ಬೆಳಗಾವಿ: ಸರ್ಕಾರಿ ಶಾಲೆಗಳಿಗೆ 1,700 ಪಠ್ಯಪುಸ್ತಕ ಕೊಡುಗೆ ನೀಡಿದ ವೇದಾಂತ್ ಫೌಂಡೇಶನ್!

ಬೆಳಗಾವಿಯ ವೇದಾಂತ್ ಪ್ರತಿಷ್ಠಾನ ಬುಧವಾರ ಒಂದು ಗ್ರಂಥಾಲಯ ಮತ್ತು ಐದು ಶಾಲೆಗಳಿಗೆ 1,700 ಪಠ್ಯಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಮತ್ತು ಪುಸ್ತಕ ಓದುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಬೆಳಗಾವಿಯ ವೇದಾಂತ್ ಪ್ರತಿಷ್ಠಾನ ಬುಧವಾರ ಒಂದು ಗ್ರಂಥಾಲಯ ಮತ್ತು ಐದು ಶಾಲೆಗಳಿಗೆ 1,700 ಪಠ್ಯಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ.

ಸಾಂದರ್ಭಿಕ ಚಿತ್ರ
ಸರ್ಕಾರದ ನೆರವಿಲ್ಲದೆಯೇ ಮಾದರಿ ಸರ್ಕಾರಿ ಶಾಲೆ ನಿರ್ಮಿಸಿದ ಕೊಡಗಿನ ಗ್ರಾಮಸ್ಥರು!

ಟಿಳಕವಾಡಿಯ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ನಂ. 9ರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಾಂತ್ ಪ್ರತಿಷ್ಠಾನದ ಪದಾಧಿಕಾರಿಗಳು ಟಿಳಕವಾಡಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ, ಶಹಾಪುರದ ಚಿಂತಾಮನರಾವ್ ಪ್ರೌಢಶಾಲೆ, ಕಚೇರಿ ಗಲ್ಲಿಯ KHPS ಶಾಲೆ, ಚೆನ್ನಮ್ಮ ನಗರದ ಕೆಎಚ್‌ಪಿಎಸ್ ಶಾಲೆ ಹಾಗೂ ಕವಲೇವಾಡಿ ಗ್ರಾಮದ ಮಹಾತ್ಮ ಗಾಂಧಿ ಗ್ರಂಥಾಲಯಕ್ಕೆ 17,000 ಪಠ್ಯ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.

ಪ್ರತಿಷ್ಠಾನದ ಅಧ್ಯಕ್ಷ ಸತೀಶ ಪಾಟೀಲ, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಆಸೀಫ್‌ ಅತ್ತಾರ, ಕವಲೇವಾಡಿ ಗ್ರಂಥಾಲಯದ ಸತೀಶ ಜಾಧವ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com