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ಕಾರ್ಪೊರೇಟ್ ವಲಯದಲ್ಲಿ ನಾವೀನ್ಯತೆಯನ್ನು ಹೇಗೆ ವೇಗಗೊಳಿಸುತ್ತಿದೆ' ಎಂಬ ಅಧಿವೇಶನದಲ್ಲಿ ಮಾತನಾಡಿದ ತಜ್ಞರು, ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯು ದಶಕದಲ್ಲಿ ಕಾರ್ಪೊರೇಟ್ ಉದ್ಯಮಗಳು ಅಸ್ತಿತ್ವದಲ್ಲಿರಲು ಮುಂದಿನ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ಆಂತರಿಕ ಸಂಪನ್ಮೂಲಗಳ ಜೊತೆಗೆ ನಾವೀನ್ಯತೆಯು ಉದ್ಯೋಗದ ಕೀಲಿಕೈ ಎಂದು TiE ಗ್ಲೋಬಲ್‌ನ ಟ್ರಸ್ಟಿ ರವಿ ನಾರಾಯಣ್ ಹೇಳಿದರು. ಸಿಸ್ಕೊದ ಸ್ಟಾರ್ಟಪ್‌ಗಳಿಗಾಗಿ ಸಿಸ್ಕೋದ ಮುಖ್ಯಸ್ಥೆ ಶೃತಿ ಕಣ್ಣನ್ ನಗರ ಪ್ರದೇಶವಲ್ಲದೆ ಮಾತ್ರವಲ್ಲದೆ ಎಲ್ಲೆಡೆಯೂ ಪರಿವರ್ತನೆ ಕಂಡುಬರುತ್ತಿದೆ ಎಂದರು. 

ಮೈಕ್ರೋಸಾಫ್ಟ್ ಇಂಡಿಯಾದ ಸ್ಟಾರ್ಟಪ್‌ಗಳ ದೇಶ ಮುಖ್ಯಸ್ಥ ಮೈಕ್ರೋಸಾಫ್ಟ್ ಮಧುರಿಮಾ ಅಗರ್ವಾಲ್, ಉದ್ಯಮಿಗಳಿಗೆ ಇದು ಅತ್ಯುತ್ತಮ ಸಮಯ ಎಂದು ಹೇಳಿದರು. "ಮಾರ್ಗದರ್ಶನದ ರೂಪದಲ್ಲಿ ತಾಂತ್ರಿಕ ಉದ್ಯಮ, ಅನುಭವದ ಜನರೊಂದಿಗೆ ಕಾರ್ಯತಂತ್ರದ ಚರ್ಚೆಗಳು ಪರಿಸರ ವ್ಯವಸ್ಥೆಯು ಅಭಿವೃದ್ಧಿಗೊಳ್ಳಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com