ಇಸ್ರೊ ISTRAC ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಅಧ್ಯಕ್ಷ ಸೋಮನಾಥ್ ಸೇರಿ ವಿಜ್ಞಾನಿಗಳ ತಂಡಕ್ಕೆ ಸನ್ಮಾನ, ಅಭಿನಂದನೆ

ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಮೃದುವಾಗಿ ಇಳಿದ ಕ್ಷಣ ಎಲ್ಲ ಭಾರತೀಯರನ್ನು ರೋಮಾಂಚನಗೊಳಿಸಿದೆ. ಇದಕ್ಕೆ ಇಸ್ರೊ ಸಂಸ್ಥೆಯ ಇಡೀ ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡ ಅಭಿನಂದನಾರ್ಹರು. ವಿಶ್ವದ ನಾಲ್ಕೂ ಮೂಲೆಗಳಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
ಇಸ್ರೊಗೆ ಭೇಟಿ ನೀಡಿ ಸಿಎಂ ಅಭಿನಂದನೆ
ಇಸ್ರೊಗೆ ಭೇಟಿ ನೀಡಿ ಸಿಎಂ ಅಭಿನಂದನೆ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಮೃದುವಾಗಿ ಇಳಿದ ಕ್ಷಣ ಎಲ್ಲ ಭಾರತೀಯರನ್ನು ರೋಮಾಂಚನಗೊಳಿಸಿದೆ. ಇದಕ್ಕೆ ಇಸ್ರೊ ಸಂಸ್ಥೆಯ ಇಡೀ ವಿಜ್ಞಾನಿಗಳು ಮತ್ತು ತಂತ್ರಜ್ಞರ ತಂಡ ಅಭಿನಂದನಾರ್ಹರು. ವಿಶ್ವದ ನಾಲ್ಕೂ ಮೂಲೆಗಳಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

ಇಂದು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ರೊ ಟೆಲಿಮೆಟ್ರಿ, ಪತ್ತೆಹಚ್ಚುವಿಕೆ ಮತ್ತು ಕಮಾಂಡ್ ನೆಟ್ ವರ್ಕ್ (ISTRAC) ಕೇಂದ್ರಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಪೇಟ, ಶಾಲು ತೊಡಿಸಿ ಸನ್ಮಾನಿಸಿದ್ದಲ್ಲದೆ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉಪಸ್ಥಿತರಿದ್ದರು.

ನಂತರ ಚಂದ್ರಯಾನ-3ರ ಕಾರ್ಯಾಚರಣೆ ಬಗ್ಗೆ ವಿಜ್ಞಾನಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡರು. 

ಭಾರತದ ಚಂದ್ರನ ಮಿಷನ್ ಚಂದ್ರಯಾನ-3 ನಿನ್ನೆ ಬುಧವಾರ ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿತು, ಇದು ಗುರುತು ಹಾಕದ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಇಳಿದ ಮೊದಲ ದೇಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com