ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯ್ತಿ ಘೋಷಿಸಿದೆ.
ಭಾವನೆಗಳೇ ಇಲ್ಲದೇ ಬದುಕುತ್ತಿದ್ದ ವ್ಯಕ್ತಿಯೋರ್ವ ಶ್ವಾನದೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳುವ ಕಥಾಹಂದರ ಹೊಂದಿರುವ 777 ಚಾರ್ಲಿ’ ಸಿನಿಮಾಗೆ ಭಾರಿ ಜನಪ್ರಿಯತೆ ದೊರೆತಿದ್ದು, ಸ್ವತಃ ಸಿಎಂ ಬೊಮ್ಮಾಯಿ ಸಿನಿಮಾ ವೀಕ್ಷಿಸಿ ಭಾವುಕರಾಗಿದ್ದರು.
ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ಸಿನಿಮಾ ಎಂಬ ಮೆಚ್ಚುಗೆಯನ್ನು ಗಳಿಸಿರುವ ‘777 ಚಾರ್ಲಿ’ ಚಿತ್ರದ ಟಿಕೆಟ್ಗಳ ಮೇಲಿನ ರಾಜ್ಯ ಸರಕು ಮತ್ತು ಸೇವಾ ತೆರಿಗೆಯನ್ನು (ಎಸ್ಜಿಎಸ್ಟಿ) ಆರು ತಿಂಗಳ ಅವಧಿಗೆ ಸಂಗ್ರಹಿಸಬಾರದು ಹಾಗೂ ’ಪ್ರದರ್ಶಕರು ‘777 ಚಾರ್ಲಿ’ ಸಿನಿಮಾದ ಟಿಕೆಟ್ ಮೇಲೆ ಎಸ್ಜಿಎಸ್ಟಿ ವಿಧಿಸತಕ್ಕದ್ದಲ್ಲ ಮತ್ತು ಸಂಗ್ರಹಿಸತಕ್ಕದ್ದಲ್ಲ ಹಾಗೂ ಎಸ್ಜಿಎಸ್ಟಿ ಮೊತ್ತವನ್ನು ಕಡಿತಗೊಳಿಸಿದ ದರದಲ್ಲಿಯೇ ಟಿಕೆಟ್ಗಳನ್ನು ಮಾರಾಟ ಮಾಡತಕ್ಕದ್ದು’’ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
Advertisement