ಹೆಬ್ಬಗೋಡಿ ಕೆರೆ ಒತ್ತುವರಿ: ಮೂವರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ

ಫೆಬ್ರವರಿ 22, 2012 ರಂದು ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 192(A) ಅಡಿಯಲ್ಲಿ ಅವರ ವಿರುದ್ಧ BMTF ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಯಿತು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಕೆರೆ ಜಮೀನಿನ ಒಂದು ಭಾಗವನ್ನು ಅತಿಕ್ರಮಿಸಿ ಅಲ್ಲಿ ಶೌಚಾಲಯ ಮತ್ತು ಮನೆಗಳನ್ನು ನಿರ್ಮಿಸಿದ್ದಕ್ಕಾಗಿ ಕರ್ನಾಟಕ ಭೂ ಅತಿಕ್ರಮಣ ನಿಷೇಧ ವಿಶೇಷ ನ್ಯಾಯಾಲಯವು ಮೂವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಎಂ ವೆಂಕಟೇಶ್, ಎಚ್ ಎಂ ಸುಬ್ಬಣ್ಣ ಮತ್ತು ಲಕ್ಷ್ಮಿ ದೇವಿ ಎಂಬುವರು ಕೆರೆ ಜಮೀನನ್ನು ಅತಿಕ್ರಮಣ ಮಾಡಿದ್ದರು. ನ್ಯಾಯಾಲಯವು ಅವರಿಗೆ 5,000 ರೂ. ದಂಡವನ್ನು ಪಾವತಿಸಲು ಆದೇಶಿಸಿದೆ.

ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಅಧಿಕಾರಿಗಳು, ವೆಂಕಟೇಶ್, ಸುಬ್ಬಣ್ಣ, ಲಕ್ಷ್ಮಿ ದೇವಿ ಮತ್ತು ಇತರರು ಹೆಬ್ಬಗೋಡಿಯಲ್ಲಿ ಸರ್ವೆ ಸಂಖ್ಯೆ 159 ಹೊಂದಿರುವ 32 ಎಕರೆ 13 ಗುಂಟೆ ಕೆರೆ ಭೂಮಿಯನ್ನು ಅತಿಕ್ರಮಣ ಮಾಡಿ ಅಲ್ಲಿ ಶೌಚಾಲಯ ಮತ್ತು ಮನೆಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.

ಫೆಬ್ರವರಿ 22, 2012 ರಂದು ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 192(A) ಅಡಿಯಲ್ಲಿ ಅವರ ವಿರುದ್ಧ BMTF ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಯಿತು. ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಿದ ನಂತರ, ಬೆಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು.

ಅವರ ವಿಚಾರಣೆಯ ಸಮಯದಲ್ಲಿ, ಅವರು ಕೆರೆ ಭೂಮಿಯನ್ನು ಕಬಳಿಸಿದ್ದಾರೆ ಎಂದು ಸಾಬೀತಾಯಿತು. ಡಿಸೆಂಬರ್ 13, 2024 ರಂದು ಮೂವರು ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು" ಎಂದು ತಿಳಿಸಿದೆ. BMTF ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ. ರಾಜು ಪ್ರಕರಣದ ತನಿಖೆ ನಡೆಸಿದರು.

Representational image
ಸಾರ್ವಜನಿಕ ಆಸ್ತಿಗಳ ಒತ್ತುವರಿ ತಡೆಯುವ ಉದ್ದೇಶದಿಂದ ಭೂಕಂದಾಯ ಕಾಯ್ದೆಗೆ ತಿದ್ದುಪಡಿ: ಕೃಷ್ಣ ಬೈರೇಗೌಡ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com