ಜುಲೈ ತಿಂಗಳ ಮಳೆ ಕಾವೇರಿ ಜಲಾನಯನ ಪ್ರದೇಶದ ನೀರಿನ ಕೊರತೆಯನ್ನು ನೀಗಿಸಬಹುದು: CWRC

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಈ ವರ್ಷ ಜುಲೈ 4ರ ಹೊತ್ತಿಗೆ ಉತ್ತಮ ಮಳೆಯಾಗಲಿದ್ದು, ಪ್ರಸ್ತುತ 2024-25 ರಲ್ಲಿ ಜಲಾನಯನ ನೀರಿನ ಕೊರತೆಯನ್ನು ಪರಿಹರಿಸುತ್ತದೆ.
ಕಾವೇರಿ ಜಲಾನಯನ ಪ್ರದೇಶದ ಕಳೆದ ವರ್ಷದ ಸ್ಥಿತಿಗತಿ
ಕಾವೇರಿ ಜಲಾನಯನ ಪ್ರದೇಶದ ಕಳೆದ ವರ್ಷದ ಸ್ಥಿತಿಗತಿ
Updated on

ನವದೆಹಲಿ: ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕಾವೇರಿ ಜಲಾನಯನ ಪ್ರದೇಶವು ಬತ್ತಿ ಹೋಗಿದ್ದು, ಅಂತಾರಾಜ್ಯ ಬಿಂದು ಬಿಳಿಗುಂಡ್ಲುವಿಗೆ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕುಡಿಯುವ ನೀರಿಗೆ ಎರಡೂ ರಾಜ್ಯ ಸರ್ಕಾರಗಳಿಗೆ ನೀರನ್ನು ಸಂರಕ್ಷಿಸಲು ಸೂಚಿಸಿದೆ. ಪರಿಸರ ಹರಿವನ್ನು ಕಾಪಾಡಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಮಳೆಯ ಚಟುವಟಿಕೆಗಳಿಗೆ ಅನುಗುಣವಾಗಿ ಬೆಳೆ ಬಿತ್ತನೆಗೆ ತಯಾರಿ ನಡೆಸುವಂತೆ ಸೂಚಿಸಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಈ ವರ್ಷ ಜುಲೈ 4ರ ಹೊತ್ತಿಗೆ ಉತ್ತಮ ಮಳೆಯಾಗಲಿದ್ದು, ಪ್ರಸ್ತುತ 2024-25 ರಲ್ಲಿ ಜಲಾನಯನ ನೀರಿನ ಕೊರತೆಯನ್ನು ಪರಿಹರಿಸುತ್ತದೆ. ಕಳೆದ ಜಲ ವರ್ಷದಲ್ಲಿ ಜಲಾನಯನ ಪ್ರದೇಶವು ತೀವ್ರ ನೀರಿನ ಸಮಸ್ಯೆಗೆ ಸಾಕ್ಷಿಯಾಗಿತ್ತು.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಈ ಬಾರಿಯ ಮಳೆ ಕಾವೇರಿ ಜಲಾನಯನ ಪ್ರದೇಶದ ನೀರಿನ ಕೊರತೆಯನ್ನು ನಿವಾರಿಸಬಹುದು ಎಂದು CWRC ಅಧ್ಯಕ್ಷ ವಿನೀತ್ ಗುಪ್ತಾ 98 ನೇ ಸಭೆಯನ್ನು ನಡೆಸಿದ ನಂತರ TNIE ಗೆ ತಿಳಿಸಿದರು. ಇಂದಿನ ಸಭೆಯಲ್ಲಿ ಯಾವುದೇ ನಿರ್ಧಾರ ಮತ್ತು ನಿರ್ದೇಶನ ನೀಡಲಾಗಿಲ್ಲ ಎಂದರು.

