ಮಂಡ್ಯ: ಮಹಿಳೆ, ಆಕೆಯ ಮೊಮ್ಮಗಳನ್ನು ತುಂಡರಿಸಿ ಕೆರೆಗೆ ಎಸೆದ ಹಂತಕರು!

ಮಹಿಳೆ ಮತ್ತು ಆಕೆಯ ಎರಡೂವರೆ ವರ್ಷದ ಮೊಮ್ಮಗಳನ್ನು ಕೊಂದು, ಮೃತದೇಹಗಳನ್ನು ತುಂಡು ತಂಡಾಗಿ ಕತ್ತರಿಸಿ ಕೆರೆಗೆ ಎಸೆದಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತದೇಹಗಳನ್ನು ಎಸೆದಿದ್ದ ಕೆರೆ
ಮೃತದೇಹಗಳನ್ನು ಎಸೆದಿದ್ದ ಕೆರೆ

ಮಂಡ್ಯ: ಮಹಿಳೆ ಮತ್ತು ಆಕೆಯ ಎರಡೂವರೆ ವರ್ಷದ ಮೊಮ್ಮಗಳನ್ನು ಕೊಂದು, ಮೃತದೇಹಗಳನ್ನು ತುಂಡು ತಂಡಾಗಿ ಕತ್ತರಿಸಿ ಕೆರೆಗೆ ಎಸೆದಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಕಲ್ಕೆರೆ ಗ್ರಾಮದ ನಿವಾಸಿ ಜಯಮ್ಮ (46) ಮತ್ತು ಆಕೆಯ ಮೊಮ್ಮಗಳು ರಿಷಿಕಾ ಎಂದು ಗುರುತಿಸಲಾಗಿದೆ.

ಆದಿಚುಂಚನಗಿರಿಯಲ್ಲಿ ಸಾಲ ನೀಡಿದ್ದ ವ್ಯಕ್ತಿಯನ್ನು ಭೇಟಿಯಾಗಿ, ಹಣ ವಾಪಸ್ ಪಡೆದು ಮನೆಗೆ ಮರಳುವುದಾಗಿ ಕುಟುಂಬ ಸದಸ್ಯರಿಗೆ ಹೇಳಿದ್ದ ಜಯಮ್ಮ ಮಾರ್ಚ್ 12 ರಂದು ಮೊಮ್ಮಗಳೊಂದಿಗೆ ಮನೆಯಿಂದ ಹೊರಟಿದ್ದರು. ಆದರೆ, ಮಾರ್ಚ್ 18ರವರೆಗೆ ಮನೆಗೆ ವಾಪಸ್ ಬಾರದೆ, ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಗ ಪ್ರವೀಣ್ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಮೃತದೇಹಗಳನ್ನು ಎಸೆದಿದ್ದ ಕೆರೆ
ಬೆಂಗಳೂರು: ಹೋಟೆಲ್ ನಲ್ಲಿ ವಿದೇಶಿ ಮಹಿಳೆ ಶವವಾಗಿ ಪತ್ತೆ; ಉಸಿರುಗಟ್ಟಿಸಿ ಕೊಲೆ?

ಅದೇ ದಿನ, ಪ್ರವೀಣ್‌ಗೆ ಅಪರಿಚಿತರಿಂದ ಕರೆ ಬಂದಿದ್ದು, ಅವರು ತಮ್ಮ ತಾಯಿ ಮತ್ತು ಮಗಳನ್ನು ಕೊಂದು, ಮೃತದೇಹಗಳನ್ನುತುಂಡಾಗಿ ಕತ್ತರಿಸಿ ಗೋಣಿ ಚೀಲಗಳಲ್ಲಿ ತುಂಬಿ ಆದಿಚುಂಚನಗಿರಿ ಬಳಿಯ ಕೆರೆಗೆ ಎಸೆದಿರುವುದಾಗಿ ಹೇಳಿದ್ದರು.

ಪ್ರವೀಣ್‌ಗೆ ಕರೆ ಮಾಡಿದ ವ್ಯಕ್ತಿ ಕೂಡಲೇ ಫೋನ್ ಸ್ವಿಚ್ ಆಫ್ ಮಾಡಿದ್ದ. ಈ ಬಗ್ಗೆ ಪ್ರವೀಣ್ ಮಾಹಿತಿ ನೀಡಿದ ನಂತರ, ಪೊಲೀಸರು ಕೆರೆಯಿಂದ ಗೋಣಿ ಚೀಲಗಳನ್ನು ಹೊರತೆಗೆದಿದ್ದು, ಅದರಲ್ಲಿ ಜಯಮ್ಮ ಮತ್ತು ಅವರ ಮೊಮ್ಮಗಳ ಶವಗಳು ಪತ್ತೆಯಾಗಿವೆ. ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com