ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಗೆ ಸನ್ಮಾನ: ಪಿಎಸ್ಐ ತಿಮ್ಮರಾಯಪ್ಪ ವರ್ಗಾವಣೆ

ಬಿಗ್‌ ಬಾಸ್‌ ಕನ್ನಡ 10ನೇ ಆವೃತ್ತಿಯ ನಾಲ್ಕನೇ ರನ್ನರ್‌ ಅಪ್‌ ವರ್ತೂರ್‌ ಸಂತೋಷ್‌ ಗೆ ಸನ್ಮಾನ ಮಾಡಿದ್ದ ಪಿಎಸ್ಐ ರನ್ನು ವರ್ಗಾವಣೆ ಮಾಡಲಾಗಿದೆ.
ವರ್ತೂರ್ ಸಂತೋಷ್ ಗೆ ಸನ್ಮಾನಿಸಿದ ಪಿಎಸ್ಐ ತಿಮ್ಮರಾಯಪ್ಪ
ವರ್ತೂರ್ ಸಂತೋಷ್ ಗೆ ಸನ್ಮಾನಿಸಿದ ಪಿಎಸ್ಐ ತಿಮ್ಮರಾಯಪ್ಪ

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ 10ನೇ ಆವೃತ್ತಿಯ ನಾಲ್ಕನೇ ರನ್ನರ್‌ ಅಪ್‌ ವರ್ತೂರ್‌ ಸಂತೋಷ್‌ ಗೆ ಸನ್ಮಾನ ಮಾಡಿದ್ದ ಪಿಎಸ್ಐ ರನ್ನು ವರ್ಗಾವಣೆ ಮಾಡಲಾಗಿದೆ.

ಪಿಎಸ್‌ಐ ತಿಮ್ಮರಾಯಪ್ಪ ಸಂತೋಷ್ ಗೆ ಸನ್ಮಾನ‌ ಮಾಡಿದ್ದು ಈ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ತಿಮ್ಮರಾಯಪ್ಪನನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. 

ಪೊಲೀಸ್ ಸಮವಸ್ತ್ರದಲ್ಲಿ ಸಂತೋಷ್ ರನ್ನು ಸನ್ಮಾನಿಸಿದ್ದಕ್ಕೆ ಪಿಎಸ್‌ಐ ತಿಮ್ಮರಾಯಪ್ಪ ಅವರನ್ನು ವರ್ತೂರು ಪೊಲೀಸ್‌ ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಪ್ರಕರಣ ಸಂಬಂಧ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಇರುವಾಗಲೇ ವರ್ತೂರು ಸಂತೋಷ್ ರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿತ್ತು. ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಸಂತೋಷ್ ಬಿಗ್ ಬಾಸ್ ಮನೆಗೆ ಹೋಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com