ಮೆಟ್ರೊ ರೈಲಿನಲ್ಲಿ ಸಿಸಿಟಿವಿ ಕ್ಯಾಮರಾ ಮುಚ್ಚಿದ ಇಬ್ಬರು ಶಾಲಾ ಬಾಲಕರು: ಮೆಟ್ರೊ ಕಾಯ್ದೆಯಡಿ ಕೇಸು ದಾಖಲು

ಗ್ರೀನ್ ಲೈನ್‌ನಲ್ಲಿ ಮೆಟ್ರೋ ರೈಲಿನ ಬೋಗಿಯಲ್ಲಿ ಸಿಸಿಟಿವಿ ಕ್ಯಾಮೆರಾ ಕಾಣದಂತೆ ಮುಚ್ಚಿದ ನಗರದ ಪ್ರತಿಷ್ಠಿತ ಶಾಲೆಯ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಮೆಟ್ರೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಮ್ಮ ಮೆಟ್ರೊ ರೈಲುಗಳಲ್ಲಿ ಇಂತಹ ಪ್ರಕರಣ ವರದಿಯಾಗುತ್ತಿರುವುದು ಇದೇ ಮೊದಲು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಮೂಲಗಳು ತಿಳಿಸಿವ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗ್ರೀನ್ ಲೈನ್‌ನಲ್ಲಿ ಮೆಟ್ರೋ ರೈಲಿನ ಬೋಗಿಯಲ್ಲಿ ಸಿಸಿಟಿವಿ ಕ್ಯಾಮೆರಾ ಕಾಣದಂತೆ ಮುಚ್ಚಿದ ನಗರದ ಪ್ರತಿಷ್ಠಿತ ಶಾಲೆಯ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಮೆಟ್ರೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಮ್ಮ ಮೆಟ್ರೊ ರೈಲುಗಳಲ್ಲಿ ಇಂತಹ ಪ್ರಕರಣ ವರದಿಯಾಗುತ್ತಿರುವುದು ಇದೇ ಮೊದಲು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಮೂಲಗಳು ತಿಳಿಸಿವೆ.

ಇಬ್ಬರೂ ನವೆಂಬರ್ 9 ರಂದು ಶಾಲೆ ಮುಗಿಸಿ ಕೋಣನಕುಂಟೆ ಕ್ರಾಸ್‌ನಿಂದ ಜಯನಗರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಅಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಇಬ್ಬರು ಬಾಲಕರು ಬಾಗಿಲ ಬಳಿ ನಿಂತಿದ್ದರು. ಅವರಲ್ಲಿ ಒಬ್ಬ ಸ್ಟಿಕ್ಕರ್ ತೆಗೆದುಕೊಂಡು ಅದನ್ನು ಕೋಚ್‌ನ ಬಾಗಿಲಿನ ಬಳಿ ಇರುವ ಕ್ಯಾಮೆರಾಗಳಲ್ಲಿ ಒಂದಕ್ಕೆ ಅಂಟಿಸಿದನು.ಇನ್ನೊಬ್ಬ ಅದಕ್ಕೆ ಸಹಾಯ ಮಾಡಿದ್ದಾನೆ. ಅಡ್ಡಲಾಗಿ ಕುಳಿತಿದ್ದ ಅವರ ಸಹಪಾಠಿಗಳು ಇದನ್ನು ವೀಕ್ಷಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರತಿ ಕೋಚ್‌ನಲ್ಲಿ ನಾಲ್ಕು ಸಿಸಿಟಿವಿ ಕ್ಯಾಮೆರಾಗಳಿವೆ, ಅವೆಲ್ಲವನ್ನೂ ರೈಲು ನಿರ್ವಾಹಕರ (TO) ಕ್ಯಾಬಿನ್‌ನಲ್ಲಿರುವ ಮಾನಿಟರ್‌ನಿಂದ ವೀಕ್ಷಿಸಬಹುದು.

