ಮಂಡ್ಯ: ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ನೀಡದೆ ಸೇಡು ತೀರಿಸಿಕೊಂಡ ಅಧಿಕಾರಿಗಳು!

ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಪರೇಡ್ ಸಂದರ್ಭದಲ್ಲಿ 18 ತಂಡಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಡುವಂತೆ ಹೇಳುತ್ತಿರುವ ಎಸ್ ಪಿ ಯತೀಶ್
ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಡುವಂತೆ ಹೇಳುತ್ತಿರುವ ಎಸ್ ಪಿ ಯತೀಶ್

ಮಂಡ್ಯ: ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಪರೇಡ್ ಸಂದರ್ಭದಲ್ಲಿ 18 ತಂಡಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆದರೆ, ಹಿರಿಯ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳ ವಿರುದ್ಧ ಸೇಡು ತೀರಿಸಿಕೊಂಡ ಆಡಳಿತ,  ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಲಿಲ್ಲ.

ಕಂದಾಯ ಸಚಿವ ಆರ್ ಅಶೋಕ್, 30 ನಿಮಿಷ ಮಾತ್ರ ಕಾರ್ಯಕ್ರಮದಲ್ಲಿರುತ್ತೇನೆ. ರಾಷ್ಟ್ರ ಧ್ವಜ ಹಾರಿಸಿದ ನಂತರ ಬೆಂಗಳೂರಿಗೆ ನಿರ್ಮಿಸುವುದಾಗಿ ಸಂಘಟಕರಿಗೆ ಹೇಳಿದ್ದರಿಂದ ಪರೇಡ್ ನ್ನು ಸಂಕ್ಷಿಪ್ತಗೊಳಿಸಲು ಅಧಿಕಾರಿಗಳು ಪ್ರಯತ್ನಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ, 18 ತಂಡಗಳು ಪರೇಡ್ ನಲ್ಲಿ ಭಾಗಿಯಾಗುತ್ತಿಲ್ಲ ಎಂದು ಅಧಿಕಾರಿಗಳು ಘೋಷಿಸಿದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ವೇದಿಕೆ ಬಳಿ ಬಂದು, ಆಡಳಿತವನ್ನು ಪ್ರಶ್ನಿಸಿದರು. 

ಕಳೆದ ಎರಡು ತಿಂಗಳಿನಿಂದ ಅಭ್ಯಾಸ ಮಾಡಿದ್ದೇವೆ. ತರಬೇತಿಗಾಗಿ ತರಗತಿಗಳನ್ನು ಕಳೆದುಕೊಂಡಿದ್ದೇವೆ. ಪರೇಡ್ ಕಾರ್ಯಕ್ರಮದಿಂದ ಹೇಗೆ ನಮ್ಮನ್ನು ದೂರ ತಳ್ಳುವಿರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಡುವಂತೆ ಎಸ್ ಪಿ ಎನ್ ಯತೀಶ್ ಹೇಳಿದರು. ಶಿಕ್ಷಕರ ಪ್ರೇರಣೆಯಿಂದ ಈ ರೀತಿ ಮಾಡುತ್ತಿದ್ದೀರಾ ಎಂಬುದು ಗೊತ್ತಿದೆ. ಏನು ಮಾಡಬೇಕಿದೆ ಎಂಬುದು ಗೊತ್ತಿದೆ ಎಂದು ವಿದ್ಯಾರ್ಥಿಗಳ ಮುಂದೆ ರೇಗಾಡಿದರು. ಆದರೆ, ಆರ್.ಅಶೋಕ್ ವೇದಿಕೆಯತ್ತ ಬಂದಾಗ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶ ನೀಡಲಾಯಿತು.

ಆದರೆ, ಈ ವಿಚಾರ ಇಲ್ಲಿಗೆ ಮುಗಿಯಲಿಲ್ಲ. ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸುವ ಸಂದರ್ಭದಲ್ಲಿ 18 ತಂಡಗಳ ವಿದ್ಯಾರ್ಥಿಗಳ ಹೆಸರನ್ನು ಕೈ ಬಿಡಲಾಗಿತ್ತು. ಅದೇ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಾಲೇಜ್ ವಿದ್ಯಾರ್ಥಿಗಳು ಬಹುಮಾನ ಮತ್ತು ಪ್ರಮಾಣ ಪತ್ರ ಪಡೆದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ತೋರಿದ  ಸುಮಾರು 600 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಸಮಾಧಾನಗೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com