ಬೆಂಗಳೂರು: ಈ ಬೇಸಿಗೆಯಲ್ಲಿ ತೀವ್ರ ಜಲ ಸಮಸ್ಯೆಯ ನಡುವೆ ಬೆಂಗಳೂರಿನ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯದಲ್ಲಿ ವಲಸೆ ಕಾರ್ಮಿಕರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ದಿನಬಿಟ್ಟು ದಿನ ಕಾವೇರಿ ನೀರು ಪಡೆಯುತ್ತಿದ್ದ ಈ ಪ್ರದೇಶಕ್ಕೆ ಈಗ ತಿಂಗಳಿಗೆ ಎರಡು ಬಾರಿ ಮಾತ್ರ ಕುಡಿಯುವ ನೀರು ಸಿಗುತ್ತಿದೆ.
ಪ್ರತಿ ದಿನಬಿಟ್ಟು ದಿನ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎನ್ನುತ್ತಾರೆ ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿಗಳು. ಕೈಗೆಟಕುವ ದರದಲ್ಲಿ ಕೈಗಾರಿಕೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಸುತ್ತಿರುವ ನಡುವೆ, ಸುಮಾರು 16,000 ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸುವ ಪ್ರದೇಶದಲ್ಲಿ ಬೋರ್ವೆಲ್ಗಳ ಕೊರತೆ ಏಕೆ ಎಂದು ಕೈಗಾರಿಕೋದ್ಯಮಿಗಳು ಪ್ರಶ್ನಿಸುತ್ತಾರೆ.
ಪೀಣ್ಯ ಇಂಡಸ್ಟ್ರೀಸ್ ಅಸೋಸಿಯೇಷನ್ (PIA) ಚುನಾಯಿತ ಅಧ್ಯಕ್ಷ ಶಿವಕುಮಾರ್ ಆರ್, ಕುಡಿಯುವ ನೀರನ್ನು ಪಡೆಯುವಲ್ಲಿ ಕಾರ್ಮಿಕರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಪ್ರತಿ ದಿನವೂ ನೀರು ಸರಬರಾಜು ಮಾಡಲಾಗುತ್ತಿತ್ತು. ಕೂಲಿ ಕಾರ್ಮಿಕರು ನೀರನ್ನು ಸಂಗ್ರಹಿಸಿ ಬಳಸಿಕೊಳ್ಳುತ್ತಿದ್ದರು. ಆದರೆ, ಈಗ ತಿಂಗಳಿಗೆ ಎರಡು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ವಲಸಿಗರು ಎಲ್ಲಿಗೆ ಹೋಗುತ್ತಾರೆ, ಟ್ಯಾಂಕರ್ಗಳಿಗೆ ಪಾವತಿಸಲು ಅವರು ಹೇಗೆ ಶಕ್ತರಾಗುತ್ತಾರೆ ಮತ್ತು ಎಷ್ಟು ಸಮಯದವರೆಗೆ ಅವರು ಇದನ್ನು ಹಿಡಿದಿಟ್ಟುಕೊಳ್ಳಬಹುದು ಎಂದು ಪ್ರಶ್ನಿಸುತ್ತಾರೆ. ಬಹುತೇಕ ಎಲ್ಲಾ ವಸತಿ ಸಮುಚ್ಚಯಗಳಲ್ಲಿ ಬೋರ್ವೆಲ್ಗಳನ್ನು ಕೊರೆಯುತ್ತಿದ್ದರೂ, ದೊಡ್ಡ ಕೈಗಾರಿಕಾ ಪ್ರದೇಶದಲ್ಲಿ ಬೋರ್ವೆಲ್ಗಳನ್ನು ಕೊರೆಯುವುದನ್ನು ಅಧಿಕಾರಿಗಳು ಏಕೆ ಕಡೆಗಣಿಸಿದ್ದಾರೆ ಎಂದು ಶಿವಕುಮಾರ್ ಕೇಳುತ್ತಾರೆ.
ಸರ್ಕಾರವು ಬಿಬಿಎಂಪಿ ಮೂಲಕ ಮಳೆನೀರು ಕೊಯ್ಲಿಗೆ ಶೇಕಡಾ 100ರಷ್ಟು ಸಹಾಯಧನ ನೀಡಬೇಕು ಮತ್ತು ಹೆಚ್ಚಿನ ಕೆರೆಗಳಿಗೆ ಕಾಂಪೌಂಡ್ ಮತ್ತು ಗಡಿರೇಖೆಗಳಿಲ್ಲ, ಇದು ನೀರು ವ್ಯರ್ಥವಾಗುವುದಕ್ಕೆ ಕಾರಣವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಕೆರೆಗಳ ಸುತ್ತಲೂ ಗಡಿ ನಿರ್ಮಾಣವನ್ನು ಬೇಸಿಗೆಯಲ್ಲಿ ಮಾಡಬೇಕು, ಆದ್ದರಿಂದ ಮಳೆಯ ಸಮಯದಲ್ಲಿ ನೀರನ್ನು ಉಳಿಸಿಕೊಳ್ಳಬಹುದು, ಹಲವು ಬಾರಿ ಮನವಿ ಮಾಡಿಕೊಂಡ ಹೊರತಾಗಿಯೂ ಅಧಿಕಾರಿಗಳು ಅದನ್ನು ಮಾಡಿಲ್ಲ ಎಂದರು.
ನೀರು ಸರಬರಾಜಿನಲ್ಲಿ ಸಮಸ್ಯೆಯಿಂದಾಗಿ 12 ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಜೀವನೋಪಾಯಕ್ಕೆ ತೊಂದರೆಯಾಗಲಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ, ಅವರಲ್ಲಿ ಹೆಚ್ಚಿನವರು ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಪ್ಯಾಕೇಜಿಂಗ್, ಗಾರ್ಮೆಂಟ್ಸ್, ಲೂಬ್ರಿಕಂಟ್ಗಳು, ಗ್ರಾಹಕ ಸರಕುಗಳು ಮತ್ತು ಔಷಧೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಕೈಗಾರಿಕೆಗಳಲ್ಲಿ ಸಾಕಷ್ಟು ನೀರಿಲ್ಲ. ಕಾರ್ಮಿಕರು ಕೂಡ ಸೀಮಿತ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಅವರು ಹೇಳಿದರು.
ನಗರದಲ್ಲಿ ಹದಗೆಡುತ್ತಿರುವ ನೀರಿನ ಬಿಕ್ಕಟ್ಟಿನೊಂದಿಗೆ, ವಸತಿ ವಿಭಾಗಗಳಿಗೆ ಸಮರ್ಪಕ ನೀರನ್ನು ಪೂರೈಸಲು ಜಲಮಂಡಳಿ ವಾಣಿಜ್ಯ ಮತ್ತು ಕೈಗಾರಿಕಾ ವಲಯಗಳಿಗೆ ಪೂರೈಕೆಯನ್ನು ಕಡಿಮೆ ಮಾಡಿದೆ. ಇದೇ ರೀತಿ ಮುಂದುವರಿದರೆ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ತಮಗೆ ಸಿಗುತ್ತಿರುವ ದಿನಗೂಲಿಯಲ್ಲಿ ಕುಡಿಯುವ ನೀರು ಖರೀದಿಸುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಕಾರ್ಮಿಕರು.
ಬಿಡಬ್ಲ್ಯುಎಸ್ ಎಸ್ ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ ಎಂದು ನಮಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದರು. ನಾವು ಪ್ರತಿ ದಿನವೂ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದೇವೆ ಎಂದರು.
Advertisement