ಮೈಸೂರು: ಶಾಲೆಗೆ ಹೋಗಲು ಬಸ್ಸು, ರಸ್ತೆ ಇಲ್ಲದೆ ಪ್ರತಿದಿನ 14 ಕಿ.ಮೀ. ನಡೆಯುತ್ತಿದ್ದ ಮಕ್ಕಳ ನೆರವಿಗೆ ಧಾವಿಸಿದ ಅರಣ್ಯ ಇಲಾಖೆ!

'ಬಸ್ಸುಗಳಿಲ್ಲ, ರಸ್ತೆಗಳಿಲ್ಲ, ವಿದ್ಯಾರ್ಥಿಗಳು ಶಾಲೆಗೆ ಹೋಗಲು 14 ಕಿ.ಮೀ ನಡೆಯಬೇಕು' ಎಂಬ ಶೀರ್ಷಿಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿದ ಕೆಲವು ದಿನಗಳ ನಂತರ, ಅರಣ್ಯ ಇಲಾಖೆಯ ಎಂಎಂ ವನ್ಯಜೀವಿ ವಿಭಾಗವು ತಕ್ಷಣ ನೆರವಿಗೆ ಧಾವಿಸಿದೆ.
14 km trek to school: Forest dept comes to the aid of kids
ಸಫಾರಿ ವಾಹನದೊಂದಿಗೆ ಮಕ್ಕಳು
Updated on

ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಚೇದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಮತ್ತು ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಪ್ರತಿದಿನ 14 ಕಿ.ಮೀ ನಡೆದುಕೊಂಡು ಹೋಗುತ್ತಿದ್ದರು.

'ಬಸ್ಸುಗಳಿಲ್ಲ, ರಸ್ತೆಗಳಿಲ್ಲ, ವಿದ್ಯಾರ್ಥಿಗಳು ಶಾಲೆಗೆ ಹೋಗಲು 14 ಕಿ.ಮೀ ನಡೆಯಬೇಕು' ಎಂಬ ಶೀರ್ಷಿಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿದ ಕೆಲವು ದಿನಗಳ ನಂತರ, ಅರಣ್ಯ ಇಲಾಖೆಯ ಎಂಎಂ ವನ್ಯಜೀವಿ ವಿಭಾಗವು ತಕ್ಷಣ ನೆರವಿಗೆ ಧಾವಿಸಿದೆ.

ಪಚೇದೊಡ್ಡಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಬೆಳಗ್ಗೆ ಅವರ ಶಾಲೆಗಳಿಗೆ ಕರೆದೊಯ್ಯಲು ಮತ್ತು ಸಂಜೆ ಅವರನ್ನು ಮರಳಿ ಮನೆಗೆ ಕರೆತರಲು ಅರಣ್ಯ ಅಧಿಕಾರಿಗಳು ಮಂಗಳವಾರ ಸಫಾರಿ ವಾಹನದ ವ್ಯವಸ್ಥೆ ಮಾಡಿದ್ದಾರೆ.

14 km trek to school: Forest dept comes to the aid of kids
ಮೈಸೂರು: ಉದ್ಯಮಿ ಅಪಹರಣ; ಸಿನಿಮೀಯ ರೀತಿಯಲ್ಲಿ ಪೊಲೀಸರ ಕಾರ್ಯಾಚರಣೆ; 4 ಗಂಟೆಯಲ್ಲೇ ರಕ್ಷಣೆ, ಐವರ ಬಂಧನ!

ಈ ಕುರಿತು TNIE ಜೊತೆ ಮಾತನಾಡಿದ MM ವನ್ಯಜೀವಿ ವಿಭಾಗದ ಡಿಸಿಎಫ್ ಭಾಸ್ಕರ್ ಬಿ, ವಿದ್ಯಾರ್ಥಿಗಳ ವಿಚಾರದಲ್ಲಿ ಇಲಾಖೆ ತ್ವರಿತವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದ್ದಾರೆ.

"ಈ ಹಿಂದೆ, ಇದೇ ರೀತಿಯ ಉಪಕ್ರಮವಿತ್ತು. ಆದರೆ ಅದನ್ನು ಸ್ಥಗಿತಗೊಳಿಸಲಾಗಿತ್ತು. ನಾವು ಈಗ ಅದನ್ನು ಪುನರುಜ್ಜೀವನಗೊಳಿಸಿದ್ದೇವೆ. ಈ ಬಗ್ಗೆ ನಾನು ಜಿಲ್ಲಾಧಿಕಾರಿಗೆ ಮಾಹಿತಿ ಅವರು ಶೀಘ್ರದಲ್ಲೇ ಶಾಶ್ವತ ವಾಹನವನ್ನು ಒದಗಿಸಲು ಒಪ್ಪಿಕೊಂಡಿದ್ದಾರೆ. ಅಲ್ಲಿಯವರೆಗೆ, ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲು ಸಫಾರಿ ವಾಹನವನ್ನು ಬಳಸಲಾಗುವುದು" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com