ಬೆಂಗಳೂರು: CSR ಅಡಿಯಲ್ಲಿ ಅಭಿವೃದ್ಧಿ; ಮರಳಿ ಗತವೈಭವ ಪಡೆದ 'ಕನೆಕಲ್ಲು' ಕೆರೆ!

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ, ಬೆಂಗಳೂರಿನ ಯುನೈಟೆಡ್ ವೇ ಸಹಭಾಗಿತ್ವದಲ್ಲಿ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು.
Kanekallu Lake
ಕನೆಕಲ್ಲು ಕೆರೆ
Updated on

ಬೆಂಗಳೂರು: ಕೆರೆ ಪುನರುಜ್ಜೀವನ ಮತ್ತು ಅಭಿವೃದ್ಧಿ ಚಟುವಟಿಕೆಗಳಿಂದಾಗಿ ವಾಗಟ ಗ್ರಾಮ ಪಂಚಾಯತ್‌ನಲ್ಲಿರುವ 21.33 ಎಕರೆ ವಿಸ್ತೀರ್ಣದ ಕನೆಕಲ್ಲು ಕೆರೆ ಮರಳಿ ಗತ ವೈಭವವನ್ನು ಪಡೆದಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ, ಬೆಂಗಳೂರಿನ ಯುನೈಟೆಡ್ ವೇ ಸಹಭಾಗಿತ್ವದಲ್ಲಿ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು.

ಕೆರೆ ಅಭಿವೃದ್ಧಿಯಿಂದಾಗಿ ನೀರಿನ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು 62 ಮಿಲಿಯನ್ ಲೀಟರ್‌ಗಳಿಂದ 92 ಮಿಲಿಯನ್ ಲೀಟರ್‌ಗಳಿಗೆ ಹೆಚ್ಚಿದೆ. ತುಂಬಿ ತುಳುಕುತ್ತಿರುವ ಈ ಕೆರೆಯಿಂದಾಗಿ ಸುತ್ತಲಿನ 16 ಹಳ್ಳಿಗಳಿಗೆ ಪ್ರಯೋಜನವಾಗಿದೆ.

Kanekallu Lake
ಕನೆಕಲ್ಲು ಕೆರೆ

ಕೆರೆಯಲ್ಲಿ ದೊಡ್ಡ ಪ್ರಮಾಣದ ಹೂಳು ತೆಗೆಯಲಾಗಿದೆ. 535 ಮೀಟರ್ ಮುಖ್ಯ ಒಡ್ಡು ಮತ್ತು 1,310 ಮೀಟರ್ ಬಾಹ್ಯ ಕಟ್ಟೆಗಳನ್ನು ಬಲಪಡಿಸುವುದು ಮತ್ತು ನೀರಿನ ಹರಿವಿನ ಮಾರ್ಗಗಳ ಪುನಃಸ್ಥಾಪಿಸಲಾಗಿದೆ. ಸುಮಾರು 180 ಘನ ಮೀಟರ್ ಪೌಷ್ಟಿಕ-ಸಮೃದ್ಧ ಹೂಳನ್ನು ಹತ್ತಿರದ ರೈತರಿಗೆ ಮರುಹಂಚಿಕೆ ಮಾಡಲಾಯಿತು, ಇದು ಕೃಷಿ ಉತ್ಪಾದಕತೆ ಮತ್ತು ಮಣ್ಣಿನ ಪುಷ್ಟೀಕರಣಕ್ಕೆ ಸಹಾಯ ಮಾಡುತ್ತದೆ.

Kanekallu Lake
ಕಗ್ಗದಾಸಪುರ ಕೆರೆ 47 ಎಕರೆ ಭಾಗ ಅಭಿವೃದ್ಧಿ: 10.85 ಕೋಟಿ ರೂ ವೆಚ್ಚ!

ಪುನರುಜ್ಜೀವನಗೊಂಡ ಕೆರೆಯಿಂದ ಅಂತರ್ಜಲ ಮರುಪೂರಣ, ಮಣ್ಣಿನ ತೇವಾಂಶ ಮಟ್ಟದಲ್ಲಿ ಸುಧಾರಣೆಯಾಗಲಿದೆ. ಸುತ್ತಮುತ್ತಲಿನ ಹಳ್ಳಿಗಳಿಗೆ ದೀರ್ಘಕಾಲದ ವರೆಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ಒಂದು ವರ್ಷದಲ್ಲಿ ಕೆರೆ ಸುತ್ತಲೂ 2,000 ಸಸಿಗಳನ್ನು ನೆಡಲಾಗಿದ್ದು, ಜಲಚರ ಜೀವವೈವಿಧ್ಯತೆಯನ್ನು ಬೆಂಬಲಿಸಲು 20,000 ಮೀನುಗಳನ್ನು ಸರೋವರಕ್ಕೆ ಬಿಡಲಾಗಿದೆ.

ಈ ಕ್ರಮದಿಂದಾಗಿ 16 ಹಳ್ಳಿಗಳ ರೈತರು, ಯುವಕರು ಮತ್ತು ನಿವಾಸಿಗಳಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ, ಇದರಿಂದ ಜೀವನೋಪಾಯ ಮತ್ತು ಹೆಚ್ಚಿನ ಪರಿಸರ ಸ್ಥಿತಿಸ್ಥಾಪಕತ್ವಕ್ಕೆ ಕೊಡುಗೆ ನೀಡುತ್ತದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com