ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಮೂರು ಪಟ್ಟು ಹೆಚ್ಚಳ!

ಕಳೆದ ಎರಡು ವರ್ಷಗಳಿಂದ ನಿರ್ಣಾಯಕ ಇಸಿಜಿ ಸ್ಕ್ರೀನಿಂಗ್‌ಗಳ ಸಂಖ್ಯೆಯೂ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. 2,489 ರಿಂದ 6,767 ಕ್ಕೆ ಏರಿಕೆಯಾಗಿದೆ.
Cardiac arrest deaths tripled
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ಡಾ. ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿಯಲ್ಲಿ ದಾಖಲಾದ ಹೃದಯಾಘಾತಕ್ಕೆ ಸಂಬಂಧಿಸಿದ ಸಾವುಗಳು ಬಹುತೇಕ ಮೂರು ಪಟ್ಟು ಹೆಚ್ಚಾಗಿದ್ದು, 2023–24ರಲ್ಲಿ 229 ರಿಂದ 2024–25ರಲ್ಲಿ 608 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.

ಕಳೆದ ಎರಡು ವರ್ಷಗಳಿಂದ ನಿರ್ಣಾಯಕ ಇಸಿಜಿ ಸ್ಕ್ರೀನಿಂಗ್‌ಗಳ ಸಂಖ್ಯೆಯೂ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. 2,489 ರಿಂದ 6,767 ಕ್ಕೆ ಏರಿಕೆಯಾಗಿದೆ.

ಪ್ರಸ್ತುತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಆಘಾತಕಾರಿ ಅಂಕಿಅಂಶಗಳನ್ನು ಪ್ರಶ್ನೆಯೊಂದಕ್ಕೆ ಉತ್ತರವಾಗಿ ನೀಡಿದ್ದಾರೆ.

Cardiac arrest deaths tripled
ಹಠಾತ್ ಸಾವು 'ಅಧಿಸೂಚಿತ ಕಾಯಿಲೆ'; ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯ!

ರಾಜ್ಯದಲ್ಲಿ ವರದಿಯಾಗದ ಒಟ್ಟು ಹೃದಯಾಘಾತಗಳ ಸಂಖ್ಯೆ ಅಥವಾ ಡಾ. ಪುನೀತ್ ರಾಜ್‌ಕುಮಾರ್ ಯೋಜನೆಯ ಹೊರಗೆ ಸಂಬಂಧಿಸಿದ ಸಾವುಗಳ ಬಗ್ಗೆ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಏಕೆಂದರೆ ಇಲ್ಲಿಯವರೆಗೆ ಹೃದಯಾಘಾತವನ್ನು "ಅಧಿಸೂಚಿತ" ಕಾಯಿಲೆ ಎಂದು ಪರಿಗಣಿಸಲಾಗಿಲ್ಲ. ಈ ವರ್ಷ ಜುಲೈನಲ್ಲಿ ಮಾತ್ರ ಆರೋಗ್ಯ ಸಚಿವರು ಹೃದಯಾಘಾತ "ಅಧಿಸೂಚಿತ" ಕಾಯಿಲೆ ಎಂದು ಘೋಷಿಸಿದ್ದರು.

ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಳವಾದ ನಂತರ ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಹಠಾತ್ ಹೃದಯ ಸಂಬಂಧಿ ಘಟನೆಗಳನ್ನು ಪರಿಶೀಲಿಸಲು ಸಮಿತಿ ರಚಿಸಿದ ನಂತರ ಸಚಿವರು ಈ ಘೋಷಣೆ ಮಾಡಿದ್ದರು. ಆದಾಗ್ಯೂ, ಈ ಕುರಿತು ಸರ್ಕಾರಿ ಆದೇಶ ಇನ್ನೂ ಹೊರಡಿಸಲಾಗಿಲ್ಲ. ವರದಿಯಾದ ಹೃದಯಾಘಾತ ಪ್ರಕರಣಗಳಲ್ಲಿ ಶೇ. 75 ಕ್ಕಿಂತ ಹೆಚ್ಚು ಹೃದಯಾಘಾತದ ಅಪಾಯಕಾರಿ ಅಂಶಗಳನ್ನು ಹೊಂದಿರುವ ವ್ಯಕ್ತಿಗಳಾಗಿದ್ದು, ಹೆಚ್ಚಿನ ಕೊಡುಗೆ ನೀಡುವ ಅಂಶಗಳಲ್ಲಿ ಬೊಜ್ಜು, ಅತಿಯಾದ ಮದ್ಯಪಾನ, ಧೂಮಪಾನ ಮತ್ತು ಅಧಿಕ ರಕ್ತದೊತ್ತಡ ಸೇರಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com