ಹೊಸನಗರದ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್ ಗೆ ಕೀಟನಾಶಕ ಮಿಶ್ರಣ: ಸಿಎಂ ಸಿದ್ದರಾಮಯ್ಯ ತೀವ್ರ ಖಂಡನೆ

ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (DDPI) ಮಂಜುನಾಥ್ ಎಸ್ ಆರ್ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ, ಶಾಲೆಯಲ್ಲಿ ಎರಡು ನೀರಿನ ಟ್ಯಾಂಕ್‌ಗಳಿವೆ, ಒಂದು ಅಡುಗೆಮನೆಗೆ ಸಂಪರ್ಕ ಹೊಂದಿದ್ದು, ಇನ್ನೊಂದು ಕೈ ತೊಳೆಯಲು ಹೊರಗೆ ಇದೆ.
Water tank
ನೀರಿನ ಟ್ಯಾಂಕ್
Updated on

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಹೂವಿನಕೋಣೆ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ದುಷ್ಕರ್ಮಿಗಳು ಕೀಟನಾಶಕವನ್ನು ಬೆರೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮೊನ್ನೆ ಗುರುವಾರ ಬೆಳಗ್ಗೆ ಅಡುಗೆ ಸಿಬ್ಬಂದಿಗೆ ಕೆಟ್ಟ ವಾಸನೆ ಬಂದು ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (DDPI) ಮಂಜುನಾಥ್ ಎಸ್ ಆರ್ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ, ಶಾಲೆಯಲ್ಲಿ ಎರಡು ನೀರಿನ ಟ್ಯಾಂಕ್‌ಗಳಿವೆ, ಒಂದು ಅಡುಗೆಮನೆಗೆ ಸಂಪರ್ಕ ಹೊಂದಿದ್ದು, ಇನ್ನೊಂದು ಕೈ ತೊಳೆಯಲು ಹೊರಗೆ ಇದೆ.

ಅಡುಗೆಮನೆಗೆ ಸಂಪರ್ಕ ಹೊಂದಿದ ಟ್ಯಾಂಕ್‌ನಲ್ಲಿ ಕೀಟನಾಶಕ ಪತ್ತೆಯಾಗಿದೆ. ವಿದ್ಯುತ್ ಇಲ್ಲದ ಕಾರಣ ಟ್ಯಾಂಕ್ ಖಾಲಿಯಾಗಿದ್ದರಿಂದ, ಅಡುಗೆ ಸಿಬ್ಬಂದಿ ಹೊರಗಿರುವ ಟ್ಯಾಂಕ್‌ನಿಂದ ನೀರನ್ನು ತಂದು, ಹಾಲು ತಯಾರಿಸಲು ಕುದಿಸಿ, ವಿದ್ಯಾರ್ಥಿಗಳಿಗೆ ಬಡಿಸುತ್ತಿದ್ದರು. ಶಾಲೆಯಲ್ಲಿ 18 ವಿದ್ಯಾರ್ಥಿಗಳಿದ್ದು, ಘಟನೆ ನಡೆದ ದಿನ ಒಬ್ಬ ವಿದ್ಯಾರ್ಥಿ ಬಂದಿರಲಿಲ್ಲ ಎಂದರು.

ನಂತರ, ಮಧ್ಯಾಹ್ನದ ಊಟವನ್ನು ತಯಾರಿಸುವಾಗ, ಸಿಬ್ಬಂದಿ ಅಡುಗೆಮನೆಯ ಟ್ಯಾಂಕ್‌ನಿಂದ ನೀರನ್ನು ಹೊರತೆಗೆದಾಗ ಅದು ಹಾಲಿನಂತೆ ಕಾಣುತ್ತಿತ್ತು, ಮತ್ತು ವಾಸನೆ ಹೊರಸೂಸುತ್ತಿತ್ತು. ಗಾಬರಿಗೊಂಡ ಅವರು ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದರು, ಅವರು ಈ ವಿಷಯವನ್ನು ಬ್ಲಾಕ್ ಶಿಕ್ಷಣ ಅಧಿಕಾರಿ (BEO) ಗೆ ವರದಿ ಮಾಡಿದರು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಕಲುಷಿತಗೊಳ್ಳದ ಟ್ಯಾಂಕ್‌ನ ನೀರನ್ನು ಬಳಸಿ ಹಾಲು ತಯಾರಿಸಲಾಗಿದ್ದರಿಂದ ವಿದ್ಯಾರ್ಥಿಗಳನ್ನು ಮುನ್ನೆಚ್ಚರಿಕೆ ತಪಾಸಣೆಗಾಗಿ ಹೊಸನಗರ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಂಜುನಾಥ್ ಹೇಳಿದರು. ಯಾವುದೇ ಮಕ್ಕಳಿಗೆ ಅನಾರೋಗ್ಯ ಲಕ್ಷಣ ಇಲ್ಲಿಯವರೆಗೆ ಕಂಡುಬಂದಿಲ್ಲ. ಕೀಟನಾಶಕದ ಪ್ರಕಾರವನ್ನು ಗುರುತಿಸಲಾಗಿಲ್ಲ. ದೃಢೀಕರಣಕ್ಕಾಗಿ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಡಿಪಿಐ ಹೇಳಿದರು.

Water tank
ಭೀಕರ: ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ 4 ಕಾರ್ಮಿಕರ ಸಾವು!

ಸಿಎಂ ಸಿದ್ದರಾಮಯ್ಯ ಖಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಾಮೂಹಿಕ ಹಾನಿಯನ್ನುಂಟುಮಾಡುವ ಉದ್ದೇಶದಿಂದ ನಡೆಸಲಾದ ಭಯೋತ್ಪಾದಕ ಕೃತ್ಯ ಎಂದು ಕರೆದಿದ್ದಾರೆ. ಡಜನ್‌ಗಟ್ಟಲೆ ಚಿಕ್ಕ ಮಕ್ಕಳ ಹತ್ಯಾಕಾಂಡವನ್ನು ಉಂಟುಮಾಡುವ ದುರುದ್ದೇಶಪೂರಿತ ಉದ್ದೇಶದಿಂದ ನಡೆಸಲಾದ ಈ ಕೃತ್ಯವು ಯಾವುದೇ ಭಯೋತ್ಪಾದಕ ಕೃತ್ಯಕ್ಕಿಂತ ಕಡಿಮೆಯಿಲ್ಲ. ಅಡುಗೆ ಸಿಬ್ಬಂದಿಯ ಸಕಾಲಿಕ ಜಾಗರೂಕತೆಯಿಂದ ಒಂದು ದೊಡ್ಡ ದುರಂತ ತಪ್ಪಿದೆ ಎಂದಿದ್ದಾರೆ.

ಸಮಗ್ರ ತನಿಖೆ ನಡೆಸಿ, ಅಪರಾಧಿಗಳನ್ನು ಗುರುತಿಸಿ, ಕಠಿಣ ಶಿಕ್ಷೆ ವಿಧಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. 'ಕುಡಿಯುವ ನೀರಿನಲ್ಲಿ ವಿಷ ಬೆರೆಸುವ ಮನಸ್ಥಿತಿ ಮಾನವೀಯತೆಯ ಅಧಃಪತನವನ್ನು ಬಹಿರಂಗಪಡಿಸುತ್ತದೆ. ನಾವೆಲ್ಲರೂ ಇದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com