ಕಾಫಿ ಎಸ್ಟೇಟ್‌ಗಳಿಂದ ಸೆರೆ ಹಿಡಿದ ಆನೆಗಳಿಗೆ ಪ್ರತ್ಯೇಕ ಸ್ಥಳ: ಅರಣ್ಯ ಸಚಿವ ಖಂಡ್ರೆ

ಇಲಾಖೆ ಪ್ರಸ್ತಾಪಿಸಿರುವ ಸ್ಥಳ ಭದ್ರಾ ವನ್ಯಜೀವಿಧಾಮದಲ್ಲಿದೆ. ಅಲ್ಲದೆ, ಇದಕ್ಕಾಗಿ 100 ಕೋಟಿ ರೂಪಾಯಿ ಬಜೆಟ್‌ನ ಅಗತ್ಯವಿದ್ದು, ಅನುಮೋದನೆಗಾಗಿ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಖಂಡ್ರೆ ತಿಳಿಸಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ
ಅರಣ್ಯ ಸಚಿವ ಈಶ್ವರ್ ಖಂಡ್ರೆ
Updated on

ಬೆಂಗಳೂರು: ಕಾಫಿ ಎಸ್ಟೇಟ್‌ಗಳಿಂದ ಸೆರೆಹಿಡಿಯಲಾದ ಆನೆಗಳನ್ನು ಇರಿಸಲು ಪ್ರತ್ಯೇಕ ಸ್ಥಳ ಗುರುತಿಸಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಬಿ ಖಂಡ್ರೆ ಅವರು ಹೇಳಿದ್ದಾರೆ.

ಇಲಾಖೆ ಪ್ರಸ್ತಾಪಿಸಿರುವ ಸ್ಥಳ ಭದ್ರಾ ವನ್ಯಜೀವಿಧಾಮದಲ್ಲಿದೆ. ಅಲ್ಲದೆ, ಇದಕ್ಕಾಗಿ 100 ಕೋಟಿ ರೂಪಾಯಿ ಬಜೆಟ್‌ನ ಅಗತ್ಯವಿದ್ದು, ಅನುಮೋದನೆಗಾಗಿ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಖಂಡ್ರೆ ತಿಳಿಸಿದ್ದಾರೆ.

ಕಾಫಿ ಎಸ್ಟೇಟ್‌ಗಳಿಂದ ಸೆರೆ ಹಿಡಿಯುವ ಆನೆಗಳನ್ನು ಇರಿಸಲು ಮೀಸಲಾದ ಪ್ರತ್ಯೇಕ ಜಾಗವನ್ನು ಗುರುತಿಸಲಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ
ದೀರ್ಘಾವಧಿ ಗುತ್ತಿಗೆ ಬಾಕಿ ಉಳಿದಿರುವ ಅತಿಕ್ರಮಿತ ಅರಣ್ಯ ಭೂಮಿ ವಶಕ್ಕೆ: ಸಚಿವ ಈಶ್ವರ್ ಖಂಡ್ರೆ

"ಕಾಫಿ ಎಸ್ಟೇಟ್‌ಗಳಲ್ಲಿ ವಾಸಿಸುವ ಆನೆಗಳು, ಕೆಲವು ಎರಡನೇ ಅಥವಾ ಮೂರನೇ ತಲೆಮಾರಿನವಾಗಿದ್ದು, ಅವು ಅರಣ್ಯ ಪ್ರದೇಶವನ್ನು ನೋಡಿಲ್ಲ. ಅವುಗಳನ್ನು ಸೆರೆಹಿಡಿದು ಕಾಡಿಗೆ ಬಿಡಲಾಗುವುದಿಲ್ಲ. ಅವುಗಳನ್ನು ಆನೆ ಶಿಬಿರಗಳಲ್ಲಿ ಇರಿಸಲು ಸಾಧ್ಯವಿಲ್ಲ. ಹಾಗಾಗಿ ಐಐಎಸ್‌ಸಿ ಸೇರಿದಂತೆ ಆನೆ ತಜ್ಞರನ್ನೊಳಗೊಂಡ ಸಮಿತಿಯು ಕಾಫಿ ಎಸ್ಟೇಟ್‌ಗಳಿಂದ ಸೆರೆಹಿಡಿಯಲಾದ ಆನೆಗಳನ್ನು ಕಾಡಿಗೆ ಬಿಡುವ ಮುನ್ನ ಸಮೀಪದ ಅರಣ್ಯ ಪ್ರದೇಶಕ್ಕೆ ಒಗ್ಗುವಂತೆ ಮಾಡಲು ಅರಣ್ಯ ಪ್ರದೇಶಕ್ಕೆ ಸಮಾನವಾದ ಜಾಗವನ್ನು ಗುರುತಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಇತರ ಆಫ್ರಿಕನ್ ಮತ್ತು ಆಗ್ನೇಯ ಪ್ರದೇಶಗಳಲ್ಲಿ ಇದೇ ರೀತಿಯ ಪ್ರತ್ಯೇಕ ಜಾಗವನ್ನು ಮಾಡಲಾಗಿದ್ದು, ದಕ್ಷಿಣ ಭಾರತ ಮತ್ತು ಕರ್ನಾಟಕದಲ್ಲಿ ಇದನ್ನು ಮೊದಲ ಬಾರಿ ಮಾಡಲಾಗುತ್ತದೆ. ಸಮಸ್ಯಾತ್ಮಕ ಆನೆಗಳನ್ನು ಕ್ರಾಲ್ ಪ್ರದೇಶಗಳಲ್ಲಿ ಇರಿಸಲಾಗುವುದು. ನಾವು ಎಲ್ಲಾ ಆನೆಗಳನ್ನು ಕ್ರಾಲ್‌ಗಳಲ್ಲಿ ಇರಿಸಲು ಸಾಧ್ಯವಿಲ್ಲ ಮತ್ತು ಅದರ ಅಗತ್ಯವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com