ಮೈಸೂರು: ಅನುಷ್ ಎ ಶೆಟ್ಟಿಯವರ ‘ಸಾರಾ’ ಕಾದಂಬರಿ ಬಿಡುಗಡೆ ಮಾಡಿದ ಪ್ರಕಾಶ್ ರಾಜ್!

ಒಂದು ಶ್ರೇಷ್ಠ ಸಾಹಿತ್ಯವು ಕೇವಲ ಆನಂದವನ್ನು ನೀಡುವುದಲ್ಲದೆ ಜ್ಞಾನವನ್ನು ನೀಡುತ್ತದೆ. 'ಸಾರಾ' ಈ ಎರಡೂ ಅಂಶಗಳನ್ನು ಹೊಂದಿದೆ. ಕಥೆಯು ತುಂಬಾ ಆಕರ್ಷಕವಾಗಿದೆ.
ಪ್ರಕಾಶ್ ರಾಜ್ ಮತ್ತಿತರರು
ಪ್ರಕಾಶ್ ರಾಜ್ ಮತ್ತಿತರರು
Updated on

ಮೈಸೂರು: ಹೆರಿಟೇಜ್ ಹೌಸ್ ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಲೇಖಕ ಅನುಷ್ ಎ ಶೆಟ್ಟಿ ಅವರ ಐದನೇ ಕಾದಂಬರಿ ‘ಸಾರಾ’ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಪ್ರಕಾಶ್ ರಾಜ್ "ಒಂದು ಶ್ರೇಷ್ಠ ಸಾಹಿತ್ಯವು ಕೇವಲ ಆನಂದವನ್ನು ನೀಡುವುದಲ್ಲದೆ ಜ್ಞಾನವನ್ನು ನೀಡುತ್ತದೆ. 'ಸಾರಾ' ಈ ಎರಡೂ ಅಂಶಗಳನ್ನು ಹೊಂದಿದೆ. ಕಥೆಯು ತುಂಬಾ ಆಕರ್ಷಕವಾಗಿದೆ ಎಂದರು.

ಲೇಖಕನಿಗೆ ಪದಗಳ ಮೂಲಕ ಎದ್ದುಕಾಣುವ ಚಿತ್ರಣವನ್ನು ಸೃಷ್ಟಿಸುವ ಸಾಮರ್ಥ್ಯ ಇರಬೇಕು. ಈ ಕಾದಂಬರಿಯು ದೃಶ್ಯ ಆಕರ್ಷಣೆಯನ್ನು ಉಳಿಸಿಕೊಂಡು ವಾಸ್ತವದ ಸಾರವನ್ನು ಸುಂದರವಾಗಿ ಬಹಿರಂಗಪಡಿಸುತ್ತದೆ. ಇದು ಪುಸ್ತಕವನ್ನು ಮೀರಿ ಲೇಖಕರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಆಳವಾದ ಕುತೂಹಲವನ್ನು ನನ್ನಲ್ಲಿ ಹುಟ್ಟುಹಾಕಿದೆ ಎಂದು ಹೇಳಿದರು.

ಪ್ರಕಾಶ್ ರಾಜ್ ಮತ್ತಿತರರು
ಪ್ರಕಾಶ್ ರಾಜ್ ಒಬ್ಬ ಅಜ್ಞಾನಿ, ಕೆಟ್ಟ ಹೋರಾಟಗಾರ; ಪ್ರಧಾನಿ ಮೋದಿಗೆ ಬೆಂಬಲ?: ಅಚ್ಚರಿ ಮೂಡಿಸಿದ ನಟ ಚೇತನ್ ಪೋಸ್ಟ್!

ವೈಯಕ್ತಿಕ ಅನುಭವವನ್ನು ಮೆಲುಕು ಹಾಕಿದ ಪ್ರಕಾಶ್ ರಾಜ್, ನಾವು ದೂರದಿಂದ ಗ್ರ್ಯಾಂಡ್ ಆಗಿ ಕಾಣಿಸಿಕೊಳ್ಳುತ್ತೇವೆ, ಆದರೆ ನಿಜವಾಗಿ, ನಮ್ಮ ಹಾದಿಯಲ್ಲಿ ನಾವೆಲ್ಲರೂ ಚಿಕ್ಕವರು, ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ 'ಒಗ್ಗರಣೆ' ಚಿತ್ರದ ಚಿತ್ರೀಕರಣದ ವೇಳೆ ಬ್ಯಾಂಡ್ ಕಲಾವಿದ ಯುವಕನೊಬ್ಬ ಪರಿಚಯವಾಯಿತು. ನಿರ್ದಿಗಂತ ಮೂಲಕ ರಂಗಭೂಮಿಗೆ ಮರಳಿದಾಗ ಅದೇ ಯುವಕ ಅನುಷ್ ಈಗ ನನ್ನ ಪಕ್ಕದಲ್ಲಿ ನಿಂತಿದ್ದಾನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com