ಕೊಡಗು: ಎಸ್ಟೇಟ್ ನಲ್ಲಿ ಕಾರ್ಮಿಕನನ್ನು ಕೊಂದಿದ್ದ ಹುಲಿ ಸೆರೆ
ಕೊಡಗು: ಇತ್ತೀಚೆಗೆ ಕೊಡಗಿನಲ್ಲಿ ಎಸ್ಟೇಟ್ ಕಾರ್ಮಿಕನನ್ನು ಕೊಂದಿತ್ತು ಎನ್ನಲಾದ ಹುಲಿಯನ್ನು ಇಂದು (ಶುಕ್ರವಾರ, 19-04-2024) ಸೆರೆ ಹಿಡಿಯಲಾಗಿದೆ. ಈ ಕಾರ್ಯಾಚರಣೆಯಲ್ಲಿ 70 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಭಾಗಿಯಾಗಿದ್ದರು.
ಗುರುವಾರದಂದು ಅಸ್ಸಾಂ ಮೂಲದ ಮೊಹಿಸಿರ್ ರೆಹಮಾನ್(50) ಎಂಬಾತನನ್ನು ದಕ್ಷಿಣ ಕೊಡಗಿನ ನಿಟ್ಟೂರು ಗ್ರಾಮದ ಕೃಷಿ ಭೂಮಿಯಲ್ಲಿ ಹುಲಿ ಕೊಂದಿತ್ತು. ಘಟನೆಯಿಂದ ಆತಂಕಗೊಂಡ ರೈತರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಕ್ಷಣವೇ ಹುಲಿಯನ್ನು ಹಿಡಿಯುವಂತೆ ಒತ್ತಾಯಿಸಿದರು.
ಇದರ ಬೆನ್ನಲ್ಲೇ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡಿದ್ದು, ಶುಕ್ರವಾರ ಮುಂಜಾನೆ ಆರಂಭವಾದ ಕೂಂಬಿಂಗ್ ಮತ್ತು ಸೆರೆ ಕಾರ್ಯಾಚರಣೆಯಲ್ಲಿ ಒಟ್ಟು 76 ಕಾಡಾನೆಗಳು ಭಾಗಿಯಾಗಿದ್ದವು.
“ನಾವು ಸಂಘರ್ಷವಿದ್ದ ಪ್ರದೇಶದಾದ್ಯಂತ ಕ್ಯಾಮೆರಾ ಟ್ರ್ಯಾಪ್ಗಳನ್ನು ಇರಿಸಿದ್ದೆವು ಮತ್ತು ಸಂಘರ್ಷದ ವಲಯದಲ್ಲಿ ಹುಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಕಾರ್ಮಿಕನನ್ನು ಕೊಂದ ಹುಲಿ ಮತ್ತು ತಿರುಗಾಡುತ್ತಿದ್ದ ಹುಲಿಯ ಛಾಯಾಚಿತ್ರಗಳನ್ನು ತಾಳೆ ಹಾಕಲಾಗಿದೆ ಎಂದು ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ತಿಳಿಸಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಲ್ಲಾಳ ಪ್ರದೇಶದಲ್ಲಿ ಮೊದಲು ಹುಲಿ ಕಾಣಿಸಿಕೊಂಡಿತ್ತು ಎಂದು ಡಿಸಿಎಫ್ ಜಗನ್ನಾಥ್ ಹೇಳಿದರು. ನಂತರ ಅರಣ್ಯ ಇಲಾಖೆ ಪಶುವೈದ್ಯಾಧಿಕಾರಿ ರಮೇಶ್ ಸೆರೆಹಿಡಿಯಲಾದ ಹುಲಿಯನ್ನು ಶಾಂತಗೊಳಿಸಿದರು. 11 ವರ್ಷದ ಹುಲಿಯ ಎಡಗಾಲಿನಲ್ಲಿ ಗಾಯದ ಗುರುತುಗಳಿದ್ದು, ಕೂರ್ಗಳ್ಳಿಯಲ್ಲಿರುವ ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ ಪುನರ್ವಸತಿ ಕಲ್ಪಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಗನಾಥ್ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಮುಕ್ತಿ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಿಸಿಎಫ್ ಮನೋಜ್ ತ್ರಿಪಾಟಿ, ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಸಂತ್ರಸ್ತ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಯಿತು. ಸಂತ್ರಸ್ತೆಯ ಪತ್ನಿಗೆ ಮಾಸಿಕ 4000 ರೂಪಾಯಿ ಪಿಂಚಣಿ ಮೊತ್ತವನ್ನೂ ಹಸ್ತಾಂತರಿಸಲಾಗುವುದು ಎಂದು ಡಿಸಿಎಫ್ ಖಚಿತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