ಕೆಎಸ್ ಆರ್ ಟಿಸಿ ವಿಶಿಷ್ಟ ಪ್ರಯೋಗ: 20 'ಅಂಬಾರಿ ಉತ್ಸವ' ಸ್ಲೀಪರ್ ಬಸ್ ಸೇವೆ ಆರಂಭ

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪರಿಪೂರ್ಣತೆಗೆ ಹೆಸರಾಗಿರುವ ಎಸ್ ಎಸ್ ಆರ್ ಟಿಸಿ (ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಇದೀಗ ಹೊಸತನಕ್ಕೆ ಮುನ್ನುಡಿ ಬರೆದಿದೆ. ಪ್ರಯಾಣಿಕರಿಗೆ ಇನ್ನು ಮುಂದೆ ನಿತ್ಯವೂ ‘ಅಂಬಾರಿ ಉತ್ಸವವಾಗಲಿದೆ.
ಅಂಬಾರಿ ಉತ್ಸವ ಬಸ್
ಅಂಬಾರಿ ಉತ್ಸವ ಬಸ್
Updated on

ಬೆಂಗಳೂರು: ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಪರಿಪೂರ್ಣತೆಗೆ ಹೆಸರಾಗಿರುವ ಎಸ್ ಎಸ್ ಆರ್ ಟಿಸಿ (ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಇದೀಗ ಹೊಸತನಕ್ಕೆ ಮುನ್ನುಡಿ ಬರೆದಿದೆ. ಪ್ರಯಾಣಿಕರಿಗೆ ಇನ್ನು ಮುಂದೆ ನಿತ್ಯವೂ ‘ಅಂಬಾರಿ ಉತ್ಸವವಾಗಲಿದೆ.

ಅಂಬಾರಿ ಉತ್ಸವ – ಸಂಭ್ರಮದ ಪ್ರಯಾಣ’ ಎಂಬ ಘೋಷಣೆಯು ಕೆಎಸ್ಸಾರ್ಟಿಸಿ ಅಂಗಳದಿಂದ ಪ್ರತಿಧ್ವನಿಸಿದೆ. ಮಹತ್ವಾಕಾಂಕ್ಷೆಯ ವೋಲ್ವೋ ಅಂಬಾರಿ ಬಸ್ ಸೇವೆ ಆರಂಭವಾಗಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 'ಅಂಬಾರಿ ಉತ್ಸವ' ಆರಂಭಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಮಾನದಂತಹ ಪ್ರಯಾಣದ ಅನುಭವವನ್ನು ನೀಡುವ 15 ಮೀಟರ್ ಉದ್ದದ ಬಸ್‌ ಸೇವೆ ಆರಂಭವಾಗಲಿದೆ. ಇಂತಹ 20 ಮಲ್ಟಿ-ಆಕ್ಸಲ್ ವೋಲ್ವೋ 9600 ಸ್ಲೀಪರ್ ಬಸ್‌ಗಳನ್ನು ಮಂಗಳವಾರ ತನ್ನ ಫ್ಲೀಟ್‌ಗೆ ಸೇರಿಸಲಿದೆ.

ಆದರೆ ಈ ಅಂಬಾರಿ ಉತ್ಸವ ಬಸ್ ನಿಖರವಾದ ಮಾರ್ಗ ಮತ್ತು ಟಿಕೆಟ್ ದರಗಳು ಇನ್ನೂ ಬಹಿರಂಗವಾಗಿಲ್ಲ, , ಬೆಂಗಳೂರು ಮತ್ತು ಮಂಗಳೂರು ವಿಭಾಗಗಳಿಗೆ ಬಸ್‌ಗಳನ್ನು ಸೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ನಾವು ನಮ್ಮ ಫ್ಲೀಟ್‌ಗೆ ಸೇರಿಸಲು ಬಯಸುವ 50 ಬಸ್‌ಗಳಲ್ಲಿ 20 ಅನ್ನು ವೋಲ್ವೋ ನಮಗೆ ತಲುಪಿಸಿದೆ. ವಾಹನಗಳು ನೋಂದಣಿಯಾಗಿವೆ ಮತ್ತು ಪ್ರವೇಶಕ್ಕೆ ಸಿದ್ಧವಾಗಿವೆ. ಅದರ ಹೆಸರನ್ನು ಅಂಬಾರಿ ಉಸ್ತಾವ್ - 'ಸೆಲೆಬ್ರೇಷನ್ ಆಫ್ ಜರ್ನಿ' ಎಂದು ಎಂಬ ಘೋಷವಾಕ್ಯವಿದೆ. ಕೆಎಸ್‌ಆರ್‌ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್ ಗಳಿಗಿಂತ ಅತ್ಯುತ್ತಮ ಸೌಕರ್ಯಗಳನ್ನು ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.

ಟ್ರಯಲ್ ರನ್‌ನಲ್ಲಿ ಮತ್ತು ಬೆಂಗಳೂರಿನ ಕೆಎಸ್‌ಆರ್‌ಟಿಸಿ ಡಿಪೋಗೆ ತೆರಳುತ್ತಿದ್ದಾಗ ನಾಗರಿಕರು ಬಸ್‌ನ ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ ಮತ್ತು ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ. ಎಲ್ಲಾ 20 ಬಸ್‌ಗಳನ್ನು ಮೈಸೂರು ವಿಭಾಗಕ್ಕೆ ಹಸ್ತಾಂತರಿಸಲಾಗುವುದು ಎಂಬ ವರದಿಗಳಿವೆ. ಆದರೆ ಬಸ್‌ಗಳನ್ನು ಬೆಂಗಳೂರು ಮತ್ತು ಮಂಗಳೂರು ವಿಭಾಗಗಳಿಗೆ ವಿಂಗಡಿಸಿ, ಉಳಿದ 30 ಬಸ್‌ಗಳನ್ನು ಇತರ ವಿಭಾಗಗಳಿಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಸ್ಲೀಪರ್ ಕ್ಲಾಸ್‌ಗೆ ಬೇಡಿಕೆ ಹೆಚ್ಚಿರುವ ತಿರುವನಂತಪುರಂ ಮತ್ತು ಎರ್ನಾಕುಲಂನಂತಹ ದೀರ್ಘ ಮಾರ್ಗಗಳಲ್ಲಿ ಬಸ್‌ಗಳು ಚಲಿಸಲಿವೆ ಎಂದು ಮೂಲಗಳು ತಿಳಿಸಿವೆ. ಬಸ್ ಪ್ರೀಮಿಯಂ ಸೇವೆ ಮತ್ತು ಐಷಾರಾಮಿಗಳನ್ನು ನೀಡುವುದರಿಂದ, ಅದಕ್ಕೆ ಅನುಗುಣವಾಗಿ ದರವನ್ನು ನಿಗದಿಪಡಿಸಲಾಗುತ್ತದೆ. ಸದ್ಯಕ್ಕೆ, ಈ  ಅಂಬಾರಿ  ಸ್ಲೀಪರ್ ಬಸ್‌ಗಳ ಬೆಲೆ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳಬಹುದು ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ಮಂಗಳವಾರ ಉದ್ಟಾಟಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com