ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷಕ್ಕೆ ತಡೆ!

ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷ ನಿಯಂತ್ರಣಕ್ಕೆ ಬಂದಿದೆ.
ಬಂಡೀಪು ಅರಣ್ಯ- ಗ್ರಾಮ ಗಡಿ ಭಾಗದಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್
ಬಂಡೀಪು ಅರಣ್ಯ- ಗ್ರಾಮ ಗಡಿ ಭಾಗದಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್
Updated on

ಮೈಸೂರು: ಬಂಡೀಪುರ ಅರಣ್ಯಾಧಿಕಾರಿಗಳ ಸರಳ ಉಪಾಯದಿಂದ ಮಾನವ- ಆನೆ ಸಂಘರ್ಷ ನಿಯಂತ್ರಣಕ್ಕೆ ಬಂದಿದೆ.

ಆನೆ ನಿರೋಧಕ ಕಂದಕ (ಇಪಿಟಿ) ಹಾಗೂ ಕೃಷಿ ಭೂಮಿಯ ಜಾಗದ ನಡುವೆ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಆನೆಗಳಿಗೆ ಮನುಷ್ಯನ ಇರುವಿಕೆ ಇರುವ ಪ್ರದೇಶಗಳಿಗೆ ಬಾರದಂತೆ ತಡೆಯೊಡ್ಡಲಾಗಿದೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳ ಉಪಾಯ ಇದಾಗಿದ್ದು, ಈ ಹಿಂದೆ ಆನೆಗಳು ಅರಣ್ಯದ ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ದಾಂಗುಡಿ ಇಡುತ್ತಿದ್ದದ್ದು ಸಾಮಾನ್ಯವಾಗಿತ್ತು. ನಿಯಂತ್ರಕ ಕ್ರಮವಾಗಿ ಅರಣ್ಯ ಸಿಬ್ಬಂದಿಗಳು ಆನೆ ನಿರೋಧಕ ಕಂದಕವನ್ನು ತೋಡಿದ್ದರು ಆದರೆ ಆನೆಗಳು ಗ್ರಾಮ ಪ್ರವೇಶಿಸುವುದು ಮುಂದುವರೆದಿತ್ತು. 1 ಕಿ.ಮೀ ವ್ಯಾಪ್ತಿಗೆ ಬ್ಯಾರಿಕೇಡ್ ಗಳನ್ನು ಹಾಕಲು ರೈಲ್ವೆ ಇಲಾಖೆಯಿಂದ ರೈಲು ಕಂಬಿಗಳನ್ನು 1.3 ಕೋಟಿ ರೂಪಾಯಿ ನೀಡಿ ಖರೀದಿಸಲಾಗಿತ್ತು. ಆದರೂ ಅರಣ್ಯ ಸಿಬ್ಬಂದಿಗಳಿಗೆ ಆನೆಗಳು ಬ್ಯಾರಿಕೇಡ್ ದಾಟದಂತೆ ಮಾಡಲು ಸಾಧ್ಯವಾಗಿರಲಿಲ್ಲ.

ಗ್ರಾಮಗಳೆಡೆಗೆ ನಾವು ರೈಲು ಬ್ಯಾರಿಕೇಡ್ ಗಳನ್ನು ಅಳವಡಿಸುತ್ತಿದ್ದೇವೆ, ಇದಕ್ಕೂ ಮುನ್ನ ಈ ಬ್ಯಾರಿಕೇಡ್ ಗಳನ್ನು ಇಪಿಟಿಗಳ ಬಳಿ ಅರಣ್ಯದೆಡೆಗೆ ಅಳವಡಿಸಲಾಗಿತ್ತು. ಇದರಿಂದಾಗಿ ಆನೆಗಳಿಗೆ ಬ್ಯಾರಿಕೇಡ್ ಗಳನ್ನು ಹತ್ತಿ ಟ್ರೆಂಚ್ ನ್ನು ದಾಟಲು ಸುಲಭವಾಗುತ್ತಿತ್ತು. ಈಗ ಹೊಸ ವಿಧಾನದಲ್ಲಿ ಆನೆಗಳಿಗೆ ಬ್ಯಾರಿಕೇಡ್ ನ್ನು ದಾಟುವುದು ಕಷ್ಟವಾಗಲಿದೆ ಎಂದು ಬಿಟಿಆರ್ ನ ನಿರ್ದೇಶಕ ರಮೇಶ್ ಕುಮಾರ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com