Loksabha Polls 2024: ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಎಡವಟ್ಟು, ನಾಮಪತ್ರ ಸಲ್ಲಿಸದೆ ವಾಪಸ್!

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಎಡವಟ್ಟು ಮಾಡಿಕೊಂಡಿದ್ದು ಇಂದು ನಾಮಪತ್ರ ಸಲ್ಲಿಸದೆ ವಾಪಸ್ ಆಗಿದ್ದಾರೆ.
ಪ್ರದೀಪ್ ಈಶ್ವರ್-ರಕ್ಷಾ ರಾಮಯ್ಯ
ಪ್ರದೀಪ್ ಈಶ್ವರ್-ರಕ್ಷಾ ರಾಮಯ್ಯ
Updated on

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಎಡವಟ್ಟು ಮಾಡಿಕೊಂಡಿದ್ದು ಇಂದು ನಾಮಪತ್ರ ಸಲ್ಲಿಸದೆ ವಾಪಸ್ ಆಗಿದ್ದಾರೆ.

ರಕ್ಷಾ ರಾಮಯ್ಯ ಅವರ ಪಿಎ ಅಸಲಿ ನಾಮಪತ್ರವನ್ನು ತೆಗೆದುಕೊಂಡು ಬರದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳ ಮುಂದೆ ಪೇಚಿಗೆ ಸಿಲುಕಿದ ರಕ್ಷಾ ರಾಮಯ್ಯ ಅವರು ಇಂದು ನಾಮಪತ್ರ ಸಲ್ಲಿದೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರದೀಪ್ ಈಶ್ವರ್-ರಕ್ಷಾ ರಾಮಯ್ಯ
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಮಂಡ್ಯ ಬಿಟ್ಟು ಹೋಗಲ್ಲ; ಏ.6ರಂದು ಬಿಜೆಪಿ ಸೇರ್ಪಡೆ: ಸುಮಲತಾ ಅಂಬರೀಷ್

ಇಂದು ನಾಮಪತ್ರ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೇಸರಗೊಂಡ ರಕ್ಷಾ ರಾಮಯ್ಯ ಅವರು ಚುನಾವಣಾಧಿಕಾರಿ ಕಚೇರಿ ಬಳಿ ಫೋಟೋ ತೆಗೆಸಿಕೊಂಡು ವಾಪಸ್ ಆಗಿದ್ದಾರೆ.

ನಾಮಪತ್ರ ಸಲ್ಲಿಸಲು ಏಪ್ರಿಲ್ 4ಕ್ಕೂ ಕೊನೆಯ ದಿನವಾಗಿದ್ದು, ಏಪ್ರಿಲ್ 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.

ರಕ್ಷಾ ರಾಮಯ್ಯ ಅವರು ಎರಡು ತಂಡಗಳಲ್ಲಿ ತೆರಳಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರು. ಅದರಂತೆ ರಕ್ಷಾ ರಾಮಯ್ಯ ಮೊದಲ ತಂಡದ ಜೊತೆ ನಾಮಪತ್ರ ಹಾಕಿದ್ದರು. ಈ ವೇಳೆ ಅವರು ಎರಡನೇ ತಂಡದವರ ಜೊತೆ ಆಗಮಿಸಿದ್ದು, ಎರಡನೇ ತಂಡದವರ ಜೊತೆ ಸಲ್ಲಿಸಲು ಅಸಲಿ ನಾಮಪತ್ರವೇ ಇರಲಿಲ್ಲ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com