ವಿಧಾನಸಭೆಯಲ್ಲಿ 'ಪಾಕಿಸ್ತಾನ ಪರ' ಘೋಷಣೆ: ಆರೋಪಿ ಮೆಣಸಿನಕಾಯಿ ವ್ಯಾಪಾರಿ, ನಾಸೀರ್ ಹುಸೇನ್ ಆಪ್ತ!

ಮೊಹಮ್ಮದ್ ಶಫಿ ನಾಶಿಪುಡಿ ಒಬ್ಬ ಪ್ರಸಿದ್ಧ ಮೆಣಸಿನಕಾಯಿ ವ್ಯಾಪಾರಿ ಮತ್ತು ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರ ಆಪ್ತ
ನಾಸೀರ್ ಹುಸೇನ್
ನಾಸೀರ್ ಹುಸೇನ್
Updated on

ಹಾವೇರಿ: ಕಳೆದ ಕೆಲವು ತಿಂಗಳಿಂದ ಹಾವೇರಿ ಜಿಲ್ಲೆ ಹಲವು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಎರಡು ನೈತಿಕ ಪೊಲೀಸ್‌ಗಿರಿ ಘಟನೆಗಳ ನಂತರ ಜಿಲ್ಲೆ ಮತ್ತೆ ಸುದ್ದಿಯಲ್ಲಿದೆ, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಬ್ಯಾಡಗಿ ತಾಲೂಕಿನ ಪುಟ್ಟ ಗ್ರಾಮಕ್ಕೆ ಸೇರಿದವನಾಗಿದ್ದಾನೆ.

ಮೊಹಮ್ಮದ್ ಶಫಿ ನಾಶಿಪುಡಿ ಒಬ್ಬ ಪ್ರಸಿದ್ಧ ಮೆಣಸಿನಕಾಯಿ ವ್ಯಾಪಾರಿ ಮತ್ತು ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರ ಆಪ್ತ . ಫೆಬ್ರವರಿ 27 ರಂದು ವಿಧಾನಸೌಧದಲ್ಲಿ ರಾಜ್ಯ ಸಭಾ ಸದಸ್ಯರಾಗಿ ನಾಸೀರ್ ಹುಸೇನ್ ಗೆಲುವು ಸಾಧಿಸಿದ ನಂತರ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಗಳು ಕೇಳಿಬಂದವು, ನಂತರ ಪೊಲೀಸರು ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಘಟನೆ ಬಳಿಕ ನಾಶಿಪುಡಿ ಅದೇ ರಾತ್ರಿ ಬ್ಯಾಡಗಿಗೆ ವಾಪಸಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ನಿವಾಸಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದ್ದು, ಮನೆಯಿಂದ ಹೊರ ಹೋಗದಂತೆ ಸೂಚಿಸಲಾಗಿತ್ತು. ಎರಡು ದಿನಗಳ ತನಿಖೆಯ ನಂತರ, ಪೊಲೀಸರು ಆತನ ನಿವಾಸಕ್ಕೆ ಭೇಟಿ ನೀಡಿ ಧ್ವನಿ ಮಾದರಿಗಳನ್ನು ತೆಗೆದುಕೊಂಡರು. ಒಂದು ದಿನದ ನಂತರ, ಮೂವರು ಆರೋಪಿಗಳು ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಿರುವುದು ನಿಜ ಎಂದು ಬೆಂಗಳೂರಿನ ಎಫ್‌ಎಸ್‌ಎಲ್ ಘೋಷಿಸಿತು.

ನಾಶಿಪುಡಿಯನ್ನು ಬಂಧಿಸುವ ಎರಡು ದಿನಗಳ ಮೊದಲು, ಅವನ ಸಮೀಪವರ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು ಎಂದು ಪೊಲೀಸರು ಹೇಳಿದರು. ಕಳೆದ ತಿಂಗಳು ನಡೆದ ಪಾಕಿಸ್ತಾನ ಚುನಾವಣೆಯ ಕಟ್ಟಾ ಅನುಯಾಯಿ ನಾಶಿಪುಡಿ ಎಂದು ಕೆಲವರು ಹೇಳಿದ್ದಾರೆ. ಆತ ಸಂಭಾಷಣೆಯ ಸಮಯದಲ್ಲಿ ಪಾಕಿಸ್ತಾನದ ಚುನಾವಣೆಯ ವಿಷಯವನ್ನು ಪ್ರಸ್ತಾಪಿಸುತ್ತಿದ್ದ ಮತ್ತು ನಿರ್ದಿಷ್ಟ ನಾಯಕನನ್ನು ಆಯ್ಕೆ ಮಾಡಿದರೆ ನೆರೆಯ ದೇಶವು ಪ್ರಗತಿ ಹೊಂದಬಹುದು ಎಂದು ಹೇಳುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ನಾಸೀರ್ ಹುಸೇನ್
ಪಾಕ್ ಪರ ಘೋಷಣೆ: ಬಂಧಿತರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು, ಓರ್ವ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ

ಹಾವೇರಿಯ ಬ್ಯಾಡಗಿಯಲ್ಲಿ ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಿದ್ದು, ಉತ್ತಮ ಗುಣಮಟ್ಟದ ಮೆಣಸಿನಕಾಯಿ ಖರೀದಿಸಲು ಎಲ್ಲೆಡೆಯಿಂದ ವ್ಯಾಪಾರಸ್ಥರು ಇಲ್ಲಿ ಬರುತ್ತಾರೆ. ಇಲ್ಲಿ ಹರಾಜಾದ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿಯನ್ನು ಬಳ್ಳಾರಿಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ನಾಶಿಪುಡಿ ದೊಡ್ಡ ಮೆಣಸಿನಕಾಯಿ ಶೇಖರಣಾ ಘಟಕಗಳನ್ನು ಹೊಂದಿದ್ದು, ನಾಸೀರ್ ಹುಸೇನ್ ಅವರ ನಿಕಟವರ್ತಿಯಾಗಿ ಬೆಳೆದ, ಆತನ ಹಲವು ಸಂಬಂಧಿಕರು ಮೆಣಸಿನಕಾಯಿ ಬೆಳೆಗಾರರು ಮತ್ತು ದೊಡ್ಡ ಮಾರಾಟಗಾರರಾಗಿದ್ದಾರೆ.

ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿಗಳ ಸಂಘವು ಪಾಕಿಸ್ತಾನದ ಪರ ಘೋಷಣೆಗಳನ್ನು ಎತ್ತಿದ್ದಕ್ಕಾಗಿ ನಾಶಿಪುಡಿಯನ್ನು ಬಹಿರಂಗವಾಗಿ ಟೀಕಿಸಿದೆ. ಆತನ ಪರವಾನಗಿಯನ್ನು ಹಿಂಪಡೆಯಬೇಕು ಮತ್ತು ಅವರ ಔಟ್‌ಲೆಟ್‌ನಿಂದ ಮಾರಾಟವನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಕಳೆದ ನಾಲ್ಕು ದಿನಗಳಿಂದ ನಾಶಿಪುಡಿ ಹಣ ಪಾವತಿಸದ ಕಾರಣ ನೂರಾರು ರೈತರು ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com