ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಶರತ್ ಜವಳಿ ನಿಧನ: ಸಿಎಂ ಸಿದ್ದರಾಮಯ್ಯ ಸೇರಿ ಹಲವರ ಸಂತಾಪ

1960 ರ ದಶಕದ ಅಂತ್ಯದಿಂದ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಜವಳಿ, ಮೊದಲ ಕೃಷ್ಣ ನದಿ ನೀರು ವಿವಾದ ನ್ಯಾಯಮಂಡಳಿಯ ಸಮಯದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು.
Senior advocate Sharat Javali
ಹಿರಿಯ ವಕೀಲ ಶರತ್ ಜವಳಿ
Updated on

ಬೆಂಗಳೂರು\ನವದೆಹಲಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಐತಿಹಾಸಿಕ ಕಾವೇರಿ, ಕೃಷ್ಣ ಮತ್ತು ಮಹಾದಾಯಿ ನದಿ ನೀರಿನ ವಿವಾದಗಳ ಕಾನೂನು ತಂಡದಲ್ಲಿ ಕರ್ನಾಟಕದ ಮುಖವಾಗಿದ್ದ ಶರತ್ ಜವಳಿ ನಿಧನರಾಗಿದ್ದಾರೆ. ಭಾರತದ ಕಾನೂನು ಸಮುದಾಯಕ್ಕೆ ಇದು ತುಂಬಲಾರದ ನಷ್ಟವಾಗಿದೆ.

ಅತ್ಯುನ್ನತ ಕಾನೂನು ಕುಶಾಗ್ರಮತಿ ಹೊಂದಿದ್ದ ಜವಳಿ ಅವರ ನಿರ್ಗಮನವು ಭಾರತೀಯ ನ್ಯಾಯಶಾಸ್ತ್ರದಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಖ್ಯಾತ ವಕೀಲರಾದ ಫಾಲಿ ಎಸ್ ನಾರಿಮನ್ ಮತ್ತು ಅನಿಲ್ ದಿವಾನ್ ನಂತರ ನಿಧನರಾದ ಕರ್ನಾಟಕದ ಕಾನೂನು ತಂಡದಲ್ಲಿ ಜವಳಿ ಮೂರನೆಯವರಾಗಿದ್ದಾರೆ.

1960 ರ ದಶಕದ ಅಂತ್ಯದಿಂದ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಜವಳಿ, ಮೊದಲ ಕೃಷ್ಣ ನದಿ ನೀರು ವಿವಾದ ನ್ಯಾಯಮಂಡಳಿಯ ಸಮಯದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು. ಐದು ದಶಕಗಳಿಗೂ ಹೆಚ್ಚು ಕಾಲ, ಅವರು ದೇಶದ ಅತ್ಯಂತ ಹೆಚ್ಚಿನ ಮಟ್ಟದ ನೀರಿಗೆ ಸಂಬಂಧಪಟ್ಟ ಕೋರ್ಟ್ ವಾಜ್ಯಗಳಲ್ಲಿ ಕರ್ನಾಟಕದ ಅಚಲ ಧ್ವನಿಯಾಗಿದ್ದರು. ನ್ಯಾಯಾಲಯದಲ್ಲಿ ಶಾಂತವಾಗಿದ್ದರೂ ಅವರ ವಕಾಲತ್ತು ಅದ್ವಿತೀಯವಾಗಿತ್ತು.

ಪರಂಪರೆ ಮತ್ತು ಪ್ರತಿಭೆಯನ್ನು ಹೊಂದಿದ್ದ ಜವಳಿ, ಅಜ್ಮೀರ್‌ನ ಮೇಯೊ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದರು, ನಂತರ ಭಾರತದ ಮಾಜಿ ಅಟಾರ್ನಿ ಜನರಲ್ ಎಸ್.ವಿ. ಗುಪ್ತೆ ಅವರ ಅಡಿಯಲ್ಲಿ ವಿಶಿಷ್ಟ ಕಾನೂನು ಶಿಷ್ಯವೃತ್ತಿಯನ್ನು ಪಡೆದರು. ಇತ್ತೀಚೆಗೆ, ಕೇಂಬ್ರಿಡ್ಜ್‌ನ ಸಿಡ್ನಿ ಸಸೆಕ್ಸ್ ಕಾಲೇಜಿನ ಫೆಲೋ ಆಗಿ ನೇಮಕಗೊಂಡ ಅಪರೂಪದ ಗೌರವವನ್ನು ಅವರಿಗೆ ನೀಡಲಾಯಿತು,

ಅವರನ್ನು ಮೂಲತಃ ವಕೀಲರಾಗಿರುವ ಸಿಎಂ ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ. ನನ್ನ ಹಿರಿಯ ವಕೀಲ ಚಿಕ್ಬೋರಾಯ ಅವರೊಂದಿಗೆ ಕೋರ್ಟ್ ನಲ್ಲಿ ವಾದ ಮಾಡುತ್ತಿದ್ದ ರೀತಿ, ಅವರ ಅದ್ಭುತ ಕುಶಾಗ್ರಮತಿ, ಬುದ್ಧಿವಂತಿಕೆ, ವಕಾಲತ್ತಿನ ರೀತಿ ಕಂಡು ದಿಗ್ಭ್ರಮೆಗೊಂಡಿದ್ದೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಶರತ್ ಜವಳಿಅವರ ನಿಧನದಿಂದ ತೀವ್ರ ದುಃಖವಾಗಿದೆ. ಅತ್ಯುನ್ನತ ಕಾನೂನು ಮನಸ್ಸು ಹೊಂದಿದ್ದ ಅವರು 1960 ರ ದಶಕದಿಂದಲೂ ಕಾವೇರಿ, ಕೃಷ್ಣಾ ಮತ್ತು ಮಹದಾಯಿ ನದಿ ನೀರಿನ ವಿವಾದಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ನಾನು ಮೈಸೂರಿನಲ್ಲಿ ಕಿರಿಯ ವಯಸ್ಸಿನಲ್ಲಿದ್ದಾಗ ಅವರ ವಕಾಲತ್ತು ನನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿತು. ಅವರ ನಮ್ರತೆ ಅವರ ಸ್ಥಾನಮಾನಕ್ಕೆ ಹೊಂದಿಕೆಯಾಯಿತು. ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ ಎಂದಿದ್ದಾರೆ.

ಜವಳಿಯವರ ಕೊಡುಗೆಗಳು ನ್ಯಾಯಾಲಯದ ಕೋಣೆಗಳನ್ನು ಮೀರಿ ವಿಸ್ತರಿಸಿದವು. ಕಾನೂನು ಶಿಕ್ಷಣ ಮತ್ತು ಅವರ ಅಲ್ಮಾ ಮೇಟರ್ ಮೇಲಿನ ಅವರ ಪ್ರೀತಿ ಅದ್ವಿತೀಯವಾಗಿತ್ತು.

ತಮ್ಮ ತಂದೆ ಎಸ್.ಸಿ. ಜವಳಿ ಅವರ ಸ್ಮರಣಾರ್ಥ ರಾಷ್ಟ್ರೀಯ ಮೌಟ್ ಕೋರ್ಟ್ ಸ್ಪರ್ಧೆಯನ್ನು ಸ್ಥಾಪಿಸುವುದರಿಂದ ಹಿಡಿದು ಪ್ರತಿಷ್ಠಿತ ಡಾ. ಡಿ.ಸಿ. ಪಾವಟೆ ಫೆಲೋಶಿಪ್ ಸ್ಥಾಪಿಸುವವರೆಗೆ, ಅವರ ಪ್ರಯತ್ನಗಳು ಭಾರತದ 12 ಕ್ಕೂ ಹೆಚ್ಚು ಮುಖ್ಯ ನ್ಯಾಯಮೂರ್ತಿಗಳು, ಡಜನ್ಗಟ್ಟಲೆ ಸುಪ್ರೀಂ ಮತ್ತು ಹೈಕೋರ್ಟ್ ನ್ಯಾಯಾಧೀಶರು ಮತ್ತು ಹಿರಿಯ ಕಾನೂನು ಮನಸ್ಸುಗಳನ್ನು ನಾಟಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com