ಸಾಕುನಾಯಿ ಹಠಾತ್ ಸಾವು: ಮನನೊಂದು ಮಾಲೀಕ ಆತ್ಮಹತ್ಯೆ

ಹೆಗ್ಗಡದೇವನಪುರ ಗ್ರಾಮದ ನಿವಾಸಿ ರಾಜಶೇಖರ್ (33ವ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Dog died by suicide
ಮೃತಪಟ್ಟಿದ್ದ ನಾಯಿ
Updated on

ನೆಲಮಂಗಲ: ತನ್ನ ಸಾಕುನಾಯಿಯ ಹಠಾತ್ ಸಾವಿನಿಂದ ಮನನೊಂದ ನಾಯಿಯ ಮಾಲೀಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ನಡೆದಿದೆ.

ಹೆಗ್ಗಡದೇವನಪುರ ಗ್ರಾಮದ ನಿವಾಸಿ ರಾಜಶೇಖರ್ (33ವ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂಬತ್ತು ವರ್ಷಗಳ ಹಿಂದೆ, ರಾಜಶೇಖರ್ ಅವರು ಜರ್ಮನ್ ಶೆಫರ್ಡ್ ನಾಯಿಯನ್ನು ಖರೀದಿಸಿದ್ದರು. ಅದಕ್ಕೆ "ಬೌನ್ಸಿ" ಎಂದು ಹೆಸರಿಟ್ಟಿದ್ದರು. ಅದನ್ನು ಪ್ರೀತಿಯಿಂದ ಪೋಷಿಸುತ್ತಾ ಕುಟುಂಬದ ಸದಸ್ಯರಂತೆ ಪರಿಗಣಿಸಿದ್ದರು. ದುರದೃಷ್ಟವಶಾತ್, ಬೌನ್ಸಿ ಅನಾರೋಗ್ಯದ ಕಾರಣ ಕಳೆದ ಮಂಗಳವಾರ ನಿಧನವಾಯಿತು.

Dog died by suicide
ಸಾಕುಪ್ರಾಣಿ ಮಾಲೀಕರ ಜವಾಬ್ದಾರಿಯನ್ನು ನಿಗದಿಪಡಿಸಲು ನಿಯಮಗಳ ಅಗತ್ಯವಿದೆ: ಕರ್ನಾಟಕ ಹೈಕೋರ್ಟ್

ರಾಜಶೇಖರ್ ತಮ್ಮ ಜಮೀನಿನಲ್ಲಿ ನಾಯಿಯ ಅಂತ್ಯಕ್ರಿಯೆ ನಡೆಸಿ ಮನೆಗೆ ಮರಳಿದ್ದರು. ಮನೆಗೆ ಬಂದ ಮೇಲೆ ತೀವ್ರ ಖಿನ್ನತೆಯಿಂದ ಇದ್ದರು. ಮರುದಿನ ನಾಯಿಯ ಕುತ್ತಿಗೆ ಸರಪಳಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com