ಕಳೆದ ಬಾರಿ, IMD ಜೂನ್ 19 ರೊಳಗೆ ಮಾನ್ಸೂನ್ ಚೇತರಿಸಿಕೊಳ್ಳಲಿದೆ ಎಂದು ಹೇಳಿತ್ತು. ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಹೆಚ್ಚಾಯಿತು. ಕಾವೇರಿ ಜಲವಿವಾದ ನ್ಯಾಯಮಂಡಳಿಯ (CWDT) ಅಂತಿಮ ತೀರ್ಪಿನ ಪ್ರಕಾರ, ಸಾಮಾನ್ಯ ವರ್ಷದಲ್ಲಿ 9.19 ಟಿಎಂಸಿ ಅಂದರೆ ದಿನಕ್ಕೆ ಸುಮಾರು 3,550 ಕ್ಯೂಸೆಕ್‌ಗಳನ್ನು ಸುಪ್ರೀಂನಿಂದ ಮಾರ್ಪಡಿಸಿದಂತೆ ಕರ್ನಾಟಕವು ಅಂತಾರಾಜ್ಯ ಜೂನ್ 30 ರ ವೇಳೆಗೆ ಬಿಳಿಗುಂಡ್ಲು 9.19 ಟಿಎಂಸಿಗೆ 2 ಟಿಎಂಸಿಗಿಂತ ಕಡಿಮೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದ ಕಳೆದ ವರ್ಷದ ಸ್ಥಿತಿಗತಿ
ಜಲ ಹಂಚಿಕೆ ವಿವಾದ: ಪರಿಸ್ಥಿತಿ ಪರಿಶೀಲನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, CWMA ಮುಂದು

ಕರ್ನಾಟಕವು ತನ್ನ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಇದುವರೆಗೆ ಶೇಕಡಾ 70ರಷ್ಟು ನೀರಿನ ಕೊರತೆ ಕಂಡಿದೆ ಎಂದು ಹೇಳಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದು ಕಷ್ಟ. ಅದರ ಸಲ್ಲಿಕೆ ಪ್ರಕಾರ, ಜೂನ್ 1 ರಿಂದ ಜೂನ್ 24 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವು 7.307 ಟಿಎಂಸಿಯಷ್ಟಿದ್ದು, ಇದೇ ಅವಧಿಯಲ್ಲಿ ಕಳೆದ 30 ವರ್ಷಗಳ ಸರಾಸರಿ ಒಳಹರಿವು 24.448 ಟಿಎಂಸಿ ಆಗಿದೆ.

ಜೂನ್ 24 ಕ್ಕೆ ಬಿಳಿಗುಂಡ್ಲುವಿನಲ್ಲಿ 5.367 ಟಿಎಂಸಿ ಕೊರತೆ ಹರಿಯುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕು ಮತ್ತು ಜೂನ್ 2024 ರ ಉಳಿದ ಅವಧಿಗೆ ಮತ್ತು ಜುಲೈ 2024 ಕ್ಕೆ 31.24 ಟಿಎಂಸಿ ನಿಗದಿತ ವೇಳಾಪಟ್ಟಿಯಂತೆ ಹರಿಯುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ತಮಿಳುನಾಡು ಒತ್ತಾಯಿಸಿದೆ. CWDT ನ್ನು ಸುಪ್ರೀಂ ಕೋರ್ಟ್ ಮಾರ್ಪಡಿಸಿದೆ. ಕಳೆದ ವಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 31 ನೇ ಸಭೆಯಲ್ಲಿ, ಜಲಾನಯನ ಪ್ರದೇಶದ ಜಲವಿಜ್ಞಾನದ ಪರಿಸ್ಥಿತಿಯನ್ನು ಪರಿಶೀಲಿಸಲು ತಂಡವನ್ನು ನೇಮಿಸಲು ಪ್ರಾಧಿಕಾರವು ಸ್ಪಷ್ಟವಾಗಿ ನಿರ್ಧರಿಸಿದೆ. CWMA ವೇಳಾಪಟ್ಟಿಯ ಮುಂದಿನ ಸಭೆಯು ಜುಲೈ 26 ರಂದು ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com