ಒಂದು ಅಲರ್ಟ್ ಕ್ಯಾಮರಾದಲ್ಲಿ ವಿಡಿಯೊ ಫೋಟೋ ದಾಖಲಾಗದಿರುವುದನ್ನು ಗಮನಿಸಿದರು. ಮುಂದಿನ ನಿಲ್ದಾಣದಲ್ಲಿ ಏನಾಯಿತು ಎಂಬುದನ್ನು ಪರಿಶೀಲಿಸಿದರು. ಸ್ಟಿಕ್ಕರ್ ನ್ನು ತೆಗೆದುಹಾಕಲಾಗಿದೆ ಮತ್ತು ಕೋಚ್‌ನಲ್ಲಿನ ಇತರ ಕ್ಯಾಮೆರಾಗಳು ಸೆರೆಹಿಡಿಯಲಾದ ಘಟನೆಯ ದೃಶ್ಯ ಫೀಡ್ ನ್ನು ಅದೇ ಸಂಜೆ ಬಿಎಂಆರ್ ಸಿಎಲ್ ನ ಭದ್ರತಾ ತಂಡಕ್ಕೆ ಕಳುಹಿಸಲಾಗಿದೆ.

ವಿದ್ಯಾರ್ಥಿಗಳು ಧರಿಸಿದ್ದ ಸಮವಸ್ತ್ರದ ಆಧಾರದ ಮೇಲೆ ನಾವು ಶಾಲೆಯನ್ನು ಗುರುತಿಸಿದ್ದೇವೆ. ಮರುದಿನ ಬೆಳಗ್ಗೆ ವಿದ್ಯಾರ್ಥಿಯೊಬ್ಬ ಜಯನಗರದಲ್ಲಿ ರೈಲು ಹತ್ತಿದಾಗ, ಆತನನ್ನು ನಿಲ್ದಾಣದ ಕಂಟ್ರೋಲರ್ ರೂಂಗೆ ಕರೆದೊಯ್ಯಲಾಯಿತು. ಘಟನೆಯ ಬಗ್ಗೆ ಅವರ ಕುಟುಂಬ ಮತ್ತು ಶಾಲೆಗೆ ತಿಳಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಮತ್ತೊಬ್ಬ ಬಾಲಕ ಠಾಣೆಯಿಂದ ಹೊರಗೆ ಹೋಗಿದ್ದಾನೆ ಎಂದು ಅವರು ಹೇಳಿದರು.

ಮೆಟ್ರೋ ಕಾಯ್ದೆಯ ಸೆಕ್ಷನ್ 59 ರ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲಕನ ಮನೆಯವರು 500 ರೂಪಾಯಿ ದಂಡ ಪಾವತಿಸಿದ್ದು, ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾರೆ.

ಕಾಯಿದೆಯಡಿಯಲ್ಲಿ, ಯಾವುದೇ ವ್ಯಕ್ತಿಯು ವಿಧ್ವಂಸಕ ಕೃತ್ಯವನ್ನು ಅಥವಾ ಅಸಭ್ಯತೆಯ ಕೃತ್ಯವನ್ನು ಉದ್ದೇಶಪೂರ್ವಕವಾಗಿ ಅಥವಾ ಕ್ಷಮೆಯಿಲ್ಲದೆ ಯಾವುದೇ ಪ್ರಯಾಣಿಕರ ಸೌಕರ್ಯಗಳಿಗೆ ಹಸ್ತಕ್ಷೇಪ ಮಾಡಿದರೆ, ಶಿಕ್ಷಾರ್ಹ ಅಪರಾಧವಾಗುತ್ತದೆ. 500 ರೂಪಾಯಿ ದಂಡದೊಂದಿಗೆ ವ್ಯಕ್ತಿಯನ್ನು ರೈಲಿನಲ್ಲಿ ಪ್ರಯಾಣಿಸದೆ ಹೊರಗೆ ಕಳುಹಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com