ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ತಾಯಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಸಾವಿತ್ರಿ ಸರ್ಕಾರ್ (32) ಮತ್ತು ಆಕೆಯ ಮಕ್ಕಳಾದ ಸುಮಾ (5) ಮತ್ತು ದರ್ಶನ್ (4) ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಗ್ಗೆ ಮನೆಯ ಬಾಗಿಲು ತೆರೆದಿದ್ದು, ಮನೆಯೊಳಗೆ ಯಾವುದೇ ಸದ್ದುಗದ್ದಲ, ಚಟುವಟಿಕೆ ಇಲ್ಲದಿರುವುದು ಕಂಡು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೂವರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸಾವಿತ್ರಿ ನೇಣು ಬಿಗಿದುಕೊಂಡು ತನ್ನ ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿರಬಹುದು ಎಂದು ಕೆಲವರು ಶಂಕಿಸಿದ್ದಾರೆ. ಸಾವಿತ್ರಿ ಅವರ ಪತಿ, ಕೃಷಿಕರಾಗಿದ್ದು ಉಳವಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಉಳವಿಗೆ ತೆರಳಿದ್ದರು.
ನೆರೆಹೊರೆಯವರ ಪ್ರಕಾರ, ದಂಪತಿ ಮತ್ತು ಇತರ ಕುಟುಂಬ ಸದಸ್ಯರ ನಡುವೆ ಯಾವುದೇ ವಿವಾದ ಇರಲಿಲ್ಲ. ಸಾವಿತ್ರಿ ಸಮೀಪದ ಸುಳ್ಯದ ನಿವಾಸಿಯಾಗಿದ್ದರು. ಶನಿವಾರ ರಾತ್ರಿ ನೆರೆಹೊರೆಯವರೊಂದಿಗೆ ಮಾತನಾಡಿದ್ದಳು. ಆಕೆ ಉಳವಿಗೆ ಹೋಗಲು ಬಯಸಿದ್ದರು ಆದರೆ ಆಕೆಯ ಪತಿ ಅವಳನ್ನು ಕರೆದುಕೊಂಡು ಹೋಗಲು ನಿರಾಕರಿಸಿದರು ಎಂಬ ವದಂತಿಗಳಿವೆ.
ಸಾವಿತ್ರಿ ತುಂಬಾ ಚಟುವಟಿಕೆಯಿಂದಿದ್ದ ಗೃಹಿಮಿಯಾಗಿದ್ದರು ಹಬ್ಬಗಳು ಮತ್ತು ಇತರ ಎಲ್ಲಾ ಸಂದರ್ಭಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ, ಆದರೆ, ಅಪರಿಚಿತರು ಮೂವರನ್ನು ಕೊಲೆ ಮಾಡಿರಬಹುದು ಎಂದು ಮಹಿಳೆಯ ಕುಟುಂಬಸ್ಥರು ಶಂಕಿಸಿದ್ದಾರೆ. ನವಲಗುಂದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement