ರಾಷ್ಟ್ರೀಯ T20 ಚಾಂಪಿಯನ್‌ಶಿಪ್: ಕರ್ನಾಟಕ ಕಿವುಡರ ಕ್ರಿಕೆಟ್ ತಂಡ ವಿಜೇತ!

ಏಪ್ರಿಲ್ 19 ರಿಂದ 25 ರವರೆಗೆ ನಡೆದ, ಗ್ರೂಪ್ ಬಿ ವಿಭಾಗದಲ್ಲಿ ಕರ್ನಾಟಕ ತಂಡವು 5 ಪಂದ್ಯಗಳನ್ನು ಆಡಿತು, ಅಂತಿಮವಾಗಿ ಚಾಂಪಿಯನ್‌ಶಿಪ್‌ನ ವಿಜೇತರಾದರು.
Karnataka Deaf Cricket team
ಕರ್ನಾಟಕ ಕಿವುಡರ ಕ್ರಿಕೆಟ್ ತಂಡ
Updated on

ಬೆಂಗಳೂರು: ಕರ್ನಾಟಕ ಕಿವುಡರ ಕ್ರಿಕೆಟ್ ತಂಡವು ಹರಿಯಾಣದ ಕದರ್‌ಪುರದಲ್ಲಿ ನಡೆದ ಕಿವುಡರ VIII ರಾಷ್ಟ್ರೀಯ ಟಿ20 ಕ್ರಿಕೆಟ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.

ಏಪ್ರಿಲ್ 19 ರಿಂದ 25 ರವರೆಗೆ ನಡೆದ, ಗ್ರೂಪ್ ಬಿ ವಿಭಾಗದಲ್ಲಿ ಕರ್ನಾಟಕ ತಂಡವು 5 ಪಂದ್ಯಗಳನ್ನು ಆಡಿತು, ಅಂತಿಮವಾಗಿ ಚಾಂಪಿಯನ್‌ಶಿಪ್‌ನ ವಿಜೇತರಾದರು. ಅಖಿಲ ಭಾರತ ಕಿವುಡರ ಕ್ರೀಡಾ ಮಂಡಳಿ, ನವದೆಹಲಿ, ಹರಿಯಾಣ ಸ್ಪೋರ್ಟ್ಸ್ ಕೌನ್ಸಿಲ್ ಆಫ್ ದಿ ಡೆಫ್ ಸಹಯೋಗದೊಂದಿಗೆ ಚಾಂಪಿಯನ್‌ಶಿಪ್ ಆಯೋಜಿಸಿತ್ತು,

ಏಪ್ರಿಲ್ 24 ರಂದು ಹರಿಯಾಣದ ಗುರುಗ್ರಾಮ್‌ನಲ್ಲಿ ಫೈನಲ್ ಪಂದ್ಯ ನಡೆಯಿತು. ಕರ್ನಾಟಕ ಮತ್ತು ಪಂಜಾಬ್ ನಡುವೆ ಫೈನಲ್ ಪಂದ್ಯ ನಡೆದಿದ್ದು, ಇದರಲ್ಲಿ ಕರ್ನಾಟಕ ನಾಲ್ಕು ರನ್‌ಗಳಿಂದ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಏಳು ವಿಕೆಟಿಗೆ 177 ರನ್ ಗಳಿಸಿತು ಮತ್ತು ಗುರಿ ಬೆನ್ನಟ್ಟಿದ ಪಂಜಾಬ್ ಗೆಲುವಿನ ಸಮೀಪಕ್ಕೆ ಬಂದಿತು, ಆದರೆ ಐದು ರನ್ (173) ನಷ್ಟಕ್ಕೆ ಏಳು ವಿಕೆಟ್ ಕಳೆದುಕೊಂಡಿತು.

ಕರ್ನಾಟಕದ ನಾಯಕ ಸುಬ್ರಮಣಿ ಸಿಂಗ್ ಗರಿಷ್ಠ (45) ರನ್ ಗಳಿಸಿದರು, ನಂತರ ಉಪನಾಯಕ ಸೌಬನ್ ಅರ್ಮಾರ್ 34 ರನ್ ಗಳಿಸಿದರು. ನಾಲ್ಕು ಓವರ್‌ಗಳಲ್ಲಿ ಸುಬ್ರಮಣಿ ಸಿಂಗ್ 27 ರನ್ ನೀಡಿ 2 ವಿಕೆಟ್ ಪಡೆದರು. ಕರ್ನಾಟಕದ ವಿವಿಧ ಭಾಗಗಳಿಂದ ಬಂದಿರುವ ಕ್ರಿಕೆಟ್ ತಂಡದ ಸದಸ್ಯರು ಬೇರೆ ಬೇರೆ ಖಾಸಗಿ ಕೋಚಿಂಗ್ ಸೆಂಟರ್‌ಗಳಲ್ಲಿ ತಾವಾಗಿಯೇ ಅಭ್ಯಾಸ ನಡೆಸುತ್ತಿದ್ದರು ಮತ್ತು ಬಿಎಲ್‌ಸಿ ಮೈದಾನದಲ್ಲಿ ವಾರಕ್ಕೊಮ್ಮೆ ಅಭ್ಯಾಸಕ್ಕೆ ಬರುತ್ತಿದ್ದರು.

Karnataka Deaf Cricket team
ಪಾಕಿಸ್ತಾನದೊಂದಿಗೆ ಎಲ್ಲಾ ಕ್ರಿಕೆಟ್ ಸಂಬಂಧವನ್ನು ಭಾರತ ಕಡಿದುಕೊಳ್ಳಬೇಕು: ಸೌರವ್ ಗಂಗೂಲಿ

ಖಾಸಗಿ ಕೋಚಿಂಗ್ ತುಂಬಾ ದುಬಾರಿಯಾಗಿದೆ, ನನ್ನ ಮಗನ ಅಭ್ಯಾಸ ಅವಧಿಗಳಿಗಾಗಿ ನಾನು ದಿನಕ್ಕೆ 1,000 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು" ಎಂದು ಆಟಗಾರರಲ್ಲಿ ಒಬ್ಬರಾದ ಕುಶಾಲ್ ಜೆಎಸ್ ಅವರ ತಂದೆ ಶಿವಕುಮಾರ್ ಹಂಚಿಕೊಂಡಿದ್ದಾರೆ.

ಈ ಪ್ರಶಸ್ತಿಯನ್ನು ಗೆಲ್ಲಲು ನಾವು ತುಂಬಾ ಶ್ರಮಿಸಿದ್ದೇವೆ ಮತ್ತು ನಮ್ಮ ಶ್ರಮವು ಅಂತಿಮವಾಗಿ ಫಲ ನೀಡಿದೆ ಎಂದು ನಮಗೆ ತುಂಬಾ ಸಂತೋಷವಾಗಿದೆ ಎಂದು ತಂಡದ ಸದಸ್ಯರು ತಮ್ಮ ಖುಷಿ ಹಂಚಿಕೊಂಡರು. ಪ್ರತಿ ಆಟಗಾರ 10,000 ರೂ. ಭರಿಸಬೇಕಿತ್ತು. ಇದರಲ್ಲಿ ಪ್ರಯಾಣ, ಆಹಾರ, ಅಭ್ಯಾಸ ಮತ್ತು ಇತರ ವೆಚ್ಚಗಳು ಸೇರಿದ್ದವು. ಇದು ಸಾಮಾನ್ಯವಾಗಿ ಆಟಗಾರ ಮತ್ತು ಅವರ ಕುಟುಂಬಗಳಿಗೆ ಹಣಕಾಸು ಸಮಸ್ಯೆ ಸೃಷ್ಟಿಸುತ್ತದೆ. "ನಮ್ಮಂತಹ ಬಡವರು ಆರ್ಥಿಕವಾಗಿ ಕಷ್ಟಪಡುತ್ತಾರೆ" ಎಂದು ಶಿವಕುಮಾರ್ ಹೇಳುತ್ತಾರೆ. ಆದರೆ ನನ್ನ ಮಗನ ಮುಖದಲ್ಲಿ ಸಂತೋಷವನ್ನು ನೋಡಲು ನಾನು ಹಣವನ್ನು ನಿರ್ಲಕ್ಷಿಸುತ್ತೇನೆ ಎಂದಿದ್ದಾರೆ,

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತೆಯೇ ಸರ್ಕಾರವು ನಮಗೆ ಕ್ರೀಡೆಗಳಿಗೆ ಸಾಕಷ್ಟು ಹಣ ನೀಡಬೇಕು ಎಂದು ನಾವು ಬಯಸುತ್ತೇವೆ. ಅವರಂತೆಯೇ ಇವರು ಕೂಡ ತಮ್ಮ ತಾಯ್ನಾಡಿಗೆ ಆಡುತ್ತಾರೆ ಎಂದು ಶಿವಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com