ಉಡುಪಿ: ಸಿಇಟಿ ರ‍್ಯಾಂಕ್ ವಿಜೇತ ಅವಳಿ ಸಹೋದರರು, ನೀಟ್ ನತ್ತ ಚಿತ್ತ!

ಶನಿವಾರ ಪ್ರಕಟವಾದ ಸಿಇಟಿ ಪರೀಕ್ಷೆ ಫಲಿತಾಂಶದಲ್ಲಿ ಮಣಿಪಾಲ್ ನ ಮಾಧವ ಕೃಪ ಇಂಗ್ಲೀಷ್ ಮಾಧ್ಯಮ ಶಾಲೆಯ ಅವಳಿ ಸಹೋದರರಾದ ವ್ರಜೇಶ್ ಮತ್ತು ವ್ರಿಷಣ್ ಕ್ರಮವಾಗಿ ಎರಡು ಮತ್ತು ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ವ್ರಜೇಶ್, ವ್ರಿಷಣ್
ವ್ರಜೇಶ್, ವ್ರಿಷಣ್
Updated on

ಉಡುಪಿ: ಶನಿವಾರ ಪ್ರಕಟವಾದ ಸಿಇಟಿ ಪರೀಕ್ಷೆ ಫಲಿತಾಂಶದಲ್ಲಿ ಮಣಿಪಾಲ್ ನ ಮಾಧವ ಕೃಪ ಇಂಗ್ಲೀಷ್ ಮಾಧ್ಯಮ ಶಾಲೆಯ ಅವಳಿ ಸಹೋದರರಾದ ವ್ರಜೇಶ್ ಮತ್ತು ವ್ರಿಷಣ್ ಕ್ರಮವಾಗಿ ಎರಡು ಮತ್ತು ನಾಲ್ಕನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. 

ಇವರಿಬ್ಬರೂ ಎಂಬಿಬಿಎಸ್ ಮಾಡಲು ನೀಟ್ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅವಳಿ ಸಹೋದರ ಪೈಕಿ ವ್ರಜೇಶ್ ಹಿರಿಯವರಾಗಿದ್ದು, ವ್ರಿಷಣ್ ಕಿರಿಯರಾಗಿದ್ದಾರೆ. ಇವರಿಬ್ಬರೂ ಎಂಬಿಬಿಎಸ್ ಮಾಡಲು ನೀಟ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಮುಂದೆ ಡಾಕ್ಟರ್ ಆಗುವ ಕನಸು ಕಾಣುತ್ತಿರುವುದಾಗಿ ತಿಳಿಸಿದ್ದಾರೆ.

ವ್ರಜೇಶ್ ದ್ವಿತೀಯ ಪಿಯುಸಿಯಲ್ಲಿ (ಸಿಬಿಎಸ್ ಸಿ) ಶೇ. 99 ರಷ್ಟು ಅಂಕ ಗಳಿಸಿದರೆ, ವ್ರಿಷಣ್ ಶೇ. 98.4 ರಷ್ಟು ಅಂಕ ಪಡೆದಿದ್ದಾರೆ. ಈ ಅವಳಿ ಸಹೋದರರ ತಂದೆ ವೀಣಾಧರ್ ಶೆಟ್ಟಿ ಹಣಕಾಸು ವಿಷಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದು, ಷೇರು ಮಾರುಕಟ್ಟೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ರೇಖಾ ವೀಣಾಧರ್ ಶೆಟ್ಟಿ ಎಂ.ಟೆಕ್ ವ್ಯಾಸಂಗ ಮಾಡಿದ್ದು, ಇದೀಗ ಗೃಹಿಣಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com