ಸ್ಲಂಬೋರ್ಡ್ ನಿರ್ಮಿಸಿರುವ ಮನೆಗಳನ್ನು ಕೂಡಲೇ ಸ್ವಾದೀನಪಡಿಸಿಕೊಳ್ಳಿ: ಮೈಸೂರು ಪಾಲಿಕೆಗೆ ಕೆ.ಹರೀಶ್ ಗೌಡ ಸೂಚನೆ

ದಶಕದ ಹಿಂದೆ ರಾಜರಾಜೇಶ್ವರಿನಗರ, ಮೇದಾರ ಬ್ಲಾಕ್, ಎಕೆ ಕಾಲೋನಿ ಹಾಗೂ ನಂದ ಗೋಕುಲಂನಲ್ಲಿ ಸ್ಲಂ ಬೋರ್ಡ್ ವತಿಯಿಂದ 4.05 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ 894 ಮನೆಗಳ ದುರಸ್ತಿಗೆ ಎಂಸಿಸಿ ಮುಂದಾಗಿದೆ.
ಹರೀಶ್ ಗೌಡ
ಹರೀಶ್ ಗೌಡ
Updated on

ಮೈಸೂರು: ಮೈಸೂರು ನಗರದಲ್ಲಿ ಜೆಎನ್‌ಎನ್‌ಯುಆರ್‌ಎಂ ಯೋಜನೆಯಡಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ಮನೆಗಳನ್ನು ಶೀಘ್ರದಲ್ಲೇ ಮೈಸೂರು ನಗರ ಪಾಲಿಕೆಗೆ ಹಸ್ತಾಂತರಿಸಲಾಗುವುದು.

ಸೋಮವಾರ ಎಂಸಿಸಿ ಕಚೇರಿಯಲ್ಲಿ ಶಾಸಕ ಕೆ.ಹರೀಶ್‌ಗೌಡ ಅವರು ಚಾಮರಾಜ ಕ್ಷೇತ್ರದಲ್ಲಿ ಆರಂಭಿಸಿರುವ ಕಾಮಗಾರಿಗಳ ಪ್ರಗತಿ ಕುರಿತು ಚರ್ಚಿಸಿದ ಸಭೆಯಲ್ಲಿಈ ಸಂಬಂಧ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಎಂಸಿಸಿ ಆಯುಕ್ತ ಜಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ದಶಕದ ಹಿಂದೆ ರಾಜರಾಜೇಶ್ವರಿನಗರ, ಮೇದಾರ ಬ್ಲಾಕ್, ಎಕೆ ಕಾಲೋನಿ ಹಾಗೂ ನಂದ ಗೋಕುಲಂನಲ್ಲಿ ಸ್ಲಂ ಬೋರ್ಡ್ ವತಿಯಿಂದ 4.05 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ 894 ಮನೆಗಳ ದುರಸ್ತಿಗೆ ಎಂಸಿಸಿ ಮುಂದಾಗಿದೆ.

ಸ್ಲಂ ಬೋರ್ಡ್ ಅಧಿಕಾರಿಗಳು ಎಂಸಿಸಿ ಅಧಿಕಾರಿಗಳೊಂದಿಗೆ ಮನೆಗಳಲ್ಲಿನ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಿ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಹತ್ತು ವರ್ಷಗಳ ಹಿಂದೆಯೇ ಮನೆಗಳನ್ನು ನಿರ್ಮಿಸಲಾಗಿದ್ದು, ಕಟ್ಟಡಗಳನ್ನು ಹಸ್ತಾಂತರಿಸುವ ಮುನ್ನ ಎಲ್ಲ ಸೌಕರ್ಯಗಳನ್ನು ಒದಗಿಸಿ ದುರಸ್ತಿ ಮಾಡುವಂತೆ ಮಂಡಳಿಗೆ ಒತ್ತಾಯಿಸಿದ್ದರಿಂದ ಪಾಲಿಕೆಗೆ ಮನೆಗಳನ್ನು ಹಸ್ತಾಂತರಿಸುವಲ್ಲಿ ಸಮಸ್ಯೆ ಉಂಟಾಗಿದೆ. ಆದರೆ, ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲು ನಾವೇ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದೇವೆ ಎಂದರು.

ಕೂಡಲೇ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ದುರಸ್ತಿಗೊಳಿಸುವಂತೆ ಶಾಸಕ ಹರೀಶ್ ಗೌಡ ಆಯುಕ್ತರಿಗೆ ಮನವಿ ಮಾಡಿದರು. ನಿವಾಸಿಗಳಿಗೆ ತಮ್ಮ ಮನೆಗಳನ್ನು ದುರಸ್ತಿ ಮಾಡಲು ನಿಗಮವು ಶಿಕ್ಷಣ ನೀಡಬೇಕಾಗಿತ್ತು. ಆದರೆ ಮಾಡಲಿಲ್ಲ ಹೀಗಾಗಿ ಭವಿಷ್ಯದಲ್ಲಿ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ನಿರ್ವಹಣೆಯು ಪಾಲಿಕೆಗೆ ದೊಡ್ಡ ಹೊರೆಯಾಗಲಿದೆ ಎಂದು ಅವರು ಹೇಳಿದರು.

ಸಿವಿಲ್ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ

ಸಿವಿಲ್ ಗುತ್ತಿಗೆದಾರ ಚಂದ್ರಶೇಖರಯ್ಯ ಅವರು ಎಸ್‌ಎಫ್‌ಸಿ ಅನುದಾನದಲ್ಲಿ ಆರು ಕಾಮಗಾರಿ ಪ್ಯಾಕೇಜ್‌ಗಳನ್ನು ತೆಗೆದುಕೊಂಡಿದ್ದು, ನಿಗದಿತ ಸಮಯದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದಾಗ, ಅಂತಿಮ ಸೂಚನೆ ನೀಡಿ ಟೆಂಡರ್ ರದ್ದುಗೊಳಿಸುವಂತೆ ಶಾಸಕ ಹರೀಶ್ ಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಗುತ್ತಿಗೆದಾರರು ಎರಡು ವರ್ಷಗಳ ನಂತರವೂ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಮತ್ತು ಹಣವನ್ನು ತಡೆಹಿಡಿಯುವ ಮೂಲಕ ಟೆಂಡರ್  ರದ್ದುಗೊಳಿಸಿ,  ಚಂದ್ರಶೇಖರಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ  ಎಂದರು.

ಕೆಂಪೇಗೌಡ ಕ್ರೀಡಾಂಗಣದಲ್ಲಿ 25 ರೂ. ವೆಚ್ಚದಲ್ಲಿ ಫೋಕಸ್ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ಹೇಳಿದಾಗ, ಶಾಸಕ ಹರೀಶ್ ಗೌಡ ಅವರು ವಿದ್ಯುತ್ ವ್ಯರ್ಥವಾಗಿರುವುದರಿಂದ ಯೋಜನೆಯನ್ನು ನಿಲ್ಲಿಸಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com