ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಯಾದಗಿರಿ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು

ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾಗಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಮಂಗಳಾರ ನಡೆದಿದೆ.

ಯಾದಗಿರಿ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾಗಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಮಂಗಳಾರ ನಡೆದಿದೆ.

ಮೃತ ಬಾಲಕರನ್ನು ಹೈಯಾಳಪ್ಪ(11), ಶರಣಬಸವ(10) ಹಾಗೂ ಅನಿಲ(10) ಎಂದು ಗುರುತಿಸಲಾಗಿದ್ದು, ಇಬ್ಬರು ನಗನೂರು ಗ್ರಾಮದವರಾದರೆ, ಇನ್ನೋರ್ವ ಬಾಲಕ ಖಾನಾಪುರ ಗ್ರಾಮದ‌ ನಿವಾಸಿಯಾಗಿದ್ದಾರೆ.

ಮೃತ ಮೂವರು ಬಾಲಕರ ಶವವನ್ನು ಸ್ಥಳೀಯರು ಕೆರೆಯಿಂದ ಹೊರೆತೆಗೆದಿದ್ದಾರೆ.

ಈ ಕುರಿತು ಕೆಂಭಾವಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com