20 ವರ್ಷ ಕಳೆದರೂ ನಿವೇಶನ ಪಡೆಯಲು ಬಿಡಿಎ ಕಚೇರಿಗೆ ಅಲೆಯುತ್ತಿರುವ ಕುಟುಂಬ

ಇಪ್ಪತ್ತು ವರ್ಷಗಳ ನಂತರ ಈ ಕುಟುಂಬ ಬಿಡಿಎ ಕಚೇರಿಗೆ ಅಲೆಯುತ್ತಿದೆ. ನಿನ್ನೆ ಸೋಮವಾರ ಬಿಡಿಎ ಕಚೇರಿಗೆ ಕಾಲೇಜು ವಿದ್ಯಾರ್ಥಿ ರಘು ನೂತನ ಬೆಂಗಳೂರು ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಬಂದಿದ್ದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
Updated on

ಬೆಂಗಳೂರು: ಇಪ್ಪತ್ತು ವರ್ಷಗಳ ನಂತರ ಈ ಕುಟುಂಬ ಬಿಡಿಎ ಕಚೇರಿಗೆ ಅಲೆಯುತ್ತಿದೆ. ನಿನ್ನೆ ಸೋಮವಾರ ಬಿಡಿಎ ಕಚೇರಿಗೆ ಕಾಲೇಜು ವಿದ್ಯಾರ್ಥಿ ರಘು ನೂತನ ಬೆಂಗಳೂರು ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಬಂದಿದ್ದರು.

2003ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್‌ಗಾಗಿ 36 ಗುಂಟೆ ಜಮೀನು ಬಿಟ್ಟುಕೊಟ್ಟಿದ್ದ ತಮ್ಮ ಕುಟುಂಬಕ್ಕೆ ನ್ಯಾಯ ಕೋರಿ 24ರ ಹರೆಯದ ಯುವಕ ಹೊಸ ಸಚಿವರಿಂದ ನ್ಯಾಯ ಕೇಳುವ ಭರವಸೆಯೊಂದಿಗೆ ಬಂದಿದ್ದರು. ರೈತರಾದ ರಘು ಅವರ ತಂದೆಗೆ 2003ರ ಆಗಸ್ಟ್‌ನಲ್ಲಿ 5.58 ಲಕ್ಷ ರೂಪಾಯಿಗಳನ್ನು ಅವರ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರವಾಗಿ ನೀಡಲಾಯಿತು. 

ಬಿಡಿಎ ಯೋಜನೆಗಳಿಗೆ ಸ್ವಇಚ್ಛೆಯಿಂದ ಭೂಮಿಯನ್ನು ಬಿಟ್ಟುಕೊಟ್ಟ ರೈತರಿಗೆ 1988 ರಲ್ಲಿ ಪರಿಚಯಿಸಲಾದ ನಗರಾಭಿವೃದ್ಧಿ ಇಲಾಖೆಯ ಪ್ರೋತ್ಸಾಹ ಧನ ಯೋಜನೆಯಡಿ ರಘು ಕುಟುಂಬಕ್ಕೂ ಹಣ ಸಿಗಬೇಕಿದೆ. ಪರಿಹಾರವಾಗಿ 30x40 ಚದರ ಅಡಿ ನಿವೇಶನವನ್ನು ಕೊಡುವುದಾಗಿ ಅಂದಿನ ಸರ್ಕಾರ ಭರವಸೆ ನೀಡಿತ್ತು.ಆದರೆ, ಅವರಿಗೆ ನೀಡಬೇಕಾದ ಭೂಮಿ ಇನ್ನೂ ಹಸ್ತಾಂತರವಾಗಿಲ್ಲ ಎಂದು ರಘು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡುತ್ತಾ ಹೇಳಿದರು. 

ಕಳೆದ ಕೆಲವು ತಿಂಗಳುಗಳಲ್ಲಿ ನಾನು ಈಗಿನ ಆಯುಕ್ತ ಕುಮಾರ್ ನಾಯ್ಕ್ ಅವರ ಕಚೇರಿಗೆ ಕನಿಷ್ಠ ಹತ್ತು ಬಾರಿ ಭೇಟಿ ನೀಡಿದ್ದೇನೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕೆಲಸದ ವೈಖರಿ, ವರ್ತನೆ, ಮಾತುಗಳಿಂದ ತೀರಾ ಬೇಸತ್ತು ಹೋಗಿದ್ದೇನೆ. ಕಮಿಷನರ್ ಮತ್ತು ಇತರರ ಮುಂದೆ ಅಳಲು ತೋಡಿಕೊಂಡರೆ ಕೇಳುವವರಿಲ್ಲ. 20 ವರ್ಷಗಳಿಂದ ನಮಗೆ ನ್ಯಾಯವೇ ಸಿಕ್ಕಿಲ್ಲ, ಹೀಗಾಗಿ ನೂತನ ಸಚಿವರನ್ನು ಭೇಟಿ ಮಾಡಲು ಬಂದಿದ್ದೇನೆ ಎನ್ನುತ್ತಾರೆ. 

ನನ್ನ ತಂದೆ 2006 ರಲ್ಲಿ ನಿಧನರಾದರು. 2018 ರಲ್ಲಿ ಮಾತ್ರ ಈ ಯೋಜನೆ ಬಗ್ಗೆ ನನಗೆ ತಿಳಿದಿದ್ದು, ತಮ್ಮ ಜಮೀನು ನೀಡಿದ ಇತರ ಕೆಲವು ರೈತರಿಗೆ ನಿವೇಶನ ಸಿಕ್ಕಿರುವುದು ಗೊತ್ತಾಯಿತು. ಅಂದಿನಿಂದ ನಾನು ಬಿಡಿಎ ಕಚೇರಿಯಲ್ಲಿ ಅಲೆಯುತ್ತಿದ್ದೇನೆ. ನಮಗೆ ಬರಬೇಕಾದ ಭೂಮಿ ಸಿಕ್ಕಿಲ್ಲ ಆದರೆ ನಿನ್ನೆ ರಘು ಅವರಿಗೆ ಸಚಿವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.

ಬೆಂಗಳೂರು ನಗರಾಭಿವೃದ್ಧಿ ನೂತನ ಸಚಿವ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಸಲ್ಲಿಸಲು ಜ್ಞಾಪಕ ಪತ್ರವನ್ನು ತಂದಿದ್ದರೂ ಸಾಧ್ಯವಾಗಲಿಲ್ಲ. ನಮಗೆ ಹಲವು ಸಮಸ್ಯೆಗಳಿವೆ. ಒಳಚರಂಡಿ, ನೀರಿನ ರಸ್ತೆ ಮತ್ತು ಮೂಲಸೌಕರ್ಯಗಳಂತಹ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ 50 ರಿಂದ 60% ಮಾತ್ರ ಪೂರ್ಣಗೊಂಡಿದೆ ಎಂದು ಬಿಡಿಎ ಅಧ್ಯಕ್ಷ ಶ್ರೀಧರ್ TNIE ಗೆ ತಿಳಿಸಿದರು. ಯುವಕ ರಘು ಅವರು ಸಲ್ಲಿಸಿರುವ ಮನವಿ ಪತ್ರವನ್ನು ಸಚಿವರಿಗೆ ನಂತರ ಮೇಲ್ ಮಾಡುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com