ಟಿಬಿ ನಿರೋಧಕ ಡ್ರಗ್ಸ್ ಪೂರೈಸುವಂತೆ ಕೋರಿ ಕೇಂದ್ರ ಆರೋಗ್ಯ ಸಚಿವಗೆ ರಾಜ್ಯ ಸರ್ಕಾರ ಪತ್ರ

ರಾಜ್ಯಕ್ಕೆ ಟಿಬಿ ನಿರೋಧಕ ಔಷಧಗಳ ತುರ್ತು ಪೂರೈಕೆಗೆ ಮನವಿ ಮಾಡಿ ಕೇಂದ್ರ ಆರೋಗ್ಯ ಸಚಿವರಿಗೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್online desk

ಬೆಂಗಳೂರು: ರಾಜ್ಯಕ್ಕೆ ಟಿಬಿ ನಿರೋಧಕ ಔಷಧಗಳ ತುರ್ತು ಪೂರೈಕೆಗೆ ಮನವಿ ಮಾಡಿ ಕೇಂದ್ರ ಆರೋಗ್ಯ ಸಚಿವರಿಗೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ. ಮನ್ಸುಖ್ ಮಾಂಡವೀಯ ಅವರಿಗೆ ಪತ್ರ ಬರೆದಿರುವ ದಿನೇಶ್ ಗುಂಡೂರಾವ್,2021 ರಿಂದಲೂ ರಾಜ್ಯಕ್ಕೆ ಟಿಬಿ ನಿರೋಧಕ ಔಷಧಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಮುಂದಿನ 3 ತಿಂಗಳಿಗೆ ಅಗತ್ಯವಿರುವ ಔಷಧಗಳನ್ನು ರಾಜ್ಯ ದಾಸ್ತಾನು ಮಾಡಿಕೊಳ್ಳಬೇಕೆಂದು ಭಾರತ ಸರ್ಕಾರ ತನ್ನ ಇತ್ತೀಚಿನ 2 ಸಂವಹನಗಳಲ್ಲಿ ತಿಳಿಸಿದೆ.

ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದ ನಂತರ ಎರಡನೇ ಸಂವಹನ ರಾಜ್ಯಕ್ಕೆ ಬಂದಿದೆ ಎಂದು ಪತ್ರದಲ್ಲಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ರಾಜ್ಯ ವಾರ್ಷಿಕವಾಗಿ 80,000 ಕ್ಕೂ ಹೆಚ್ಚು ರೋಗಿಗಳನ್ನು-- ಮಾಸಿಕ ಆಧಾರದ ಮೇಲೆ ಸುಮಾರು 6,800 TB ರೋಗಿಗಳಿಗೆ ನಿರಂತರ ಚಿಕಿತ್ಸೆ ನೀಡಬೇಕು, ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಟಿಬಿ ನಿರೋಧಕ ಔಷಧಗಳನ್ನು ಖರೀದಿಸಲು ರಾಜ್ಯ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಆರೋಗ್ಯ ಇಲಾಖೆ ರಾಜ್ಯ ಹಣಕಾಸು ಇಲಾಖೆಗೆ ಔಷಧಗಳನ್ನು ಖರೀದಿಸುವುದಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಪತ್ರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

"ಆದಾಗ್ಯೂ, ಈ ಔಷಧಿಗಳು ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಲಭ್ಯವಿಲ್ಲ ಅಥವಾ ಅದರ ಉತ್ಪಾದನಾ ಪ್ರಕ್ರಿಯೆ ಮತ್ತು ಚಾಲ್ತಿಯಲ್ಲಿರುವ ಎಂಸಿಸಿ ಎರಡರ ದೃಷ್ಟಿಯಿಂದ ಖರೀದಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದಿಲ್ಲ" ಎಂದು ಸಚಿವರು ಹೇಳಿದರು. ಕೇಂದ್ರ ಸರ್ಕಾರದ ನಿರ್ದಾಕ್ಷಿಣ್ಯವನ್ನು ಆರೋಪಿಸಲು ಬಯಸುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದು, ಕೇಂದ್ರ ಸರ್ಕಾರದ ಈ ಕ್ರಮದಿಂದ ಟಿಬಿ ರೋಗಿಗಳಿಗೆ ರಾಜ್ಯದ ಬೆಂಬಲ ಅಪಾಯದಲ್ಲಿದೆ ಎಂದು ಅವರು ಗಮನಸೆಳೆದರು.

"ನಿರ್ಣಾಯಕ ಔಷಧವನ್ನು ಖರೀದಿಸಲು ವಿಳಂಬವಾದ ಸಂವಹನ (ಅದರ ಖರೀದಿಯು ಅಲ್ಪಾವಧಿಯಲ್ಲಿ ಸಮಸ್ಯಾತ್ಮಕವಾಗಿದೆ) ಮತ್ತು ಮಾದರಿ ನೀತಿ ಸಂಹಿತೆಯ ಸಮಯದಲ್ಲಿ ಸಂವಹನವನ್ನು ಹೊರಡಿಸುವುದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪ್ರಯತ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ" ಎಂದು ಅವರು ಮಾರ್ಚ್ 26 ರ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com