ಮಂಡ್ಯ: ಉಗ್ರ ಸಂಘಟನೆ ಅಲ್-ಖೈದಾ ಜೊತೆ ಮುಸ್ಕಗೆ ಸಂಪರ್ಕವಿದೆ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದ್ದಾರೆ.
ಮಂಡ್ಯದ ಮೂಡಲಬಾಗಿಲು ಆಂಜನೇಯ ದೇವಸ್ಥಾನದ ಆವರಣದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಹಿಜಾಬ್ ಧಾರಿ ಮುಸ್ಕಾನ್ ಅಲ್ ಖೈದಾ ಜೊತೆ ನಂಟು ಹೊಂದಿದ್ದಾಳೆ. ಅಲ್-ಖೈದಾ ಮುಸ್ಕನ್ಗೆ ಹಣ ಮತ್ತು ಬೆಂಬಲ ನೀಡಿದೆ ಎಂದು ದೂರಿದ್ದಾರೆ.
ಆಕೆಗೆ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿದೆ. ಹೀಗಾಗಿ ಮಂಡ್ಯಕ್ಕೆ ಭಯೋತ್ಪಾದಕರು ಬರುವುದರಿಂದ ಜನ ಎಚ್ಚರಿಕೆ ವಹಿಸಬೇಕು ಎಂದರು. ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಲು ಅವಕಾಶ ನೀಡಿದರೆ, ಹಿಂದೂ ವಿದ್ಯಾರ್ಥಿಗಳು ತರಗತಿಗಳಿಗೆ ಕೇಸರಿ ಶಾಲು ಧರಿಸುತ್ತಾರೆ ಎಂದು ಭಟ್ ಹೇಳಿದರು.
Advertisement