ಮತ್ತಿಗೋಡು ಆನೆ ಶಿಬಿರ ಪ್ರವಾಸಿಗರಿಗೆ ಮುಕ್ತ

ಮತ್ತಿಗೋಡು ಆನೆ ಶಿಬಿರ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ.
ಮತ್ತಿಗೋಡು ಆನೆ ಶಿಬಿರ
ಮತ್ತಿಗೋಡು ಆನೆ ಶಿಬಿರ TNIE
Updated on

ಮಡಿಕೇರಿ: ಮತ್ತಿಗೋಡು ಆನೆ ಶಿಬಿರ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ. ದಕ್ಷಿಣ ಕೊಡಗಿನ ತಿತಿಮತಿ ಬಳಿ ಇರುವ ಮತ್ತಿಗೋಡು ಆನೆ ಶಿಬಿರವನ್ನು 1 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇತ್ತೀಚೆಗೆ ಉದ್ಘಾಟನೆಯಾಗಿತ್ತು.

ಈ ಆನೆ ಶಿಬಿರದಲ್ಲಿ 17 ಪಳಗಿಸಿದ ಆನೆಗಳಿವೆ. ಇತ್ತೀಚೆಗೆ ಮೃತಪಟ್ಟ ಮೈಸೂರು ದಸರಾ ಆನೆ ಅರ್ಜುನ ಮತ್ತು ಮತ್ತೊಂದು ಆನೆ ಅಭಿಮನ್ಯುವನ್ನು ಮತ್ತಿಗೋಡಿನ ಶಿಬಿರದಲ್ಲೇ ಪಳಗಿಸಲಾಗಿದೆ. ಹಲವು ಆನೆಗಳಿಗೆ ಆಶ್ರಯವಾಗಿರುವ ಮತ್ತಿಗೋಡು ಆನೆ ಶಿಬಿರ ಸಾರ್ವಜನಿಕ ಪ್ರವೇಶಕ್ಕೆ ಈ ವರೆಗೂ ಮುಕ್ತವಾಗಿರಲಿಲ್ಲ. ಆದರೂ ತಿತಿಮತಿ-ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗರು ಮಾರ್ಗ ಮಧ್ಯೆ ನಿಂತು ಆನೆಗಳು ಮೇಯುವುದನ್ನು ದೂರದಿಂದಲೇ ನೋಡುತ್ತಿದ್ದರು.

ರಾಜ್ಯದಿಂದ 1 ಕೋಟಿ ರೂ. ನಿಧಿ ಬಿಡುಗಡೆಯಾಗಿದ್ದು, ಮತ್ತಿಗೋಡು ಆನೆ ಶಿಬಿರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಶಿಬಿರದಲ್ಲಿ ಆನೆಗಳಿಗೆ ಆಶ್ರಯ ಮತ್ತು ಆಹಾರ ತಾಣಗಳು, ಶಿಬಿರಕ್ಕೆ ಸಮೀಪಿಸುವ ರಸ್ತೆ, ಪಾರ್ಕಿಂಗ್ ಸೌಲಭ್ಯ ಮತ್ತು ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗಿದೆ, ಇದು ಈಗ ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ಹರ್ಷಕುಮಾರ್‌ ಖಚಿತಪಡಿಸಿದ್ದಾರೆ.

ಕ್ಯಾಮೆರಾಗಳು ಮತ್ತು ಡ್ರೋನ್‌ಗಳು ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಅಳವಡಿಸಿದ್ದರೂ ಸಹ ಶಿಬಿರವು ಸರಿಯಾದ ಮಾರ್ಗಗಳೊಂದಿಗೆ ಸಜ್ಜುಗೊಂಡಿದೆ. ಒಂದು ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದ್ದು, ಶಿಬಿರವು ಪ್ರಮುಖ ಸ್ಥಳದಲ್ಲಿ ಇರುವುದರಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆಯಿದೆ.

ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಪಳಗಿದ ಆನೆಗಳ ಶಿಬಿರಕ್ಕೆ ಭೇಟಿ ನೀಡಿದಾಗ ಸಂದರ್ಶಕರು ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com